ಲಾಕ್ಡೌನ್ ಪರಿಹಾರವಲ್ಲ, ಲಾಕ್ಡೌನ್ ಮಾಡಲ್ಲ – ಗೃಹ ಸಚಿವರ ಮಾತು.
ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಲಾಕ್ ಡೌನ್ ಪರಿಹಾರವಲ್ಲ, ಲಾಕ್ಡೌನ್ ಮಾಡುವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋದರೆ ಕಠಿಣ ಕ್ರಮ ಕೈಗೊಳ್ಳುವ ಯೋಚನೆ ಮಾಡಬೇಕಾಗುತ್ತದೆ. ಸೋಂಕು ಉಲ್ಬಣಗೊಂಡ ತಕ್ಷಣ ಲಾಕ್ಡೌನ್ ಮಾಡುವ ಯೋಚನೆ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
ವಿಧಾನಸೌಧ ಬಳಿ ಮಾತನಾಡಿದ ಗೃಹ ಸಚಿವರು ಕಾಂಗ್ರೇಸ್, ಪಾದಯಾತ್ರೆ ಮಾಡಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೆ ಹೆಚ್ಚು ಪಾದಯಾತ್ರೆಯೇ ಕಾಂಗ್ರೇಸ್ ಮಾರಕವಾಗಿದೆ ಎಂದು ಹೇಳಿದರು . ಐದು ವರ್ಷ ಅಧಿಕಾರದಲ್ಲಿದ್ದಾಗ ನಮ್ಮ ನೀರು ನಮ್ಮ ಹಕ್ಕು ಅನ್ನೋದು ಅವರಿಗ ನೆನಪೆ ಆಗಲಿಲ್ಲ ಕಾಂಗ್ರೇಸ್ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು.
ಅಲ್ಲದೆ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಕುರಿತು ಮಾತನಾಡಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಎಫ್ ಐ ಆರ್ ದಾಖಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಯಾರೇ ಪಾಲ್ಗೊಂಡರೂ ಸಮರ್ಥನೀಯವಲ್ಲ ಎಂದು ತಿಳಿಸಿದರು.