ನಿದ್ರೆ ಮಾತ್ರೆ ನೀಡಿ ಪ್ರಿಯಕರನ ಕತ್ತು ಸೀಳಿದ ಪ್ರಿಯತಮೆ LOVER ..!
ಬಳ್ಳಾರಿ : ಪ್ರಿಯಕರನಿಗೆ ನಿದ್ರೆ ಮಾತ್ರೆ ನೀಡಿ ಪ್ರೇಯಸಿಯೇ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬಳ್ಳಾರಿಯ ತೋರಣಗಲ್ಲುವಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
30 ವರ್ಷದ ಆಶಿಷ್ ಡೇ ಮೃತ ವ್ಯಕ್ತಿಯಾಗಿದ್ದು, ಕೊಲೆ ಆರೋಪಿಗಳಾ ಮಾಯಾ, ಮುತ್ತುಸ್ವಾಮಿ, ರಮೇಶ್ ಎಂಬುವವರನ್ನ ಬಂಧಿಸಲಾಗಿದೆ. ಆಶಿಷ್ ಹತ್ಯೆ ಬಳಿಕ ಪ್ರಿಯತಮೆ ಮಾಯಾ ಪರಾರಿಯಾಗಿದ್ದಾಳೆ.
ಕೊಲೆ ಪ್ರಕರಣ 4 ದಿನದ ಬಳಿಕ ಬೆಳಕಿಗೆ ಬಂದಿದ್ದು, ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಬಾಬಾ ನಗರದ ನಿವಾಸದಲ್ಲಿ ಆಶಿಷ್ ಡೇಯೊಂದಿಗೆ ಪ್ರಿಯತಮೆ ನೆಲೆಸಿದ್ದಳು.
ಆದರೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿದ್ದು, ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಇನ್ನು ಕೊಲೆಗೆ ಸಹಕರಿಸಿದ ಮುತ್ತುಸ್ವಾಮಿ ಹಾಗೂ ರಮೇಶ್ ಎಂಬುವರನ್ನು ತೋರಣಗಲ್ಲು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.