ಇಂದೋರ್ ನಲ್ಲಿ ಭಿಕ್ಷೆ ಬೇಡುತ್ತಿದ್ದಾನೆ ಕೋಟ್ಯಾಧಿಪತಿ
ಮಧ್ಯಪ್ರದೇಶ : ನಾವು ಬೀದಿಗಳಲ್ಲಿ ಎಷ್ಟೋ ಮಂದಿ ಭಿಕ್ಷುರನ್ನ ನೋಡುತ್ತಿರುತ್ತೇವೆ. ಅವರಿಗೆ ನಮ್ಮ ಕೈಯಲ್ಲಾದ ಸಹಾಯ ಮಾಡುತ್ತೇವೆ.
ಆದ್ರೆ ಅವರ ಯಾರು..? ಅವರ ಹಿನ್ನೆಲೆ ಏನು ಅಂತಾ ವಿಚಾರಿಸೋಕೆ ಹೋಗಲ್ಲ. ಆದ್ರೆ ಇಂದೋರ್ ನಲ್ಲಿ ಹೀಗೆ ವಿಚಾರಿಸಿದ ಎನ್ ಜಿಒ ಕಾರ್ಯಕರ್ತರಿಗೆ ಬಿಗ್ ಶಾಕ್ ಎದುರಾಗಿದೆ.
ಯಾಕೆಂದ್ರೆ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧ ಕೋಟ್ಯಾಧಿಪತಿಯಾಗಿದ್ದ.
ಹೌದು..! ಭಿಕ್ಷುಕನಾಗಿರುವ ವೃದ್ಧನ ಹೆಸರು ರಮೇಶ್ ಯಾದವ್. ಈತ ಇಂದೋರ್ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದನ್ನ ಕಂಡ ಎನ್ ಜಿಒ ಕಾರ್ಯಕರ್ತರು ನಿರ್ಗತಿಕರಿಗೆ ಮೀಸಲಾಗಿರುವ ಆಶ್ರಮಕ್ಕೆ ಕರೆತಂದು ಆರೈಕೆ ಮಾಡುತ್ತಿದ್ದರು.
ನಂತರ ಆತನಿಂದ ಕುಟುಂಬಸ್ಥರ ಮಾಹಿತಿ ಪಡೆದು ಅವರನ್ನ ಸಂಪರ್ಕಿಸಿದಾಗ ರಮೇಶ್ ಕೋಟ್ಯಾಧಿಪತಿ ಅಂತಾ ತಿಳಿದುಬಂದಿದೆ.
ರಮೇಶ್ ಅವರಿಗೆ ದೊಡ್ಡ ಬಂಗಲೆ ಮತ್ತು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ ಅನ್ನೋದು ತಿಳಿಯುತ್ತಿದ್ದಂತೆ ಎನ್ ಜಿಜಿ ಕಾರ್ಯಕರ್ತರು ಬೆರಗಾಗಿದ್ದಾರೆ.
ರಮೇಶ್ ಗೆ ಕುಡಿತದ ಚಟವಿದ್ದು, ಅದನ್ನು ತ್ಯಜಿಸಲು ಒಪ್ಪದ ಕಾರಣ ಮನೆಯಿಂದ ಹೊರದಬ್ಬಲ್ಪಟ್ಟಿದ್ದರಂತೆ. ಇದೀಗ ರಮೇಶ್ ಅವರು ಕುಡಿತ ಬಿಡಲು ನಿರ್ಧರಿಸಿದ್ದು, ಸದ್ಯ ಮನೆ ಸೇರಿದ್ದಾರೆ ಅಂತ ತಿಳಿದುಬಂದಿದೆ.