1993 ಮುಂಬೈಬ್ಲಾಸ್ಟ್ ರುವಾರಿಗಳಿಗೆ ಪಾಕ್ ನಲ್ಲಿ 5-ಸ್ಟಾರ್ ಆತಿಥ್ಯ
1993 ರ ಮುಂಬೈ ಬ್ಲಾಸ್ಟ್ ದಾಳಿಯ ಹೊಣೆ ಹೊತ್ತಿರುವ ಡಿ ಕಂಪನಿ ಮುಖ್ಯಸ್ಥ ದಾವೂದ್ ಇಬ್ರಾಹಿಂ ಪಾಕಿಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದು, ಅಲ್ಲಿನ ಸರ್ಕಾರ ಕೇವಲ ರಕ್ಷಣೆಯಲ್ಲ ರಾಜಾತಿಥ್ಯ ನೀಡಲಾಗುತ್ತಿದೆ. ಎಂದು ಭಾರತ ಯು ಎನ್ ನಲ್ಲಿ ಹೇಳಿದೆ.
ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ ಎಸ್ ತಿರುಮೂರ್ತಿ ಅವರು ಗ್ಲೋಬಲ್ ಕೌಂಟರ್ ಟೆರರಿಸಂ ಕೌನ್ಸಿಲ್ ಆಯೋಜಿಸಿದ್ದ ಅಂತರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮ್ಮೇಳನ 2022ರಲ್ಲಿ ಭಯೋತ್ಪಾದನೆ ಮತ್ತು ಅಂತರಾಷ್ಟ್ರೀಯ ಸಂಘಟಿತ ಅಪರಾಧಗಳ ನಡುವಿನ ಸಂಪರ್ಕವನ್ನು ಸಂಪೂರ್ಣವಾಗಿ ಗುರುತಿಸಬೇಕು ಮತ್ತು ತೀವ್ರವಾಗಿ ಪರಿಹರಿಸಬೇಕು ಎಂದು ಹೇಳಿದರು.
“1993 ರ ಮುಂಬೈ ಬಾಂಬ್ ಸ್ಫೋಟಕ್ಕೆ ಕಾರಣವಾದ ಅಪರಾಧಿಗಳಿಗೆ ರಕ್ಷಣೆ ಮಾತ್ರವಲ್ಲದೆ. 5-ಸ್ಟಾರ್ ಆತಿಥ್ಯವನ್ನು ಆನಂದಿಸುವುದನ್ನು ನಾವು ನೋಡಿದ್ದೇವೆ” ಎಂದು ಅವರು ಹೇಳಿದರು.
ತಿರುಮೂರ್ತಿಯವರ ಹೇಳಿಕೆಗಳು ಡಿ-ಕಂಪನಿ ಮತ್ತು ಅದರ ಮುಖ್ಯಸ್ಥ ಇಬ್ರಾಹಿಂ, ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದಾನೆ ಎಂದು ಸೂಚಿಸುವಂತಹ ಹೇಳಿಕೆಯಾಗಿದೆ.
ಆಗಸ್ಟ್ 2020 ರಲ್ಲಿ, 88 ನಿಷೇಧಿತ ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಸರ್ಕಾರವು ವ್ಯಾಪಕ ನಿರ್ಬಂಧಗಳನ್ನು ವಿಧಿಸಿದ ನಂತರ, ಪಾಕಿಸ್ತಾನವು ತನ್ನ ನೆಲದಲ್ಲಿ ಇಬ್ರಾಹಿಂನ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿಕೊಂಡಿತು,