ಯುವತಿ ವಿಚಾರಕ್ಕೆ ಮಸಣ ಸೇರಿದನಾ ಯುವಕ!?
ಕಲಬುರಗಿ: ಯುವಕ ಬೆನ್ನಿಗೆ ಚಾಕು ಇರಿದು ಕೊಲೆ ಮಾಡಿ, ಹಂತಕರು ಪರಾರಿಯಾಗಿರುವ ಘಟನೆ ಕಲಬುರಗಿ ನಗರದ ಎಂಎಸ್ಕೆ ಮಿಲ್ ಬಳಿ ನಡೆದಿದೆ.
ಸೋಹೆಲ್ (21) ಕೊಲೆಯಾದ ದುರ್ದೈವಿ. ಹಂತರಕರು ಯುವಕನ ಬೆನ್ನಿಗೆ ಮತ್ತು ಎದಗೆ ಚಾಕು ಇರಿದು ಬರ್ಬರವಾಗಿ ಕೊಲೆ ಮಾಡಿದ್ದು, ಯುವಕ ಬೆನ್ನಲ್ಲೇ ಚಾಕು ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯು ಯುವತಿಯ ವಿಚಾರಕ್ಕೆ ನಡೆದಿದೆ ಎಂದು ಶಂಕಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಈ ಸಂಬಂದ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗಡುಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಹಂತಕರ ಪತ್ತೆಯಾದ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ