ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಣೆ – ಆಟೋದಲ್ಲೇ ನರಳಾಡಿದ ಸೋಂಕಿತೆ
ಮೈಸೂರು : ಆಕ್ಸಿಜನ್ ಇಲ್ಲ , ಮಾಸ್ಕ್ ಇಲ್ಲ ಎಂಬ ನೆಪವೊಡ್ಡಿ ಆಸ್ಪತ್ರೆ ಸಿಬ್ಬಂದಿ ಸೋಂಕಿತೆಯನ್ನ ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ ಆಸ್ಪತ್ರೆ ಹೊರಗೆ .ಅಟೋ ರಿಕ್ಷಾದಲ್ಲಿಯೇ ಸೋಂಕಿತೆ ನರಳಾಡಿದ ದೃಶ್ಯ ಮೈಸೂರಿನಲ್ಲಿ ಕಂಡುಬಮದಿದೆ.
ಹಣ ಕೊಡುತ್ತೇವೆ ದಾಖಲಿಸಿಕೊಳ್ಳಿ ಎಂದು ಸೋಂಕಿತರ ಸಂಬಂಧಿ. ಎಷ್ಟೇ ಬೇಡಿಕೊಂಡರೂ ನಮ್ಮ ಆಸ್ಪತ್ರೆಯಲ್ಲೆ ಅಕ್ಸಿಜನ್ ಮಾಸ್ಕ್ ಇಲ್ಲ ಎಂಬ ಕಾರಣ ನೀಡಿ ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆ ಮುಂಭಾಗ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಬೆಡ್ ಗಾಗಿ ಮೂರು ಆಸ್ಪತ್ರೆ ಸುತ್ತಿ ಬಂದರೂ ಎಲ್ಲೂ ಬೆಡ್ ಸಿಗದೇ ಸೋಂಕಿತೆ ನರಳಾಡಿದ್ಧಾರೆ.
ಮೈಸೂರಿನ ಭೋಗಾದಿಯ ರಾಜಮ್ಮ ಎಂಬ ಸೋಂಕಿತೆ. ಉಸಿರಾಟದ ಸಮಸ್ಯೆಯಿಂದ ನರಳಾಡಿದ್ದಾರೆ. ಬಳಿಕ ಬೇರೆಡೆ ಮಾಸ್ಕ್ ತಂದು ದಾಖಲಾತಿಗೆ ಸಂಬಂಧಿಸಿಕರು ಅಂಗಲಾಚಿ ಬೇಡಿಕೊಂಡ ಸತತ 3 ಗಂಟೆ ನಂತರ ಸೋಂಕಿತೆಯನ್ನ ದಾಖಲಿಸಿಕೊಳ್ಳಲು ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.