ಪ್ರಧಾನಿ ಭದ್ರತಾ ಲೋಪ – ಫಿರೋಜಪುರ ವರಿಷ್ಠಾಧಿಕಾರಿ ದೋಷಿ ಎಂದ ಸುಪ್ರೀಂ..
ಪಂಜಾಬ್ ನ ಫಿರೋಜ್ ಪುರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀಪು ನೀಡಿದೆ. ವರದಿಯಲ್ಲಿ ಅಂದಿನ ಜಿಲ್ಲಾ ವರಿಷ್ಠಾಧಿಕಾರಿ ಹರ್ದೀಪ್ ಭನ್ಸ್ ಅವರನ್ನ ಕೋರ್ಟ್ ದೋಷಿಯನ್ನಾಗಿಸಿದೆ.
ಸಾಕಷ್ಟು ಮತ್ತು ಪಡೆಗಳು ಲಭ್ಯವಿದ್ದರೂ ತಮ್ಮ ಕರ್ತವ್ಯವನ್ನ ನಿರ್ವಹಿಸಲು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ವರದಿಯನ್ನ ಕೇಂದ್ರ ಮತ್ತು ಪಂಜಾಬ್ ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ತನಿಖೆಗಾಗಿ ಸಮಿತಿಯನ್ನ ರಚಿಸಲಾಗಿತ್ತು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭದ್ರತಾ ಲೋಪ
ಪ್ರಧಾನಿಯವರಿಗೆ ಭದ್ರತೆ ಲೋಪವಾದಾಗ ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಚರಂಜಿತ್ ಚನ್ನಿ ಆ ಸರ್ಕಾರದ ಸಿಎಂ ಆಗಿದ್ದರು. ಫಿರೋಜ್ಪುರದಲ್ಲಿ ಪ್ರಧಾನಿ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ರೈತರು ಹೆದ್ದಾರಿ ತಡೆ ನಡೆಸಿದರು. ಇದರಿಂದಾಗಿ ಪ್ರಧಾನಿಯವರ ಬೆಂಗಾವಲು ಪಡೆ ಫ್ಲೈಓವರ್ ಮೇಲೆ ಸಿಲುಕಿಕೊಂಡಿತು. ಈ ಮೇಲ್ಸೇತುವೆ ಭಾರತ-ಪಾಕಿಸ್ತಾನ ಗಡಿಯ ಸಮೀಪವೂ ಇತ್ತು. ಆದರೆ, ಇದನ್ನು ಭದ್ರತಾ ಲೋಪ ಎಂದು ಪರಿಗಣಿಸಲು ಸಿಎಂ ಚನ್ನಿ ನಿರಾಕರಿಸಿದ್ದರು. ಪ್ರಧಾನಿಗೆ ಯಾವುದೇ ಗೀರು ಬಿದ್ದಿಲ್ಲ, ಹಾಗಾದರೆ ಅವರ ಜೀವಕ್ಕೆ ಅಪಾಯವಾಗುವುದಾದರೂ ಹೇಗೆ ? ಎಂದು ಚರಂಜಿತ್ ಚನ್ನಿ ಪ್ರಶ್ನಿಸಿದ್ದರು.
ಘಟನೆಗೆ ಭಗವಂತ ಮಾನ್ ವಿಷಾದ
ಭದ್ರತಾ ಲೋಪದ ನಂತರ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪಂಜಾಬ್ಗೆ ಭೇಟಿ ನೀಡಿದ್ದರು. ಈ ವೇಳೆ ಆಮ್ ಆದ್ಮಿ ಪಕ್ಷದ ಸಿಎಂ ಭಗವಂತ್ ಮಾನ್ ಈ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. . ಭದ್ರತಾ ಲೋಪದಿಂದಾಗಿ ಕಳೆದ ಬಾರಿ ಪ್ರಧಾನಿ ವಾಪಸ್ ಮರಳಬೇಕಾಯಿತು ಎಂದು ಭಗವಂತ್ ಮಾನ್ ಹೇಳಿದ್ದಾರೆ. ಪ್ರಧಾನಿಗೆ ಸಂಪೂರ್ಣ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದ್ದಾರೆ.