ಭೋಪಾಲ್ : ದೇಶದಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಭಕ್ತರು ಮಹಾದೇವನನ್ನು ಒಲಿಸಿಕೊಳ್ಳಲು ಪೂಜೆ, ಪುನಸ್ಕಾರ, ಉಪವಾಸದ ಮೊರೆ ಹೋಗಿದ್ದಾರೆ. ದೇಶದ ಶಿವನ ಎಲ್ಲಾ ದೇವಾಲಯಗಳಲ್ಲಿ ಮುಂಜಾನೆಯಿಂದಲೂ ಪೂಜೆ ಪುನಸ್ಕಾರಗಳು ನೆರವೇರುತ್ತಿವೆ. ಈ ನಡುವೆ ಶಿವರಾತ್ರಿ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ ನ ಪೊಲೀಸ್ ಠಾಣೆಯೇ ಮಹಾದೇದನ ಮಂದಿರವಾಗಿ ಬದಲಾಗಿದೆ.
ಹೌದು, ಮಧ್ಯಪ್ರದೇಶದ ಭೋಪಾಲ್ ನ ಭೈರಾಗರ್ ನಲ್ಲಿರೋ ಸಂತ ಹಿರ್ದರಾಮ್ ನಗರ ಠಾಣೆಯೇ ಇದೀಗ ಥಾಣೇಶ್ವರ ಮಹಾದೇವ ಮಂದಿರವಾಗಿ ಬದಲಾಗಿದೆ. ಮಹಾಶಿವರಾತ್ರಿ ಪ್ರಯುಕ್ತ ಠಾಣೆಯ ಆವರಣದಲ್ಲಿದ್ದ ಶಿವಲಿಂಗಕ್ಕೆ ಪೂಜೆ ಮಾಡಲಾಗಿತ್ತು. ನಂತರ ಪೊಲೀಸರು ಠಾಣೆಯ ಹೆಸರನ್ನು ಥಾಣೇಶ್ವರ ಮಹಾದೇವ ಮಂದಿರ ಠಾಣಾ ಎಂದು ಬದಲಾಯಿಸಿದ್ದಾರೆ.
ವ್ಯಾಪಕ ಮಳೆಗೆ 115 ಜನ ಸಾವು, 236 ಜನರಿಗೆ ಗಾಯ
ಡೋಡೋಮಾ: ವ್ಯಾಪಕ ಮಳೆಯಿಂದಾಗಿ ತಾಂಜಾನಿಯಾದಲ್ಲಿ (Tanzania) ಬರೋಬ್ಬರಿ 155 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, 236 ಜನ ಗಾಯಗೊಂಡಿದ್ದಾರೆ. ವ್ಯಾಪಕ ಮಳೆಯಿಂದಾಗಿ ತಾಂಜಾನಿಯಾದಲ್ಲಿ ಭೂ ಕುಸಿತ ಉಂಟಾಗಿದೆ. ಪೂರ್ವ...