ನವದೆಹಲಿ: ಸಾಮರಸ್ಯ ಹಾಳು ಮಾಡುತ್ತಿರುವ ಜಾತಿವಾದ ಹಾಗೂ ಪ್ರಾದೇಶಿಕತೆಯನ್ನು ಎಲ್ಲರೂ ಕೊನೆಗೊಳಿಸಬೇಕೆಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ನಡೆದ ‘ವಿಜಯ ದಶಮಿ (Vijaya Dashami) ಉತ್ಸವದಲ್ಲಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿರುವ ಜಾತೀಯತೆ, ಪ್ರಾದೇಶಿಕತೆ ಸೇರಿದಂತೆ ಇನ್ನಿತರ ವಿರೂಪಗಳನ್ನು ಕೊನೆಗಾಣಿಸಬೇಕು. ಕನಿಷ್ಠ ಒಂದು ಬಡ ಕುಟುಂಬದ ಸಾಮಾಜಿಕ-ಆರ್ಥಿಕ ಸ್ಥಿತಿ ಉನ್ನತೀಕರಿಸುವುದು ಸೇರಿದಂತೆ 10 ಪ್ರತಿಜ್ಞೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ದೇಶದ ಜನರಿಗೆ ನವರಾತ್ರಿ ಮತ್ತು ವಿಜಯದಶಮಿಯ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದರು.