ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ
ಪುತ್ತೂರಿನ ಕಾಲೇಜು ವಿದ್ಯಾರ್ಥಿನಿ ಶ್ರೇಯಾ ಪಕ್ಕಳ ಹೃದಯಾಘಾತದಿಂದ ಮಾರ್ಚ್ 22 ರಂದು ಮೃತಪಟ್ಟಿದ್ದಾರೆ.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಶ್ರೇಯಾ ಪಕ್ಕಳ(16 ವರ್ಷ) ಬೆಳ್ಳಿಪ್ಪಾಡಿ ಗ್ರಾಮದ ಕುಂಡಾಪು ಪದ್ಮನಾಭ ಪಕ್ಕಳರವರ ಪುತ್ರಿ.
15 ದಿನಗಳ ಹಿಂದೆ ಅವರ ಮೈಮೇಲೆ ಮತ್ತು ಬಾಯಿಯಲ್ಲಿ ಅಲರ್ಜಿ ತರಹದ ಹುಣ್ಣುಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಅವರು ಚಿಕಿತ್ಸೆಯನ್ನು ಪಡೆದು ಮನೆಗೆ ಮರಳಿದ್ದರು. ಬಳಿಕ ಅವರಿಗೆ ಮಾರ್ಚ್ 21ರಂದು ರಾತ್ರಿ ಎದೆ ನೋವು ಕಾಣಿಸಿಕೊಂಡಿದೆ.
ಮಾರ್ಚ್ 22ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಇವರು ವಿವೇಕಾನಂದ ಪಿಯುಸಿ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು.
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೃತರ ತಂದೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು https://t.co/ebHn79UbYs
— Saaksha TV (@SaakshaTv) March 19, 2021
ಐಟಿಆರ್ ಮರುಪಾವತಿ ಭರ್ತಿ ಮಾಡಿದ ನಂತರ ಈ ಅಂಶಗಳನ್ನು ಪರಿಶೀಲಿಸಿ https://t.co/tsMNkVA0BK
— Saaksha TV (@SaakshaTv) March 19, 2021
ನಾನು ರಾಮ ಮತ್ತು ಕೃಷ್ಣನನ್ನು ನಂಬುವುದಿಲ್ಲ.. ಯಾವುದೇ ಹಿಂದೂ ದೇವರನ್ನು ಪೂಜಿಸುವುದಿಲ್ಲ – ಐಪಿಎಸ್ ಅಧಿಕಾರಿಯಿಂದ ವಿದ್ಯಾರ್ಥಿಗಳಿಗೆ ಪ್ರಮಾಣವಚನ https://t.co/Ts767i1Wrv
— Saaksha TV (@SaakshaTv) March 19, 2021
ದೊಣ್ಣೆ ಮೆಣಸಿನ ವಾಂಗಿಬಾತ್ https://t.co/AL3rMRyFF5
— Saaksha TV (@SaakshaTv) March 19, 2021