R. Ashok | ಬಿಜೆಪಿಯ ಕಣ ಕಣದಲ್ಲಿ ಪಾದಯಾತ್ರೆ ಇದೆ
ಬೆಂಗಳೂರು : ಪಾದಯಾತ್ರೆ ಯಡಿಯೂರಪ್ಪ ರಕ್ತದ ಕಣ ಕಣದಲ್ಲೂ ಬಂದಿದೆ, ಬಿಜೆಪಿಯ ಕಣ ಕಣದಲ್ಲಿ ಪಾದಯಾತ್ರೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ, ಬಿಎಸ್ ಯಡಿಯೂಪರಪ್ಪ ಅವರು ಕಾರು ಬಿಟ್ಟು ನಾಲ್ಕು ಕಿಲೋ ಮೀಟರ್ ನಡೆಯಲಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಪಾದಯಾತ್ರೆ ಯಡಿಯೂರಪ್ಪ ರಕ್ತದ ಕಣ ಕಣದಲ್ಲೂ ಬಂದಿದೆ, ಬಿಜೆಪಿಯ ಕಣ ಕಣದಲ್ಲಿ ಪಾದಯಾತ್ರೆ ಇದೆ.
ಯಡಿಯೂರಪ್ಪನವರು ೫೦ ವರ್ಷ ಪಾದಯಾತ್ರೆ ಮಾಡಿದ್ದಾರೆ. ಜನರು ಮಾತಾಡೋದನ್ನ ಯಡಿಯೂರಪ್ಪನವರು ಹೇಳಿದ್ದಾರೆ.
ಪಾದಯಾತ್ರೆ ಗೆ ಒಂದು ಗಾಂಭೀರ್ಯತೆ ಇರಬೇಕು. ಓಡೋದು,ಬಸ್ಕಿ ಹೊಡಿಸೋದು ಈ ರೀತಿ ಪಾದಯಾತ್ರೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಒಂದು ಪ್ಯಾಮಿಲಿ ಪಾರ್ಟಿ ಆಗಿದೆ, ರಾಹುಲ್ ಗಾಂಧಿ ನೋಡೋದಕ್ಕೆ ಸೋನಿಯಾಗಾಂಧಿ ಬಂದು ಹೋಗಿದ್ದಾರೆ.
ಮಗನ ಮೇಲೆ ಪ್ರೀತಿಗೆ ಬಂದಿದ್ದಾರೆ. ಸಿದ್ದರಾಮಯ್ಯ ಪಾದಯಾತ್ರೆ ಮಾಡಿದ್ದರು, ಮೇಕೆದಾಟು ಪಾದಯಾತ್ರೆ ಮಾಡಿದ್ದರು.
ಆಗ ಸೋನಿಯಾಗಾಂಧಿ ಬಂದಿರಲಿಲ್ಲ. ಯಡಿಯೂರಪ್ಪ,ಬೊಮ್ಮಾಯಿಗೆ ಸವಾಲು ಹಾಕಿರುವ ಬಗ್ಗೆ ಅವ್ರೇ ಮಾತಾಡಲಿದ್ದಾರೆ ಎಂದು ಹೇಳಿದ್ದಾರೆ.