ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಜೊತೆ ತುಳುವಿನಲ್ಲಿ ಮಾತನಾಡಿದ ರವಿ ಕಟಪಾಡಿ
ಮುಂಬೈ, ಜನವರಿ16: ಶ್ರೀ ಕೃಷ್ಣಾ ಜನ್ಮಾಷ್ಟಮಿಯಂದು ವಿಭಿನ್ನ ರೀತಿಯಲ್ಲಿ ವೇಷತೊಟ್ಟು ಸಂಗ್ರಹಿಸಿದ ಹಣವನ್ನು ಬಡ ಅಶಕ್ತ, ಅನಾರೋಗ್ಯಪೀಡಿತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಕಳೆದ 5 ವರ್ಷದಿಂದ ನೀಡುತ್ತಾ ಬಂದಿರುವ ರವಿ ಕಟಪಾಡಿ, ಸೋನಿ ವಾಹಿನಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ 12.5 ಲಕ್ಷ ರೂಗಳನ್ನು ಗೆದ್ದಿದ್ದಾರೆ.
ಈ ಸಂದರ್ಭದಲ್ಲಿ ರವಿ ಕಟಪಾಡಿಯವರು ಶ್ರೇಷ್ಠ ಕಲಾವಿದ ಅಮಿತಾಬ್ ಬಚ್ಚನ್ ಮತ್ತು ಅನುಪಮ್ ಖೇರ್ ಜೊತೆ ಅತ್ಯಮೂಲ್ಯ ಕ್ಷಣಗಳನ್ನು ಕಳೆದಿದ್ದಾರೆ. ಅಮಿತಾಬ್ ಬಚ್ಚನ್ ಅವರೊಂದಿಗೆ ತುಳುವಿನಲ್ಲಿ ಮಾತನಾಡಿರುವ ರವಿ ಕಟಪಾಡಿ, ‘ಉಡುಪಿ ಬೊಕ್ಕ ಕುಡ್ಲದ ಜನಕುಲೇಗ್ ನಮಸ್ಕಾರ’ (ಉಡುಪಿ ಹಾಗೂ ಮಂಗಳೂರಿನ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು) ಎಂದು ತುಳು ಭಾಷೆಯಲ್ಲಿ ಅವರೊಂದಿಗೆ ಸಂವಾದ ನಡೆಸಿದ್ದಾರೆ.
ರವಿ ಕಟಪಾಡಿ ತುಳುವಿನಲ್ಲಿ ಒಂದೊಂದೆ ಪದ ಹೇಳಿಕೊಡುತ್ತಿದ್ದಂತೆ ಅತ್ತ ಅಮಿತಾಬ್ ಬಚ್ಚನ್ ಕೂಡ ಅದನ್ನು ಅನುಕರಣೆ ಮಾಡುತ್ತಾ ಸ್ವಚ್ಚಂದವಾಗಿ ತುಳು ಮಾತನಾಡಿದ್ದಾರೆ. ಜೊತೆಗೆ ನಟ ಅನುಪಮ್ ಖೇರ್ ಕೂಡ ಇವರಿಬ್ಬರಿಗೆ ಸಾಥ್ ನೀಡಿದ್ದಾರೆ.
ಕರಾವಳಿಯಲ್ಲಿ ರವಿ ಕಟಪಾಡಿ ಅವರು ಅಮಿತಾಬ್ ಬಚ್ಚನ್ ಜೊತೆ ತುಳು ಭಾಷೆಯಲ್ಲಿ ಮಾತನಾಡಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗುತ್ತಿದೆ. ಕರಾವಳಿಗರು ಬಿಗ್ ಬಿ ಹಾಗೂ ರವಿ ಕಟಪಾಡಿ ತುಳುವಿನಲ್ಲಿ ಮಾತನಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸೋನಿ ವಾಹಿನಿಯಿಂದ ವಾರದ ಹಿಂದೆ ರವಿ ಕಟಪಾಡಿಗೆ ಕರೆ ಬಂದಿದ್ದು, ಆ ಸಂದರ್ಭದಲ್ಲಿ ಕೆಬಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ತನ್ನಿಂದ ಅಸಾಧ್ಯವೆಂದು ರವಿ ಕಟಪಾಡಿ ಹಿಂದಕ್ಕೆ ಸರಿದಿದ್ದರು. ಬಳಿಕ ರವಿಯವರಿಗೆ ವಾಹಿನಿಯವರು ಧೈರ್ಯ ತುಂಬಿದ್ದು, ನಿಮ್ಮ ಕೆಲಸವನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ನೀವು ಭಾಗವಹಿಸಲೇಬೇಕು ಎಂದು ವಿನಂತಿಸಿದ್ದರು. ವಾಹಿನಿಯವರ ಧೈರ್ಯ ತುಂಬಿದ ಮಾತುಗಳಿಂದ ರವಿ ಕಟಪಾಡಿ ಕೊನೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಮ್ಮತಿ ಸೂಚಿಸಿದ್ದರು.
ಸೋನಿ ವಾಹಿನಿಯಲ್ಲಿ ಶುಕ್ರವಾರ (ಜ.15) ರಾತ್ರಿ ಪ್ರಸಾರವಾದ ಬಾಲಿವುಡ್ನ ಬಾದ್ ಶಾ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕಾರ್ಯಕ್ರಮದಲ್ಲಿ ರವಿ ಕಟಪಾಡಿ ಆರಂಭಿಕ 7 ಪ್ರಶ್ನೆಗಳಿಗೆ ಉತ್ತರಿಸಿದ್ದು, ಮುಂದಿನ ಪ್ರಶ್ನೆಗಳಿಗೆ ಅಂಬಾ ಬೆಹಾನ್ ಉತ್ತರಿಸಿದ್ದರು. ಅಲ್ಲದೇ, ಹಿರಿಯ ನಟ ಅನುಪಮ್ ಖೇರ್ ಕೂಡ ಸಹಕಾರ ನೀಡಿದ್ದರು. ರವಿ ಕಟಪಾಡಿ ಹಾಗೂ ಅಂಬಾ ಬೆಹಾನ್ ಜಂಟಿಯಾಗಿ 25 ಲಕ್ಷ ರೂ. ಮೊತ್ತವನ್ನು ಗೆದ್ದಿದ್ದು, ಇದರಿಂದ ಬಂದ ಹಣವನ್ನು ಸಮಾಜ ಕಾರ್ಯಕ್ಕೆ ಬಳಸುವುದಾಗಿ ರವಿ ಕಟಪಾಡಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಮೊಟ್ಟೆಗಳ ಸೇವನೆಯಿಂದ ಮೂತ್ರಪಿಂಡ (ಕಿಡ್ನಿ) ತೊಂದರೆhttps://t.co/f1WeQRvdL9
— Saaksha TV (@SaakshaTv) January 12, 2021
ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ ಖರೀದಿಗೆ ಪ್ಯಾನ್ / ಆಧಾರ್ ದಾಖಲೆ ಕಡ್ಡಾಯ ? – ಇಲ್ಲಿದೆ ಮಾಹಿತಿhttps://t.co/CrjHYzvDzK
— Saaksha TV (@SaakshaTv) January 12, 2021