ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಎಚ್ಚರ…ಆರ್ ಸಿಬಿ…ಎಚ್ಚರ- ಕನ್ನಡ ಬಾವುಟ ಬಣ್ಣದ ಬೂಟು ಧರಿಸಿದ್ರೆ ಹುಷಾರು…

admin by admin
March 2, 2021
in Newsbeat, Sports, ಕ್ರೀಡೆ
Royal Challengers Bangalore virat kohli rcb saakshatv
Share on FacebookShare on TwitterShare on WhatsappShare on Telegram

ಎಚ್ಚರ…ಆರ್ ಸಿಬಿ…ಎಚ್ಚರ- ಕನ್ನಡ ಬಾವುಟ ಬಣ್ಣದ ಬೂಟು ಧರಿಸಿದ್ರೆ ಹುಷಾರು…

ಆರ್ ಸಿಬಿಯಿಂದ ಕನ್ನಡ ಬಾವುಟಕ್ಕೆ ಅವಮಾನ

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಕನ್ನಡ ಬಾವುಟ ಬಣ್ಣದ ಶ್ಯೂ ಧರಿಸಲಿರುವ ಆರ್ ಸಿಬಿ ಆಟಗಾರರು..

ಕನ್ನಡಾಂಬೆಯ ಎದೆಯ ಮೇಲೆ ಕಾಲಿಡ್ತಾರಾ ಆರ್ ಸಿಬಿ ಆಟಗಾರರು…?

Royal Challengers Bangalore virat kohli rcb saakshatvರಾಯಲ್ ಚಾಲೆಂಜರ್ಸ್ ಬೆಂಗಳೂರು…
ಇದು ನಮ್ಮ ಬೆಂಗಳೂರಿನ ಹೆಮ್ಮೆ.. ಕರುನಾಡಿನ ಹಿರಿಮೆ..
ಹೌದು, ಐಪಿಎಲ್ ನಲ್ಲಿ ಆರ್ ಸಿಬಿ ಅಂದ್ರೆ ಆರ್ ಸಿಬಿಯೇ.. ಪಂದ್ಯ ಗೆಲ್ಲಲಿ, ಸೋಲಲಿ.. ಪ್ರಶಸ್ತಿ ಗೆಲ್ಲದಿದ್ರೂ ಪ್ರತಿ ವರ್ಷವೂ ಈ ಬಾರಿ ಕಪ್ ನಮ್ದೆ ಅಂತ ಬೀಗುತ್ತಿರುವ ಅಭಿಮಾನಿಗಳ ಸಂಖ್ಯೆಗೇನೂ ಕಮ್ಮಿ ಇಲ್ಲ.
ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆರ್ ಸಿಬಿ ತಂಡದ ಬಗ್ಗೆ ಅಭಿಮಾನಿಗಳು ಇಟ್ಟಿರುವ ಪ್ರೀತಿ ಅಷ್ಟಿಷ್ಟಲ್ಲ. ತಂಡದಲ್ಲಿ ಹೆಚ್ಚು ಕನ್ನಡಿಗರೂ ಇಲ್ಲದಿದ್ರೂ ಪರವಾಗಿಲ್ಲ. ಆರ್ ಸಿಬಿ ನಮ್ಮ ಗರಿಮೆ ಅನ್ನೋ ಮನೋಭಾವನೆಯನ್ನು ಹೊಂದಿದ್ದಾರೆ.
ಆದ್ರೆ ಆರ್ ಸಿಬಿ ಈ ಬಾರಿ ಕನ್ನಡಿಗರ ಸ್ವಾಭಿಮಾನಕ್ಕೆ ಪೆಟ್ಟು ನೀಡುವ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ನ ಆ ಒಂದು ನಿರ್ಧಾರ ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಆರ್ ಸಿಬಿಯಲ್ಲಿ ಕನ್ನಡಿಗ ಆಟಗಾರರು ಇಲ್ಲದಿದ್ದಾಗಲೂ ಯಾರು ಕೂಡ ಬೇಸರಗೊಂಡಿಲ್ಲ. ಬೇಸರಗೊಂಡಿದ್ರೂ ಅದನ್ನು ವ್ಯಕ್ತಪಡಿಸಿಲ್ಲ. ಆದ್ರೆ ಈ ಒಂದು ನಿರ್ಧಾರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗರು ಎಚ್ಚೆತ್ತುಕೊಳ್ಳಲೇಬೇಕು. ಆರ್ ಸಿಬಿ ಮ್ಯಾನೇಜ್ ಮೆಂಟ್ ಕೂಡ ತನ್ನ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು. ಇಲ್ಲದಿದ್ರೆ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ವಿರುದ್ಧ ಪ್ರತಿಭಟನೆ ನಡೆದ್ರೂ ಅಚ್ಚರಿ ಏನಿಲ್ಲ.
ಹಾಗಿದ್ರೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಮಾಡಿರುವ ಎಡವಟ್ಟು ಏನು ? ಹಾಗಂತ ಅದೇನೂ ಸಣ್ಣ ಎಡವಟ್ಟಲ್ಲ. ಮಹಾ ಅಪರಾಧ. ಕನ್ನಡಾಂಬೆಗೆ ಮಾಡಿರುವ ಅವಮಾನವಾಗಿದೆ. ಕನ್ನಡಾಂಬೆಯ ಎದೆಯ ಮೇಲೆ ಕಾಲಿಡುವ ತೀರ್ಮಾನ ತೆಗೆದುಕೊಂಡಿರುವುದನ್ನು ಸಹಿಸಲು ಸಾಧ್ಯವಿಲ್ಲ.
Royal Challengers Bangalore virat kohli rcb saakshatvಅಷ್ಟಕ್ಕೂ ಆಗಿರುವುದು ಏನು ? ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರರು ಕೆಂಪು ಮತ್ತು ಹಳದಿ ಬಣ್ಣದ ಶೂ ಧರಿಸಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಮಾಹಿತಿಯನ್ನು ನೀಡಿದ್ದಾರೆ. ಕೆಂಪು ಮತ್ತು ಹಳದಿ ಬಣ್ಣದ ಶ್ಯೂಗಳನ್ನು ಈ ಬಾರಿಯ ಐಪಿಎಲ್ ನಲ್ಲಿ ಧರಿಸುವುದಾಗಿ ವಿರಾಟ್ ಕೊಹ್ಲಿ ತನ್ನ ಟ್ವಿಟರ್ ಖಾತೆಯಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ.
ಕೆಂಪು ಮತ್ತು ಹಳದಿ ಬಣ್ಣ ನಮ್ಮ ಕನ್ನಡ ಬಾವುಟದ ಬಣ್ಣವಾಗಿದೆ. ಕನ್ನಡ ಬಾವುಟದ ಬಣ್ಣ ನಮ್ಮ ಸ್ವಾಭಿಮಾನ ಮತ್ತು ಗೌರವದ ಪ್ರತೀಕವಾಗಿದೆ. ತ್ರಿವರ್ಣ ಧ್ವಜದಷ್ಟೇ ಕನ್ನಡ ಬಾವುಟ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ. ಅದ್ರಲ್ಲಿ ನಮ್ಮ ಭಾಷೆ, ಸಂಸ್ಕøತಿಯೂ ಇದೆ. ಇಂತಹ ಬಾವುಟದ ಬಣ್ಣದ ಶ್ಯೂಗಳನ್ನು ಆರ್ ಸಿಬಿ ಆಟಗಾರರು ಧರಿಸುವುದು ಅಂದ್ರೆ ಅದು ಅವಮಾನವಾಗಲ್ವಾ ?
ಖಂಡಿತ ಅವಮಾನವೇ.. ಆರ್ ಸಿಬಿಯ ಉದ್ದೇಶ ಏನೇ ಇರಲಿ, ಆದ್ರೆ ಕನ್ನಡದ ಬಾವುಟದ ಬಣ್ಣದ ಶ್ಯೂಗಳನ್ನು ಧರಿಸುವುದು ಸಮಂಜಸವಲ್ಲ.
ಹಾಗೇ ನೋಡಿದ್ರೆ ವಿಜಯ ಮಲ್ಯ ಕೈಯಿಂದ ಆರ್ ಸಿಬಿ ಕೈ ತಪ್ಪಿ ಹೋದ ನಂತರ ಕನ್ನಡಿಗರದ್ದು ಅನ್ನೋದು ಏನು ಇಲ್ಲ. ಮಲ್ಯ ಒಡೆತನದಲ್ಲಿದ್ದಾಗ ಕನಿಷ್ಠ ತಂಡದಲ್ಲಿ ಮತ್ತು ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಕನ್ನಡಿಗರ ಹೆಸರುಗಳಿದ್ದವು. ಆದ್ರೆ ಈಗ ಎಲ್ಲವೂ ವಿದೇಶಿ ಹಾಗೂ ಹೊರ ರಾಜ್ಯಗಳ ಹೆಸರುಗಳು ಜಾಸ್ತಿ ಇವೆ. ಅದನ್ನು ಬೇಕಾದ್ರೂ ಒಪ್ಪಿಕೊಳ್ಳೋಣ. ಫ್ರಾಂಚೈಸಿ ಮಾಲೀಕರು ದುಡ್ಡು ಹಾಕಿದ್ದಾರೆ. ಅದು ಅವರ ತೀರ್ಮಾನ ಅಂತ. ಆದ್ರೆ ಕನ್ನಡ ಬಾವುಟದ ಶ್ಯೂ ಧರಿಸಿಕೊಂಡು ಆಡುವುದನ್ನು ಮಾತ್ರ ಸಹಿಸಲು ಸಾಧ್ಯವಿಲ್ಲ.
Royal Challengers Bangalore virat kohli rcb saakshatvಅದು ಅಲ್ಲದೆ ಆರ್ ಸಿಬಿ ತಂಡದ ಜೆರ್ಸಿಯಲ್ಲಿ ಕನ್ನಡ ಬಾವುಟದ ಬಣ್ಣ ಯಾಕಿಲ್ಲ ? ಕೆಂಪು ಬಣ್ಣವಿದ್ರೂ ಎಲ್ಲೂ ಕೂಡ ಹಳದಿ ಬಣ್ಣ ಕಾಣ ಸಿಗುವುದಿಲ್ಲ. ಹಾಗಿದ್ದ ಮೇಲೆ ಕನ್ನಡಿಗರು ಕಸದಿಂದ ಕಡೆ ಅಂತ ಆರ್ ಸಿಬಿ ಮ್ಯಾನೇಜ್ ಮೆಂಟ್ ಅಂದುಕೊಂಡಿದೆಯಾ ?
ಏನೇ ಇರಲಿ, ಇದು ಎಚ್ಚರಿಕೆ,, ಇದು ಕಳಕಳಿಯಲ್ಲ.. ಮನವಿಯೂ ಅಲ್ಲ. ಆರ್ ಸಿಬಿ ಮ್ಯಾನೇಜ್ ಮೆಂಟ್ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಲೇಬೇಕು. ಇಲ್ಲದಿದ್ರೆ ಆರ್ ಸಿಬಿ ತನ್ನತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕೆ ತಕ್ಕ ಬೆಲೆ ನೀಡಬೇಕಾಗುತ್ತದೆ.

Tags: #saakshatvbccibengaluruipl 2021kannad flagkarnatakaRCBRoyal Challengers Bangalorevirat kohli
ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram