ಚಾಮುಂಡಿ ಬೆಟ್ಟವನ್ನ ಉಳಿಸಿ, ಮೋದಿಗೆ ಪತ್ರ ಬರೆದ ಸಾಹಿತಿ ಎಸ್ ಎಲ್ ಬೈರಪ್ಪ
ಚಾಮುಂಡಿ ಬೆಟ್ಟಕ್ಕೆ ತರಲಿರುವ ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯನ್ನ ಕೈಬಿಡಬೇಕು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ ಎಲ್ ಬೈರಪ್ಪ ಅವರು ಮೋದಿ ಗೆ ಪತ್ರ ಬರೆದು ಸಾತ್ವಿಕ ಸಿಟ್ಟು ಹೊರಹಾಕಿದ್ದಾರೆ.
ಕೇಂದ್ರ ಪ್ರಸಾದ ಯೊಜನೆಯಿಂದ ವಾಮುಂಡಿಬೆಟ್ಟಕ್ಕೆ ಹಾನಿಯಾಗುತ್ತದೆ. ಕಾಂಕ್ರೀಟ್ ಕಾಡು ಮಾಡುವುದರಿಂದ ಬೆಟ್ಟದ ಪರಿಸರ ನಾಶವಾಗಲಿದೆ, ಅಭಿವೃದ್ದಿಯ ಹೆಸರಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಸರ್ಕಾರಗಳು ಮುಂದಾಗಿವೆ ಎಂದು ಭೈರಪ್ಪನವರು ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ಯೊಜನೆಯನ್ನ ಅನುಷ್ಠಾನಗೊಳಿಸಬಾರದು ಮತ್ತು ವಿಐಪಿಗಳು ಸೇರಿದಂತೆ ಎಲ್ಲಾ ವಾಹನಗಳನ್ನ ಬೆಟ್ಟಕ್ಕೆ ಹೋಗದಂತೆ ನಿರ್ಬಂಧಿಸಬೇಕು, ಸರ್ಕಾರದಿಂದ ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ ವಾಹನಗಳನ್ನಷ್ಟೆ ಬಿಡಬೇಕು. ಬೆಟ್ಟದ ಮೇಲೆ ವಾಸವಿರುವ ಜನರಿಗೆ ನಗರದಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡಬೇಕು, ಕೇವಲ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಮಾತ್ರ ಳಿಯಲು ಅವಕಾಶ ಮಾಡಿಕೊಡಬೇಕು ಎಂದು ಸಾಹಿತಿ ಎಸ್ ಎಲ್ ಬೈರಪ್ಪ ಅವರು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.