Saturday, December 2, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ಯೂಟಾ ರಾಜ್ಯದಲ್ಲಿ ಬ್ರೈಸ್ ಕಣಿವೆ, ಝಯಾನ್ ಪಾರ್ಕ್ ನೋಡದಿದ್ದರೂ ಪುಟ್ಟ ಊರು ಕನಾಬ್ ನೋಡಲೇಬೇಕು:

Shwetha by Shwetha
November 8, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 8
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ; ಯೂಟಾ ರಾಜ್ಯದಲ್ಲಿ ಬ್ರೈಸ್ ಕಣಿವೆ, ಝಯಾನ್ ಪಾರ್ಕ್ ನೋಡದಿದ್ದರೂ ಪುಟ್ಟ ಊರು ಕನಾಬ್ ನೋಡಲೇಬೇಕು: Saakshatv yatrika episode 8

Saakshatv yatrika episode 8

Related posts

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

November 30, 2023
ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

November 27, 2023

ಯೂಟಾ ಎಂಬ ಈ ರಾಜ್ಯದ ಹೆಸರು ಕೇಳಿದೊಡನೆಯೇ ನನಗೆ ಊಟದ ನೆನಪಾಗತ್ತೆ. ನಾವು ಆ ರಾಜ್ಯಕ್ಕೆ ತಿರುಗಲು ಹೋದಾಗ ಸರಿಯಾದ ಊಟ ಸಿಗದೇ ಪರದಾಡಿದ್ವಿ, ಇರಲಿ. ಯೂಟಾ ಹೆಸರು Ute ಬುಡಕಟ್ಟಿನಿಂದ ಬಂದಿದೆ. ಅಂದರೆ ಪರ್ವತಗಳ ಜನರು ಅಂತ. ಇತರ ರಾಜ್ಯಗಳಂತೇ ಯುರೋಪಿಯನ್ನರ ಆಗಮನಕ್ಕೆ ಮುಂಚೆ ಈ ಪ್ರದೇಶ ಕೂಡಾ ಸ್ಥಳೀಯ ಅಮೆರಿಕನ್ನರ ಆವಾಸ ಸ್ಥಾನವಾಗಿತ್ತು. Saakshatv yatrika episode 8

ಸಂಸ್ಥಾನಕ್ಕೆ ಸೇರುವ ಮುಂಚೆ ಸ್ಪ್ಯಾನಿಷ್ ಮತ್ತು ಮೆಕ್ಸಿಕನ್ನರ ಹಿಡಿತದಲ್ಲಿದ್ದ ಈ ರಾಜ್ಯ ನಂತರ ಸಂಸ್ಥಾನಕ್ಕೆ ಸೇರಿತು. ಮಹಾ ಲವಣ ಸರೋವರ ಮತ್ತು ಬಹುಪಾಲು ಪರ್ವತಗಳಿಂದಲೇ ಕೂಡಿದ ಈ ನಾಡಿನ ರಾಜಧಾನಿ ಸಾಲ್ಟ್ ಲೇಕ್ ಸಿಟಿ. ಈ ನಾಡಿಗೆ ಜೇನುಗೂಡಿನ ರಾಜ್ಯ ಅಂತಾರೆ. ಅದರರ್ಥ ಇಲ್ಲಿ ಬಹಳ ಜೇನು ಸಿಗತ್ತೆ ಅಂತ ಅಲ್ಲ, ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಜೇನು ಹುಳುಗಳಂತೆ ಒಬ್ಬರಿಗೊಬ್ಬರು ಆಗಿ ಸಹಾಯ ಮಾಡಿಕೊಂಡು ನಾಡನ್ನ ಯಶಸ್ವಿಗೊಳಿಸಬೇಕೆಂದು. ಧರ್ಮದ ವಿಚಾರಕ್ಕೆ ಬಂದರೆ, ಈ ನಾಡಿನ ಹೆಚ್ಚಿನ ಜನರು ಮೋರ್ಮನ್ ಕ್ರೈಸ್ತರು. ನಿಮಗೆ ಗೊತ್ತಿರುವಂತೆ ಹೆಚ್ಚಿನ ಕ್ರೈಸ್ತ ಮತದಲ್ಲಿ ಬಹುಪತ್ನಿತ್ವ ಧರ್ಮ ನಿಶಿದ್ಧ. ಆದರೆ ಇವರಲ್ಲಿ ಇದು ಧರ್ಮ ಸಮ್ಮತ. ಈಗಲೂ ಕೆಲವೆಡೆ ಚಾಲ್ತಿಯಲ್ಲಿದೆ ಎಂದು ಕೇಳಿದೀನಿ. ಈ ವಿಷಯವಾಗಿ ಸರಕಾರದೊಟ್ಟಿಗೆ ತಿಕ್ಕಾಟಗಳೂ ನಡೆದಿವೆಯಂತೆ.

ನಾನು ಈ ರಾಜ್ಯಕ್ಕೆ ಬೇಟಿ ಕೊಡುವ ಮುಂಚೆ ವಿಷಯಗಳ ಕೆದಕ್ತಾ ಇರಬೇಕಾದರೆ ವಿಶೇಷವಾಗಿ ನನ್ನ‌ ಗಮನ ಸೆಳೆದ ಸಂಗತಿಯೇನೆಂದರೆ, ಅಮೆರಿಕಾದಲ್ಲೇ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಅತೀ ಕಮ್ಮಿಯಿರುವುದು ಈ ರಾಜ್ಯದಲ್ಲೇ. ಅಲ್ಲದೇ ಈ ರಾಜ್ಯದ ಕೌಟುಂಬಿಕ ಆದಾಯವೂ ಗಮನ ಸೆಳೆಯುವಂತಿದೆ. ಹೆಚ್ಚಿನ ಸೂಚ್ಯಂಕಗಳಲ್ಲಿ ಈ ರಾಜ್ಯ ಮೇಲಿನ ಸ್ಥಾನದಲ್ಲೇ ಬರುತ್ತದೆ.

Saakshatv yatrika episode 8

ಸಾಲ್ಟ್‌ಲೇಕ್‌ ಮಹಾಸರೋವರ ಈ ರಾಜ್ಯದ ಅತೀ ಮುಖ್ಯವಾದ ಭೌಗೋಳಿಕ ಭಾಗ. ಸಮುದ್ರದಿಂದ ಸಾಕಷ್ಟು ದೂರದಲ್ಲಿರುವ ಈ ಸರೋವರ ಅತ್ಯಂತ ಅಪರೂಪದ ಭೌಗೋಳಿಕ ರಚನೆ. ಸಾಲ್ಟ್‌ಲೇಕ್‌ ಮಹಾಸರೋವರದ ದಡದಲ್ಲಿರುವ ಸಾಲ್ಟ್‌ಲೇಕ್ ನಗರ ಈ ರಾಜ್ಯದ ರಾಜಧಾನಿ.

ಈ ರಾಜ್ಯದಲ್ಲಿ ತಿರುಗಾಡಬೇಕಾದರೆ ಎಲ್ಲೆಡೆ ಬರೀ ಕಂದು ಬಣ್ಣಗಳೇ ಕಾಣ್ತಾ ಇದ್ವು. ಕಂದೋ ಇನ್ಯಾವುದೋ, ಬಣ್ಣಗಳ ಗುರುತಿಸುವಲ್ಲಿ ಜಾಣನಲ್ಲ ನಾನು. ನೀವು ಅಂತರ್ಜಾಲದಲ್ಲಿ ಈ ರಾಜ್ಯದ ಚಿತ್ರಗಳ ಹುಡುಕಿದಾಗ ಯಾವ ಬಣ್ಣ ಕಾಣುತ್ತದೋ ಅದೇ ಬಣ್ಣ. ಮತ್ತೆ ಈ ರಾಜ್ಯದಲ್ಲಿ ಕೂಡಾ ಅನೇಕ ಪ್ರವಾಸೀ ತಾಣಗಳಿವೆ. ಹೆಚ್ಚಿನವು ನೈಸರ್ಗಿಕ ಅದ್ಭುತಗಳು. ಹಾಲಿವುಡ್ ಸಿನಿಮಾ ಹುಚ್ಚಿರುವವರಿಗೆ ಈ ರಾಜ್ಯದ ಕೆಲ ಭಾಗಗಳ ಪರಿಚಯವಂತೂ ಇರಬಹುದು. ಮತ್ತೆ ಯೂಟಾ ಮತ್ತು ಆರಿಝೋನಾಗಳ ಕನಿಷ್ಟ 5-6 ವಿಂಡೋಸ್ ವಾಲ್‌ಪೇಪರ್‌ಗಳನ್ನ ನೀವು ನೋಡಿಯೇ ಇರುತ್ತೀರಿ.

ಇವೆಲ್ಲಾ ಇರಲಿ. ನಾವು ಇಲ್ಲಿ ನೋಡಿದ್ದು ಕೇವಲ ಎರಡು ಸ್ಥಳಗಳನ್ನು ಒಂದು ಬ್ರೈಸ್ ಕಣಿವೆ ಮತ್ತು ಝಯಾನ್ ರಾಷ್ಟ್ರೀಯ ಉದ್ಯಾನ. ಒಂದು ದಿನ ಉಳಿದ ಸೆಂಟ್ ಜಾರ್ಜ್ ನಗರವನ್ನೂ ಒಂದೇ ಗಂಟೆ ಊಟಕ್ಕೆ ನಿಲ್ಲಿಸಿದ ಕನಾಬ್ ಪಟ್ಟಣವನ್ನೂ ಸೇರಿಸಿದರೆ 4 ಜಾಗಗಳು. ಸೆಂಟ್ ಜಾರ್ಜ್ ಬಗ್ಗೆ ಹೇಳೋಕೇನೂ ಇಲ್ಲ. ಆದರೂ ವಿಭಿನ ಭೌಗೋಳಿಕ ಲಕ್ಷಣಗಳುಳ್ಳ ಆ ನಗರ ಏನೋ ಒಂಥರಾ ಚನ್ನಾಗಿತ್ತು. ಉಳಿದ ಮೂರು ಪ್ರದೇಶಗಳ ಬಗ್ಗೆ ಚಿಕ್ಕದಾಗಿ ಹೇಳ್ತೀನಿ.

ಬ್ರೈಸ್ ಕಣಿವೆ:–

ಸಮುದ್ರ ಮಟ್ಟದಿಂದ ಸರಿಸುಮಾರು ಎರಡುವರೆಸಾವಿರ ಮೀಟರ್ ಎತ್ತರದಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಇಲ್ಲಿನ ಭೌಗೋಳಿಕ ರಚನೆಯಿಂದ ಬಹಳ ವಿಶಿಷ್ಟವಾದುದು. ಒಂಥರಾ ಅನ್ಯಗ್ರಹದಲ್ಲಿದ್ದಹಾಗೇ ಭಾಸವಾಗುತ್ತದೆ. ಬೆಳಬೆಳಗ್ಗೆ ಅಲ್ಲಿಗೆ ಕರೆದುಕೊಂಡು ಹೋಗಿದ್ದರಿಂದ ಸಾಯುವಷ್ಟು ಚಳಿಯಿತ್ತು. ಎತ್ತರದ ಜಾಗ ಬೇರೆ. ಇಳಿದ ಕೆಲವೇ ಸಮಯದಲ್ಲಿ ಕೈಗಳೆಲ್ಲಾ ಒಡೆಯತೊಡಗಿದವು‌. ಟ್ರಾವೆಲ್ಲಿನವರು ಸಾಕಷ್ಟು ಸಮಯ ಕೊಟ್ಟಿದ್ದರೂ ಚಳಿಯ ದೆಸೆಯಿಂದ ಸಾಕಷ್ಟು ತಿರುಗಲಾಗಲಿಲ್ಲ. ಮತ್ತೆ ಹಿಂದಿನ ರಾತ್ರಿ ಅಲ್ಲೆ ಹತ್ತಿರದ ಹೋಟೇಲಿನಲ್ಲಿ ಇಳಿದುಕೊಂಡಿದ್ದೆವು. ಅದರ ‌ನಿರ್ವಹಣೆಯ ಗುಜರಾತೀ ವ್ಯಕ್ತಿಗಳು ತೆಗೆದುಕೊಂಡಿದ್ದರು, ವ್ಯಾಪಾರಕ್ಕಾಗಿ ಎಂತೆಂತಾ ದೇಶಕ್ಕೆ ಹೋಗ್ತಾರೆ ಇಲ್ಲಿ ತಲುಪಿದ್ದು ಆಶ್ಚರ್ಯವಲ್ಲ ಬಿಡಿ.

Saakshatv yatrika episode 8

ಕನಾಬ್:-

ಯೂಟಾದಲ್ಲಿನ ಚಿಕ್ಕ ಪಟ್ಟಣವಿದು. ಊಟಕ್ಕೆ ನಿಲ್ಲಿಸಿದ್ದರು. ಇದ್ದ ಒಂದು ಗಂಟೆಯಲ್ಲಿ ಊಟ ಕಟ್ಟಿಸಿಕೊಳ್ಳಲು ಹೋಟೇಲನ್ನ ಹುಡುಕಿಕೊಂಡು ಊರನ್ನ ತಿರುಗಿದ್ವಿ. ಬಹಳ ಮುದ್ದಾಗಿದೆ ಊರು. ಚಿಕ್ಕದಾದ ಚೊಕ್ಕದಾದ ಊರು. ಇನ್ನೊಮ್ಮೆ ಈ ಊರಿಗೆ ಬಂದು ಉಳಿದು ಚನ್ನಾಗಿ ಸುತ್ತಬೇಕೆಂಬ ಆಸೆಯಿದೆ. ಅವಕಾಶ ಸಿಕ್ಕರೆ ನೋಡೋಣ.

ಝಯಾನ್ ರಾಷ್ಟ್ರೀಯ ಉದ್ಯಾನ:-

ಯೂಟಾದಲ್ಲಿರುವ ಮತ್ತೊಂದು ನಯನ‌ಮನೋಹರ ರಾಷ್ಟ್ರೀಯ ಉದ್ಯಾನ.‌ ಎತ್ತರದ ಪರ್ವತಗಳು, ಆಳವಾದ ಕಣಿವೆಗಳು, ಅಂತಹ ಮಹಾನ್ ಪರ್ವತಗಳ ಒಡಲನ್ನು ಕೊರೆದು ಮಾಡಿದ ರಸ್ತೆಗಳು ಮನಸೆಳೆಯುತ್ತವೆ.

ಆದರೆ ಮೇಲೆ ಹೇಳಿದ್ದಿರಲೀ, ಹಿಂದಿನ ಭಾಗದಲ್ಲಿ ಹೇಳಿದ ಪ್ರವಾಸಿ ತಾಣಗಳಾಗಳಲೀ ಸಾಕಷ್ಟು ಸಮಯ ಮಾಡಿಕೊಂಡು ನೋಡಬೇಕಾದ ತಾಣಗಳು. ಪ್ಯಾಕೇಜಿನಲ್ಲಿ ಬೇರೆ ಕಿರಿಕಿರಿ ಇರೋಲ್ಲ. ಆದರೆ ಒಳ್ಳೇ ಜಾಗಗಳ‌ ಸರಿಯಾಗಿ ನೋಡೋ ಅವಕಾಶವನ್ನ ಕಳೆದುಕೊಳ್ತೀವಿ.

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

–ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

ಅಮೇರಿಕನ್ ಯಾತ್ರೆ; ಪ್ರಾಕೃತಿಕವಾಗಿ ಶ್ರೀಮಂತ, ಭೌಗೋಳಿಕವಾಗಿ ಭಿನ್ನತೆ ಹೊಂದಿರುವ ಆರ್ಥಿಕವಾಗಿಯೂ ಸಬಲವಾಗಿರುವ ವಿಶೇಷ ರಾಜ್ಯ ಕೊಲರಾಡೋ:

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?https://t.co/tVs0wPf1v3

— Saaksha TV (@SaakshaTv) November 7, 2020

ಎದೆಯುರಿ ನಿವಾರಣೆಗೆ 7 ನೈಸರ್ಗಿಕ ಮನೆಮದ್ದುhttps://t.co/dvehOAVu77

— Saaksha TV (@SaakshaTv) November 7, 2020

 

Tags: Bryce ValleySaakshatv yatrika episode 8yatrika
ShareTweetSendShare
Join us on:

Related Posts

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

ಮಿಜೋರಾಂನಲ್ಲಿ ರಾಷ್ಟ್ರೀಯ ಪಕ್ಷಕ್ಕಿಂತ ಸ್ಥಳೀಯ ಪಕ್ಷಗಳದ್ದೇ ಹವಾ!

by Honnappa Lakkammanavar
November 30, 2023
0

ನವದೆಹಲಿ: ಮಿಜೋರಾಂನಲ್ಲಿ ಮೊದಲ ಹಂತದಲ್ಲಿ ಎಲ್ಲ 40 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಸದ್ಯ ಸಮೀಕ್ಷೆ ಹೊರ ಬಿದ್ದಿದ್ದು, ಪ್ರಾದೇಶಿಕ ಪಕ್ಷಗಳು ಮುಂದಿವೆ ಎನ್ನಲಾಗುತ್ತಿದೆ. ನ. 7ರಂದು ನಡೆದ...

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ

by admin
November 27, 2023
0

ಸ್ತ್ರೀಶಾಪ ನಿವಾರಣೆ ಮಾಡಿಕೊಳ್ಳುವುದು ಹೇಗೆ? ಸ್ತ್ರೀಶಾಪವಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಸ್ತ್ರೀ ಶಾಪ ಎಂದರೇನು? ಒಬ್ಬ ವ್ಯಕ್ತಿಗೆ ಸ್ತ್ರೀ ಶಾಪವಿದ್ದರೆ ಏನೆಲ್ಲಾ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ? ಸ್ತ್ರೀ ಶಾಪ ನಿವಾರಣೆ...

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..!

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..!

by admin
November 27, 2023
0

27 ನವೆಂಬರ್ 2023 ಕಾರ್ತಿಕ ಹುಣ್ಣಿಮೆ ಮೇಷ ಮತ್ತು ಸಿಂಹ ರಾಶಿಯವರಿಗೆ ಈ 5 ರಾಶಿಗಳಿಗೆ ಅದ್ಭುತವಾದ ಲಾಭಗಳು..! ಜಾತಕ ಇಂದು 27 ನವೆಂಬರ್ 2023 ಇಂದು...

ಕಂಬಳಕ್ಕೆ ತೆರೆ; 6 ವಿಭಾಗಗಳಲ್ಲಿ ನಡೆದ ಸ್ಪರ್ಧೆ!

ಕಂಬಳಕ್ಕೆ ತೆರೆ; 6 ವಿಭಾಗಗಳಲ್ಲಿ ನಡೆದ ಸ್ಪರ್ಧೆ!

by Honnappa Lakkammanavar
November 27, 2023
0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜನರನ್ನು ಆಕರ್ಷಿಸಿದ್ದ ಕರಾವಳಿ ಕಂಬಳಕ್ಕೆ (Karavali Kambala) ತೆರೆ ಬಿದ್ದಿದೆ. ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಒಟ್ಟು 158 ಜೊತೆ ಕಂಬಳದ...

ಅಮರರಾದ ಯೋಧ; ಅಪಾರ ಜನರು ಭಾಗಿ

ಅಮರರಾದ ಯೋಧ; ಅಪಾರ ಜನರು ಭಾಗಿ

by Honnappa Lakkammanavar
November 25, 2023
0

ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿರುವ ಕ್ಯಾಪ್ಟನ್‌ ಪ್ರಾಂಜಲ್‌ (Captain Pranjal) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ದಂಪತಿ ವಿಚಾರಣೆ ನಡೆಸಿದ ಗುಪ್ತಚರ ಇಲಾಖೆ ಸಿಬ್ಬಂದಿ

ದಂಪತಿ ವಿಚಾರಣೆ ನಡೆಸಿದ ಗುಪ್ತಚರ ಇಲಾಖೆ ಸಿಬ್ಬಂದಿ

December 2, 2023
ಗಾಜಾದಲ್ಲಿ ಐವರು ಒತ್ತೆಯಾಳುಗಳು ಸಾವು

ಗಾಜಾದಲ್ಲಿ ಐವರು ಒತ್ತೆಯಾಳುಗಳು ಸಾವು

December 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram