ಬೆಂಗಳೂರು : ಸರ್ಕಾರದಲ್ಲಿ ಇರುವವರು ಡ್ರಗ್ಸ್ ದಂಧೆಯಲ್ಲಿ ತುಂಬಾ ಜನರಿದ್ದಾರೆ.
ಪ್ರಕರಣದ ತಾರ್ಕಿತ ಅಂತ್ಯ ಕಾಣಬೇಕಾದರೆ ಸೂಕ್ತ ತನಿಖೆ ಆಗಬೇಕು.
ಸರಿಯಾದ ತನಿಖೆ ಆಗದೇ ಹೋದರೆ ಈ ಪ್ರಕರಣವೂ ಕೋಲ್ಡ್ ಸ್ಟೋರೇಜ್ ಗೆ ಹೋಗುತ್ತೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡಾನ್ಸ್ ಬಾರ್, ನೈಟ್ ಬಾರ್ ಗಳಲ್ಲಿ ಡ್ರಗ್ ದಂಧೆಯ ಮೂಲವಿದೆ.
ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಬೆಳಗ್ಗೆ 4 ವರಗೆ ಪಾರ್ಟಿ ನಡೆಯುತ್ತಿತ್ತು.
ವಿಠ್ಠಲ್ ಮಲ್ಯ ರೋಡ್ ನಲ್ಲಿ ಮೈಕ್ರೋ ಬ್ರೆವರೀಸ್ ಹೊಟೇಲ್ ಹಿಂದೆಯೂ ಪಾರ್ಟಿಗಳು ನಡೆಯುತ್ತಿತ್ತು. ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವವರು ಯಾರು ಈ ಬಗ್ಗೆ ಸರ್ಕಾರ ತನಿಖೆ ಮಾಡಲಿ.
ಸದ್ಯ ಕೇವಲ ಕೆಲ ನಟ-ನಟಿಯರ ಮೇಲೆ ದಾಳಿ ಆಗಿದೆ. ಅವರು ಮಾತ್ರ ಡ್ರಗ್ಸ್ ದಂಧೆಯಲ್ಲಿದ್ದಾರಾ ಇನ್ನೂ ಅನೇಕ ಜನ ಇದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳು ದಂಧೆಯಲ್ಲಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ವಿಶ್ವನಾಥ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ನನಗೆ ಮದ, ಅಧಿಕಾರದ ಮತ್ತು ಬಂದಿಲ್ಲ. ವಿಶ್ವನಾಥ್ ಬಗ್ಗೆ ಚರ್ಚೆ ಮಾಡಿದರೆ ನನ್ನ ಬಗ್ಗೆ ನಾನೇ ಡೀ ಗ್ರೇಡ್ ಮಾಡಿಕೊಂಡಂತೆ.
ಆ ವ್ಯಕ್ತಿಯ ನಡವಳಿಕೆ, ಅಭಿರುಚಿ ನನಗೆ ಗೊತ್ತಿದೆ. ಅವತ್ತೇ ನಾನು ಹೇಳಿದ್ದೆ, ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ.
25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದೆ. ಕೈಗಾರಿಕಾ ಕ್ಲಸ್ಟರ್ ಗೆ ಚಾಲನೆ ನೀಡಿದ್ದೆ. ಇಂದು ಮೋದಿ ಅವರು ಆತ್ಮ ನಿರ್ಭರ ಭಾರತ ಎಂದು ಮಾಡುತ್ತಿದ್ದಾರೆ.
ನಾನು ಕಡಿಮೆ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ, ಕಳ್ಳ ಭಟ್ಟಿ, ಲಾಟರಿ, ಸಾರಾಯಿ ನಿಲ್ಲಿಸಿದ್ದೇನೆ. ರಾಜ್ಯಕ್ಕೆ ನನ್ನ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.