ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸರ್ಫರಾಜ್ ಖಾನ್, ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿ ಜೀವನದ ಮೂರನೇ ಟೆಸ್ಟ್ ಸಿಡಿಸಿ ಹಲವರು ಆಸೆಗೆ ತಣ್ಣೀರು ಎರಚಿದ್ದಾರೆ.
ಸರ್ಫರಾಜ್ ಆಡಿದ ಎರಡೂ ಇನ್ನಿಂಗ್ಸ್ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಧರ್ಮಶಾಲಾ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮತ್ತೊಮ್ಮೆ ಅರ್ಧಶತಕ ಸಿಡಿಸಿದ್ದಾರೆ. ಅವರ ಈ ಅರ್ಧಶತಕ ಮೂವರು ಶ್ರೇಷ್ಠ ಭಾರತೀಯ ಆಟಗಾರರ ವೃತ್ತಿಜೀವನ ಅಂತ್ಯಗೊಳಿಸಿದೆ.
ಈ ಅರ್ಧಶತಕ ಭಾರತ ತಂಡದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಅವರ ಪುನರಾಗಮನಕ್ಕೆ ಬ್ರೇಕ್ ಹಾಕಿದೆ. 36 ವರ್ಷದ ಪೂಜಾರ ಈ ವರ್ಷ ರಣಜಿ ಟ್ರೋಫಿಯಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಆದರೂ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ.
ರಜತ್ ಪಾಟಿದಾರ್ ಕೂಡ ಅವಕಾಶ ವಂಚಿತರಾದಂತಾಯಿತು. ರಾಹುಲ್ ಹೊರಬಿದ್ದ ನಂತರ, ಪೂಜಾರ ಹೆಸರು ಮತ್ತೆ ಮುನ್ನೆಲೆಗೆ ಬಂದಿತ್ತು. ಆದರೆ ಸೆಲೆಕ್ಟರರ್ಸ್ ಸರ್ಫರಾಜ್ ಖಾನ್ ಪರ ಬ್ಯಾಟ್ ಬೀಸಿದರು.. ಚೇತೇಶ್ವರ ಪೂಜಾರ ನಂತರ ಅಜಿಂಕ್ಯ ರಹಾನೆಗೂ ಟೀಂ ಇಂಡಿಯಾ ಬಾಗಿಲು ಮುಚ್ಚಿದಂತ್ತಾಗಿದೆ. ಸರ್ಫರಾಜ್ ಖಾನ್ ಫಾರ್ಮ್ ಹನುಮ ವಿಹಾರಿಗೆ ಟೀಂ ಇಂಡಿಯಾದಲ್ಲಿನ ಅವಕಾಶಗಳನ್ನು ಅಂತ್ಯಗೊಳಿಸಿದೆ. ಹನುಮ ವಿಹಾರಿ ಭಾರತದ ಪರ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.