ರಾಜಾಹುಲಿ ಉತ್ತರಾಧಿಕಾರಿ ಯಾರು : ಸಿಎಂ ರೇಸ್ ನಲ್ಲಿರುವವರ ಅರ್ಹತೆ ಏನು..?
ಬೆಂಗಳೂರು : ಸುದೀರ್ಫ ಕಾಲ ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕರಾಗಿ ಪಕ್ಷವನ್ನು ಕಟ್ಟಿದ ಮತ್ತು ಪಕ್ಷವನ್ನು ಅಧಿಕಾರಕ್ಕೆ ತಂದ ಬಿಎಸ್ ಯಡಿಯೂರಪ್ಪ ಇನ್ನೇನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯೋದು ಪಕ್ಕಾ ಆಗಿದೆ.
ಆದ್ರೆ ಬಿ.ಎಸ್.ಯಡಿಯೂರಪ್ಪ ಅವರ ನಂತ್ರ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಇನ್ನೂ ಯಾವುದೇ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಿಎಂ ರೇಸ್ ನಲ್ಲಿ ಆರು ಮಂದಿಯ ಹೆಸರುಗಳು ಕೇಳಿಬರುತ್ತಿವೆ ಆದ್ರೂ ಯುವ ನಾಯಕರೊಬ್ಬರಿಗೆ ಪಟ್ಟಕಟ್ಟಲು ಬಿಜೆಪಿ ಹೈಕಮಾಂಡ್ ಆಲೋಚನೆ ಮಾಡಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಹಾಗಾದ್ರೆ ಸಿಎಂ ರೇಸ್ ನಲ್ಲಿ ಯಾರಿದ್ದಾರೆ..? ಅವರ ಅನುಭವವೇನು..? ಅಂತ ನೋಡೋದಾದ್ರೆ…
ಪ್ರಹ್ಲಾದ್ ಜೋಶಿ : ಹುಬ್ಬಳ್ಳಿ- ಧಾರವಾಡ ಸಂಸದರು, ಸದ್ಯ ಕೇಂದ್ರ ಸಚಿವರು. ಹಿರಿಯರು, ಅನುಭವಿ ರಾಜಕಾರಣಿ, ಸಂಘ ಪರಿವಾರದ ಕಟ್ಟಾಳು, ಮೋದಿ ಆಪ್ತ, ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ: ಶಿರಸಿಯ ಶಾಸಕರೂ, ಹಾಲಿ ವಿಧಾನಸಭಾ ಸ್ಪೀಕರ್. ಆರ್ಎಸ್ ಎಸ್ ಪರಿವಾರದವರು, ಪಕ್ಷದ ಮೇಲೆ ನಿಷ್ಠೆ, ಅನುಭವಿ ರಾಜಕಾರಣಿ, ಕಳಂಕ ರಹಿತ ರಾಜಕಾರಣಿ, ಬ್ರಾಹ್ಮಣ ಸಮುದಾಯದ ಮುಖಂಡರಾಗಿದ್ದಾರೆ.
ಸಿ.ಟಿ.ರವಿ : ಚಿಕ್ಕಮಗಳೂರು ಶಾಸಕರಾಗಿರುವ ಇವರು ಸದ್ಯ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಯುವ ಮುಖಂಡರು ಹಾಗೂ ಹಿಂದುತ್ವದ ಪ್ರತಿಪಾದಕ, ಸಂಘ ಪರಿವಾರದ ಕಟ್ಟಾಳು, ಸಂಘಟನಾ ಚತುರ. ವಿಪಕ್ಷಗಳಿಗೆ ಇದ್ದಲ್ಲಿಯೇ ಚಳ ಬಿಡಿಸುವ ವಾಗ್ಮಿ.
ಅರವಿಂದ್ ಬೆಲ್ಲದ್ : ಕಳೆದೊಂದು ತಿಂಗಳಿನಿಂದ ಬೆಲ್ಲದ್ ಹೆಸರು ಭಾರಿ ಹರಿದಾಡುತ್ತಿದೆ. ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೆ ಬೆಲ್ಲದ್ ಹೆಸರು ಕೂಡ ಮುನ್ನಲೆಗೆ ಬಂದಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಬಿಜೆಪಿ ಯುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ಪಾಲಿನ ನೀಲಿಗಣ್ಣಿನ ಹುಡುಗ, ಪಂಚಮಸಾಲಿ ಸಮುದಾಯದ ಮುಖಂಡ, ಪಕ್ಷದೆಡೆಗಿನ ನಿಷ್ಠೆ ಹೊಂದಿದ್ದಾರೆ.
ಮುರುಗೇಶ್ ನಿರಾಣಿ : ಸಿಎಂ ರೇಸ್ ನಲ್ಲಿ ನಿರಾಣಿ ಹೆಸರು ಕೂಡ ಕೇಳಿಬಂದಿದ್ದು, ಸದ್ಯ ಇವರು ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವರಾಗಿದ್ದಾರೆ. ಉದ್ಯಮಿ, ಪಂಚಮಸಾಲಿ ಸಮುದಾಯದ ಪ್ರಮುಖ ಮುಖಂಡ, ಹೈಕಮಾಂಡ್ ನಾಯಕರೊಂದಿಗೆ ನಂಟು, ಅಮಿತ್ ಶಾ ಜೊತೆಗೆ ಒಡನಾಟ ಹೊಂದಿದ್ದಾರೆ.
ಅಶ್ವಥ್ ನಾರಾಯಣ : ಯುವ ನಾಯಕ, ಒಕ್ಕಲಿಗ ಸಮುದಾಯದ ಮುಖಂಡ, ಸಾಮಥ್ರ್ಯ ಪರೀಕ್ಷೆ ನಡೆಸಲು ಡಿಸಿಎಂ ಹುದ್ದೆ ನೀಡಲಾಗಿದೆ.
ಇವರಲ್ಲದೆ ಕಾಂತ್ರಿಕಾರಿಕ ಬದಲಾವಣೆಗಳಿಗೆ ಹೈಕಮಾಂಡ್ ಕೈ ಹಾಕಿದ್ದೇಯಾದಲ್ಲಿ ಅಚ್ಚರಿಯಾಗಿ ಇನ್ನೊಂದು ಹೆಸರು ಈ ಸಿಎಂ ರೇಸ್ ನಲ್ಲಿ ಬರಲಿದೆ. ಅದು ಸಂಸದ ತೇಜಸ್ವಿ ಸೂರ್ಯ..! ಹೌದು..! ತೇಜಸ್ವಿ ಸೂರ್ಯ ಕಡಿಮೆ ಅವಧಿಯಲ್ಲಿ ರಾಜ್ಯವ್ಯಾಪಿಯಾಗಿ ಹೆಸರು ಗಳಿಸಿದ್ದಾರೆ. ಇವರನ್ನ ಸಿಎಂ ಪಟ್ಟದಲ್ಲಿ ಕೂರಿಸಿದರೂ ಅಚ್ಚರಿ ಏನಿಲ್ಲ.