ಸೀತಾಮಾತೆಗೆ ಅವಮಾನ ಮಾಡಿದ ಸುರ್ಜೇವಾಲಾ ದೇಶದ ಕ್ಷಮೆ ಕೇಳಬೇಕು
ಬೆಂಗಳೂರು : ಸೀತಾಮಾತೆಗೆ ಅವಮಾನ ಮಾಡಿದ ಸುರ್ಜೇವಾಲಾ ದೇಶದ ಕ್ಷಮೆ ಕೇಳಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಕೇಂದ್ರ ಸರ್ಕಾರವನ್ನು ಟೀಕಿಸಿರುವ ರಣದೀಪ್ ಸುರ್ಜೇವಾಲಾ ಅಂದು ಸೀತಾ ಮಾತೆಯ ವಸ್ತ್ರಾಪಹರಣ ಮಾಡಿದಂತೆ ಇಂದು ಬಿಜೆಪಿಯವರು ಪ್ರಜಾಪ್ರಭುತ್ವವನ್ನು ಬೆತ್ತಲೆಗೊಳಿಸಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನ ಸುರ್ಜೇವಾಲಾ ಹೇಳಿಕೆ ನೀಡಿದ್ದರು.

ಇದಕ್ಕೆ ಬಿಜೆಪಿ ಕಿಡಿಕಾರಿದ್ದು, ಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ. ರಾಮಾಯಣ ಹಾಗೂ ಮಹಾಭಾರತ ಓದಬೇಕಿರುವ ಮಕ್ಕಳಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರನ್ನು ವೈಭವಿಕರಿಸಿದರೆ ಆಗೋದು ಹೀಗೆ. ಏನಂತೀರಿ, ಸಿದ್ದರಾಮಯ್ಯ ಅವರೇ?
ಮಾನ್ಯ @rssurjewala ಅವರೇ,
ರಾಮಾಯಣವು ತ್ರೇತಾ ಯುಗದಲ್ಲಿ ನಡೆದಿದ್ದು, ಮಹಾಭಾರತವು ದ್ವಾಪರಯುಗದಲ್ಲಿ.,
ಬಿಜೆಪಿಯ ಕಮಲವು ಎಲ್ಲೆಡೆ ಅರಳುತ್ತಿದ್ದು, ಕಾಂಗ್ರೆಸ್ ಈಗ ಕೊನೆಗಾಲದಲ್ಲಿದೆ.#SurjewalaDairies
— BJP Karnataka (@BJP4Karnataka) June 10, 2022
ಮಾನ್ಯ ಸುರ್ಜೇವಾಲಾ ಅವರೇ, ರಾಮಾಯಣವು ತ್ರೇತಾ ಯುಗದಲ್ಲಿ ನಡೆದಿದ್ದು, ಮಹಾಭಾರತವು ದ್ವಾಪರಯುಗದಲ್ಲಿ. ಬಿಜೆಪಿಯ ಕಮಲವು ಎಲ್ಲೆಡೆ ಅರಳುತ್ತಿದ್ದು, ಕಾಂಗ್ರೆಸ್ ಈಗ ಕೊನೆಗಾಲದಲ್ಲಿದೆ.
2007 ರಲ್ಲಿ, ಆಗಿನ ಯುಪಿಎ ಸರ್ಕಾರ ರಾಮ ಇರುವ ಬಗ್ಗೆ ದಾಖಲೆ ಇಲ್ಲ ಎಂದ ಕಾಂಗ್ರೆಸ್ ರಕ್ತ ನಿಮ್ಮಲ್ಲಿರುವುದು. ಹಾಗಾಗಿ ನಿಮಗೆ ಸೀತಾಮಾತೆಯ ಬಗ್ಗೆ ಗೌರವ ಇಲ್ಲ, ಇದು ಹಿಂದುಗಳಿಗೆ ಮಾಡಿದ ಅವಮಾನ.
ಸುರ್ಜೇವಾಲಾ ಅವರೇ, ರಾಷ್ಟ್ರದ ನೈಜ ಇತಿಹಾಸದ ಬದಲು ಮೊಗಲರ ಇತಿಹಾಸವನ್ನು ನೀವು ಓದಿರುವುದರಿಂದ ಈ ದೋಷವುಂಟಾಗಿದೆ. ಸೀತಾಮಾತೆಗೆ ಅವಮಾನ ಮಾಡಿದ ನೀವು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.