T20 World Cup : ಭಾರತ ಸೆಮಿಫೈನಲ್ ಗೇರುವ ಸಾಧ್ಯತೆ 30% ಮಾತ್ರ – ಕಪಿಲ್ ದೇವ್…
ಆಸ್ಟೇಲಿಯಾದಲ್ಲಿ ನಡೆಯುತ್ತಿರುವ T20 World Cup ನಲ್ಲಿ ಭಾರತ ಸೆಮಿಫೈನಲ್ ತಲುಪುವ ಸಾಧ್ಯತೆ ಕೇವಲ 30% ಮಾತ್ರ ಎಂದು ಕಪಿಲ್ ದೇವ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಟೀಂ ಇಂಡಿಯಾ ಆಟಗಾರರ ಕುರಿತು ಮಾತನಾಡಿದ್ದಾರೆ. “ವಿಶ್ವಕಪ್ನಲ್ಲಿ ಮತ್ತು ಮುಂದಿನ ದಿನಗಳಲ್ಲಿ ಆಲ್ರೌಂಡರ್ಗಳ ಮೇಲೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ. ಅವರು ಮ್ಯಾಚ್ ವಿನ್ನರ್ ಆಗಲಿದ್ದಾರೆ. ಆಲ್ ರೌಂಡರ್ ಗಳು ತಂಡದ ಪ್ರಮುಖ ಆಟಗಾರರು. ಟೀಂ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯ ಬಹಳ ಮುಖ್ಯ. ನಾಯಕ ರೋಹಿತ್ ಶರ್ಮಾ ಆರನೇ ಬೌಲರ್ ಬಳಸುವ ಸಾಮರ್ಥ್ಯವನ್ನ ಪಾಂಡ್ಯ ನೀಡುತ್ತಾರೆ. ಅವರು ಉತ್ತಮ ಬ್ಯಾಟ್ಸ್ಮನ್, ಬೌಲರ್ ಮತ್ತು ಫೀಲ್ಡರ್ ಕೂಡ. ರವೀಂದ್ರ ಜಡೇಜಾ ಭಾರತದ ಶ್ರೇಷ್ಠ ಆಲ್ರೌಂಡರ್ ಕೂಡ.
ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಬಗ್ಗೆ ಕೇಳಿದಾಗ, “ಮೊಹಮ್ಮದ್ ಶಮಿ ಬುಮ್ರಾಗೆ ಪರಿಪೂರ್ಣ ಬದಲಿ. ಶಮಿ ಒಬ್ಬ ಶ್ರೇಷ್ಠ ಬೌಲರ್ ಮತ್ತು ರೋಹಿತ್ ಶಮಿಯನ್ನು ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಬೇಗನೇ ಗಾಯಗೊಳ್ಳುವುದು ಇಂದಿನ ಬೌಲರ್ಗಳ ದೊಡ್ಡ ಸಮಸ್ಯೆಯಾಗಿದೆ ಎಂದು ಕಪಿಲ್ ಹೇಳಿದ್ದಾರೆ.
ಅಕ್ಟೋಬರ್ 23 ರಂದು ಭಾರತ ಪಾಕಿಸ್ತಾನ ಪಂದ್ಯ
ಟೀಂ ಇಂಡಿಯಾ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಸೂಪರ್-12ರಲ್ಲಿ ಪಾಕಿಸ್ತಾನ ಹೊರತುಪಡಿಸಿ ಇತರ ನಾಲ್ಕು ತಂಡಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಿದೆ.
T20 World Cup: India has only 30% chance of reaching semi-finals – Kapil Dev…