ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಮಾಲಿಕನನ್ನೆ ಕೊಂದ ಸೆಕ್ಯೂರಿಟಿ ಗಾರ್ಡ
ಕುಡಿದು ಕೆಲಸಕ್ಕೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಅಪಾರ್ಟ್ಮೆಂಟ್ ಮಾಲಿಕನನ್ನ ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಚ್ ಎಎಲ್ ನ ಎಸಿಎಸ್ ಲೇಔಟ್ ಡಿ ಬ್ಲಾಕ್ ನಲ್ಲಿ ಬರುವ ಪದ್ಮ ಅಪಾರ್ಟ್ಮೆಂಟ್ ನ 65 ವರ್ಷದ ಬಾಸ್ಕರ್ ರೆಡ್ಡಿ ಕೊಲೆಯಾದ ಮೃತ ದುರ್ದೈವಿ. ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ಬಸಂತ್ ನನ್ನ ಎಚ್ ಎ ಎಲ್ ಠಾಣೆಯ ಪೊಲೀಸ್ ರು ಬಂಧಿಸಿದ್ದಾರೆ.
ಕ್ಷುಲ್ಲಕ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆರಳಿ ಭಾಸ್ಕರ್ ರೆಡ್ಡಿ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೆ ಗಾಯಾಳುವನ್ನ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತ ಸ್ತ್ರಾವದಿಂದಾಗಿ ಸಾವನ್ನಪ್ಪಿದ್ದಾರೆ.
ಮದ್ಯ ವ್ಯಸನಿ ಆಗಿದ್ದ ಬಸಂತ್, ಪ್ರತಿ ದಿನ ರಾತ್ರಿ ಕರ್ತವ್ಯದ ವೇಳೆ ಪಾನಮತ್ತನಾಗಿರುತ್ತಿದ್ದ. ಇದನ್ನು ಗಮನಿಸಿದ ಭಾಸ್ಕರ್ ರೆಡ್ಡಿ, ಬಸಂತ್ ಗೆ ಕುಡಿದು ಕೆಲಸ ಮಾಡದಂತೆ ಎಚ್ಚರಿಸಿದ್ದರು. ಇದೇ ವಿಷಯ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.