ಶಾಲೆಗೆ ಬರಬೇಕು ಅನ್ನುವರು ಸಮವಸ್ತ್ರ ಸಂಹಿತೆಯನ್ನು ಅನುಸರಿಸಬೇಕು: ಬಿ ಸಿ ನಾಗೇಶ್ Saaksha Tv
ಚಾಮರಾಜನಗರ: ಶಾಲೆಗೆ ಬರಬೇಕು ಅನ್ನುವರು ಸಮವಸ್ತ್ರ ಸಂಹಿತೆಯನ್ನು ಅನುಸರಿಸಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಚಾಮರಾಜನಗರದ ದೀನಬಂಧು ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸ್ತ್ರಸಂಹಿತೆ ಇದು ಬಿಜೆಪಿ ಬಂದ ಬಳಿಕ ತಂದ ಕಾಯ್ದೆ ಅಲ್ಲ, ರೂಲ್ 11ರಂತೆ ಶಾಲೆಗಳು ಅಳವಡಿಸುವ ವಸ್ತ್ರಸಂಹಿತೆಯನ್ನು ಅನುಸರಿಸುವುದ ವಿದ್ಯಾರ್ಥಿಗಳ ಕರ್ತವ್ಯ. ಶಿಕ್ಷಣ ಆಸಕ್ತರೆಲ್ಲಾ ಇದನ್ನು ಪಾಲನೆ ಮಾಡುತ್ತಾರೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯಯಾಗಲಿ, ಧರ್ಮವಾಗಲಿ ಬೇಡ. ಮಕ್ಕಳ ಮನಸ್ಸಲ್ಲಿ ಸಮಾನತೆ, ಬ್ರಾತೃತ್ವ ಸಂಪಾದನೆ ಮಾಡಲು ಸಮವಸ್ತ್ರ ಬಹಳಷ್ಟು ಪರಿಣಾಮ ಬೀರಲಿದೆ. ಪ್ರಚೋದನೆ ಮಾಡಿ ಶಿಕ್ಷಣವನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿರುವವರಿಗೆ ಸರಿಯಾದ ಉತ್ತರವನ್ನು ಮಕ್ಕಳು-ಪಾಲಕರು ಕೊಡಬೇಕೆಂದು ತಿಳಿಸಿದರು.