8 % ವೇತನ ಹೆಚ್ಚಳ ಮಾಡಲು ಸಿದ್ಧರಿದ್ದೇವೆ.. ಪ್ರತಿಭಟನೆಯನ್ನು ಸ್ಟ್ರಿಟ್ ಆಗಿ ಡೀಲ್ ಮಾಡ್ತೇವೆ – ಸಿ ಎಸ್ ರವಿಕುಮಾರ್
ಸಾರಿಗೆ ನೌಕರರರ ಮುಷ್ಕರ ಹಿನ್ನೆಲೆ 8 % ವೇತನ ಹೆಚ್ಚಳ ಮಾಡಲು ನಾವು ಸಿದ್ದರಿದ್ದೇವೆ, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ. ಅವರು ಒಪ್ಪಿಗೆ ಸೂಚಿಸಿದ್ರೆ ನಾವು ಕೂಡಲೇ ಹೆಚ್ಚಳ ಮಾಡುತ್ತೇವೆ . ಯಾರ ಸಂಬಳ ಕೂಡ ಕಡಿತ ಮಾಡಿಲ್ಲ ಎಂದು ಸಿಎಸ್ ರವಿ ಕುಮಾರ್ ಕುಮಾರ್ ಅವರು ತಿಳಿಸಿದ್ದಾರೆ.
ಟ್ರಾನ್ಸ್ ಪೋರ್ಟ್ ಪ್ರತಿಭಟನೆಯನ್ನು ನಾವು ಸ್ಟ್ರಿಟ್ ಆಗಿ ಡೀಲ್ ಮಾಡ್ತೇವೆ . ಅವರ ಜತೆ ಮತ್ತೆ ನಾವು ಸಂಧಾನಕ್ಕೆ ಹೋಗಲ್ಲ. ಈಗಾಗಲೇ ಅವರ ಜತೆ ಮಾತಾಡಿ ಆಗಿದೆ . ಇನ್ನೂ ಕಾನೂನು ರೀತಿ ನಾವು ಚಿಂತನೆ ಮಾಡ್ತೇವೆ . ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ್ರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ತೇವೆ. ಯಾರನ್ನು ಕೂಡ ಬಿಡುವುದಿಲ್ಲ. ಎಸ್ಮಾ ಜಾರಿ ಮಾಡುವ ಕುರಿತಾಗಿಯೂ ಕೂಡ ಚಿಂತನೆ ಮಾಡ್ತೇವೆ ಎಂದಿದ್ದಾರೆ.
144 ಸೆಕ್ಷನ್ ಜಾರಿಯಾಗಿರುತ್ತೆ : ಸಾರಿಗೆ ನೌಕರರಿಗೆ ಕಮಲ್ ಪಂತ್ ಎಚ್ಚರಿಕೆ
ಸಾರಿಗೆ ನೌಕರರ ಮುಷ್ಕರ – . ಖಾಸಗಿ ಬಸ್ ಗಳ ಓಡಾಟಕ್ಕೆ ಫ್ರೀ ಪರ್ಮಿಟ್..!