U. T. Khader | ಸಮಾಜ ಒಡೆಯುವ ಸಂಘಟನೆಗಳ ಮೇಲೆ ಕ್ರಮ ಆಗಲಿ
ಮಂಗಳೂರು : ಸಮಾಜ ಒಡೆಯುವ ಯಾವುದೇ ಸಂಘಟನೆಗಳ ಮೇಲೆ ಕ್ರಮ ಆಗಲಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಯು.ಟಿ.ಖಾದರ್ ಪ್ರತಿಕ್ರಿಯೆ ನೀಡಿದ್ದು, ದೇಶದಲ್ಲಿ ಶಾಂತಿ ಸಾಮರಸ್ಯ ಹದಗೆಡಿಸುವ ಯಾವುದೇ ಸಂಘಟನೆ ವಿರುದ್ದ ಕ್ರಮ ಆಗಬೇಕು.
ಇದು ಸರ್ಕಾರದ ಜವಾಬ್ದಾರಿ, ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳ ಮೇಲೆ ಕ್ರಮ ಆಗಲಿ.
ಹಲ್ಲೆ, ಅಶಾಂತಿ, ಕೋಮುದ್ವೇಷದ ಸಂಘಟನೆ ವಿರುದ್ಧ ಕ್ರಮ ಆಗಲಿ. ತಾರತಮ್ಯ ಮಾಡದೇ ಸದುದ್ದೇಶದಿಂದ ಕ್ರಮ ಆಗಲಿ ಎಂದು ಒತ್ತಾಯಿಸಿದ್ದಾರೆ.
ಒಂದು ಕ್ರಮದ ಮೂಲಕ ಭವಿಷ್ಯದಲ್ಲಿ ಸಮಾಜದಲ್ಲಿ ಅಶಾಂತಿ ಕಡಿಮೆಯಾಗಬೇಕು, ಉತ್ತಮ ಸಮಾಜ ನಿರ್ಮಾಣ ಮಾಡಲು ಕ್ರಮಗಳು ಅಗತ್ಯ.

ಬ್ಯಾನ್ ಮಾಡುವ ವಿಚಾರದಲ್ಲಿ ಕಾನೂನು ಮತ್ತು ಕೋರ್ಟ್ ಅದನ್ನ ನೋಡುತ್ತೆ. ಸಮಾಜ ಒಡೆಯುವ ಯಾವುದೇ ಸಂಘಟನೆಗಳ ಮೇಲೆ ಕ್ರಮ ಆಗಲಿ.
ಯಾವುದೇ ಸಂಘಟನೆಗಳನ್ನ ಸಮಾಜದಲ್ಲಿ ಹೇಗೆ ಬಿಂಬಿಸ್ತಾರೆ ಗೊತ್ತಿಲ್ಲ. ಅಂತಹ ಯಾವುದೇ ಮಾಹಿತಿ ನನಗಿಲ್ಲ.
ಸಮಾಜದ ಬಹುತೇಕ ಜನರಿಗೆ ಪ್ರೀತಿ, ಸೌಹಾರ್ದತೆ ಬೇಕು. ರಾಜಕೀಯವಾಗಿ ಯಾವ ಪರಿಣಾಮ ಅಗುತ್ತೆ ಅನ್ನೋದು ನನಗೆ ಗೊತ್ತಿಲ್ಲ.
ಸಾಕ್ಷ್ಯಧಾರ ಇದ್ದಲ್ಲಿ ತಾರತಮ್ಯ ಮಾಡದೇ ಕ್ರಮ ತೆಗೆದುಕೊಳ್ಳಬೇಕು. ಕೋಮುದ್ವೇಷದ ಆಧಾರದಲ್ಲಿ ಆದ ಕೊಲೆಗಳು ಸಮಾಜದಲ್ಲಿ ಆಗ್ತಾ ಇದೆ.
ಸತ್ತಾಗಲೂ ಪರಿಹಾರ ಕೋಡೋದ್ರಲ್ಲಿ ತಾರತಮ್ಯ ಆಗ್ತಿದೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಸಮಾನತೆಯ ಕ್ರಮ ಆಗಬೇಕು ಎಂದು ಯು ಟಿ ಖಾದರ್ ಹೇಳಿದ್ದಾರೆ.









