ADVERTISEMENT
Wednesday, July 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸತತ ಪರಿಶ್ರಮದ ಮೂಲಕ ಗುರಿ ಮುಟ್ಟಿದ ದೃಢ ಸಂಕಲ್ಪದ ಯಲ್ಲಾಪುರದ ಹುಡುಗನ ಯುಪಿಎಸ್ ಸಿ ಜೈತ್ರಯಾತ್ರೆ:

admin by admin
August 5, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸತತ ಪರಿಶ್ರಮದ ಮೂಲಕ ಗುರಿ ಮುಟ್ಟಿದ ದೃಢ ಸಂಕಲ್ಪದ ಯಲ್ಲಾಪುರದ ಹುಡುಗನ ಯುಪಿಎಸ್ ಸಿ ಜೈತ್ರಯಾತ್ರೆ:

ಇವರ ಹೆಸರು ವೆಂಕಟ್ರಮಣ ಕವಡಿಕೇರಿ. ಯುಪಿಎಸ್ ಸಿ ಫಲಿತಾಂಶ ದಲ್ಲಿ ಇವರಿಗೆ ಭಾರತದ 363ನೇ ರ್ಯಾಂಕ್ ದೊರಕಿದೆ. ಈ ಮೂಲಕ ಇವರು ಕರ್ನಾಟಕದಿಂದ ಆಯ್ಕೆಯಾದ ಪ್ರತಿಷ್ಠಿತ ಅಧಿಕಾರಿಗಳ ಸಾಲಿಗೆ ಸೇರಿದ್ದಾರೆ. ಈ ಪಯಣದ ಹಿಂದಿನ ಕತೆ ಸ್ಫೂರ್ತಿದಾಯಕವಾದದ್ದು. ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಇದು ಇವರ 5ನೇ ಪ್ರಯತ್ನ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಒಟ್ಟೂ ಲಭ್ಯವಿರುವುದು 6 ಯತ್ನಗಳು ಮಾತ್ರ. ಈ ಮೊದಲು ಇವರು 3 ಬಾರಿ ಇಂಟರ್ವ್ಯೂ ಹಂತದ ತನಕ ತಲುಪಿದ್ದರು, ಇದು ನಾಲ್ಕನೇ ಬಾರಿ! ಗಮನಿಸಿ, ಯುಪಿಎಸ್ ಸಿ ಪರೀಕ್ಷೆ ಈಗಂತೂ ಅಸಾಧ್ಯವಾದ ಪೈಪೋಟಿ ಹಾಗೂ ಅನಿರೀಕ್ಷತೆ ಯನ್ನು ಹೊಂದಿದೆ. ಇದರಲ್ಲಿ ಈಜಿ ಜಯಿಸುವುದು ಖಂಡಿತ ಸುಲಭವಲ್ಲ.

Related posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

July 1, 2026
ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

July 1, 2026

ನನಗೆ ವೆಂಕಟ್ರಮಣ ಬಿಎಂಎಸ್ ಇಂಜಿನಿರಿಂಗ್ ದಿನದಿಂದ ಒಳ್ಳೆಯ ಪರಿಚಯ, ಆತ ನನಗೆ ಒಂದು ವರ್ಷ ಸೀನಿಯರ್. ಆಗ ಕನ್ನಡ ಸಂಘದಲ್ಲಿ ಒಡನಾಟ ಚೆನ್ನಾಗಿತ್ತು. ವೆಂಕಟ್ರಮಣ ಕನ್ನಡ ರಸಪ್ರಶ್ನೆ ಕಾರ್ಯಕ್ರಮವನ್ನು ಅದ್ಭುತ ವಾಗಿ ನಡೆಸಿಕೊಡುತ್ತಿದ್ದ. ಅವನು ತೆರಳಿದ ಮೇಲೆ, ನಾನೂ ಅವನ ಮಾದರಿಯನ್ನೇ ಮುಂದುವರಿಸಿದೆ. ಆಗಲೂ ಅವನಿಗೆ ಯುಪಿಎಸ್ ಸಿ ಪರೀಕ್ಷೆ ಯನ್ನು ಬರೆದು ಐ ಎ ಎಸ್ ಅಧಿಕಾರಿ ಆಗಬೇಕೆನ್ನುವ ಆಕಾಂಕ್ಷೆ ಬಲವಾಗಿತ್ತು. ತನ್ನ ಇಂಜಿನಿಯರಿಂಗ್ ಅಭ್ಯಾಸ ದೊಂದಿಗೆ ಆಗಲೇ ಆತ ಪ್ರತಿನಿತ್ಯ ದಿನಪತ್ರಿಕೆಗಳನ್ನ, ಮ್ಯಾಗಜೀನ್ ಗ ಳನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದ. ಸ್ವಲ್ಪ ಸಮಯ ಸಿಕ್ಕರೆ ಸಾಕು, ಎಲ್ಲ ಪತ್ರಿಕೆಗಳನ್ನು ಟೇಬಲ್ ನ ಮೇಲೆ ಹರಡಿಕೊಂಡು ಅಧ್ಯಯನದಲ್ಲಿ ಮಗ್ನನಾಗುತ್ತಿದ್ದ. ದಿನಪತ್ರಿಕೆ ಗಳನ್ನ ಹೇಗೆ ಓದಬೇಕು, ಅದರಲ್ಲಿರುವ ಕ್ರಿಟಿಕಲ್ ಅಂಶಗಳನ್ನು ಹೇಗೆ ಗುರುತಿಸಬೇಕು ಎಂದು ಹಲವು ಸಲ ನನಗೆ ತೋರಿಸಿ ಕೊಟ್ಟಿದ್ದ. ಆಗ ನನಗೂ ಕೆಲಕಾಲ ಯುಪಿಎಸ್ ಸಿ ಪರೀಕ್ಷೆಯನ್ನು ಬರೆದು ಉನ್ನತ ಅಧಿಕಾರಿ ಆಗಬೇಕೆನ್ನುವ ಬಯಕೆ ಹುಟ್ಟಿತ್ತು, ಕೆಲ ತಿಂಗಳು ಅದೇ ಗುಂಗಿನಲ್ಲಿದ್ದೆ ಕೂಡ.

ಬಿಎಂಎಸ್ ಕಾಲೇಜು ಕರ್ನಾಟಕದ ಪ್ರಸಿದ್ಧ ಕಾಲೇಜುಗಳಲ್ಲಿ ಒಂದು. ವೆಂಕಟ್ರಮಣನಿಗೆ ಇಂಜಿನಿಯರಿಂಗ್ ಮುಗಿಯುತ್ತಿದ್ದಂತೆ ಖಾಸಗಿ ಕಂಪೆನಿಯೊಂದರಲ್ಲಿ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸ ಸಿಕ್ಕಿತು. ಕೆಲ ತಿಂಗಳು ಅಲ್ಲಿದ್ದು ನಂತರ ಪ್ರೊಬೇಷನರಿ ಆಫೀಸರ್ ಆಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿಯೂ ಕೆಲಸ ನಿರ್ವಹಿಸಿದ. ಆದರೂ ಅವನ ಗುರಿ ಯುಪಿಎಸ್ ಸಿ ಯತ್ತಲೇ ನೆಟ್ಟಿತ್ತು. ಹಾಗಾಗಿ 2015ರಲ್ಲಿ ಈತ ಈ ಕೆಲಸವನ್ನು ಬಿಟ್ಟು ಯುಪಿಎಸ್ ಸಿ ಪರೀಕ್ಷೆಯ ಅಧ್ಯಯನಕ್ಕೆ ಜಾರಿದ. ಇದಾದ ನಂತರ ಅವನ ಸಂಪರ್ಕವೂ ನನಗೆ ತಪ್ಪಿ ಹೋಯ್ತು.

ಈ ಪರೀಕ್ಷೆಗಳನ್ನು ಬರೆಯುವವರು ಎಲ್ಲ ತರಹದ ಮನೋಕಾಮನೆಗಳಿಂದ, ವಾಂಛೆ ಮೋಹಗಳಿಂದ ಮುಕ್ತರಾಗುವುದು ಅನಿವಾರ್ಯ. ಆದರೂ ಸ್ನೇಹಿತ ವಿನಯ್ ಚಿಂಚೋಳಿಯ ಮೂಲಕ ಅವನ ವಿಷಯ ಆಗಾಗ ತಿಳಿಯುತ್ತಿತ್ತು. ಯುಪಿಎಸ್ ಸಿ ಫಲಿತಾಂಶ ಹೊರಬಂದಿದೆ ಎಂದಕೂಡಲೇ ನಾನು ಗೂಗಲ್ ಸರ್ಚ್ ಮಾಡಿದ್ದೇ ಮಾಡಿದ್ದು, ಕರ್ನಾಟಕದಿಂದ ಯಾರು ಆಯ್ಕೆಯಾಗಿದ್ದಾರೆ ಎಂದು ತಿಳಿಯುವ ಕುತೂಹಲ ನನ್ನದು, ಅಷ್ಟರಲ್ಲಿ ಈ ಸಿಹಿಸುದ್ದಿ ಯನ್ನು ವಿನಯ್ ತಿಳಿಸಿದ. ಕೂಡಲೇ ವೆಂಕಟ್ರಮಣನಿಗೆ ಫೋನ್ ಮಾಡಿ ಶುಭಾಶಯ ಕೋರಿದೆ. ಜೊತೆಗೆ, ಆತನ ಈ ಸಾಧನೆಯ ಹಿಂದಿನ ಪಯಣವನ್ನು ಅವನ ಬಾಯಿಂದಲೇ ಕೇಳುವ ಆಸೆಯಿತ್ತು.

ವೆಂಕಟ್ರಮಣ ಐಚ್ಚಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಕನ್ನಡ ಸಾಹಿತ್ಯವನ್ನು. ಮೊದಲ ನಾಲ್ಕು ಪ್ರಯತ್ನಗಳಲ್ಲಿ ಪ್ರಿಲಿಮಿನರಿ ಹಾಗೂ ಮೇನ್ ಹಂತಗಳನ್ನು ಈತ ಪೂರ್ತಿ ಕನ್ನಡದಲ್ಲೇ ಬರೆದದ್ದು ಬಹಳ ಸಂತಸದ ವಿಚಾರ. ಆದರೂ ಅದೇ ಕಾರಣದಿಂದಲೇ ತನಗೆ ಸ್ವಲ್ಪ ಕಡಿಮೆ ಅಂಕ ಸಿಕ್ಕಿರಬಹುದು ಎಂದು ಅವನು ಇಂದು ಹೇಳಿದಾಗ ನನಗೆ ಕೊಂಚ ಬೇಸರವಾಯಿತು. ಅದೇನೇ ಇರಲಿ, ಈ ಸಲ ಜನರಲ್ ಸ್ಟಡೀಸ್ ನಂತಹ ವಿಷಯಗಳನ್ನು ವೆಂಕಟ್ರಮಣ ಇಂಗ್ಲಿಷ್ ನಲ್ಲಿ ಬರೆದನಂತೆ ( ಕನ್ನಡ ಸಾಹಿತ್ಯವನ್ನು ಕನ್ನಡದಲ್ಲೇ ಬರೆಯಬೇಕು). ಅಂತೂ ಈತನ ಛಲ ಬಿಡದ ಹೋರಾಟಕ್ಕೆ ಜಯ ದೊರಕಿದೆ. ವೆಂಕಟ್ರಮಣ ಎಲ್ಲಿಯೂ, ಯಾವುದೇ ತರಹದ ಕೋಚಿಂಗ್ ನ್ನು ತೆಗೆದುಕೊಂಡಿಲ್ಲ. ಸ್ವತಃ ತಾನೇ ತನ್ನ ಅಧ್ಯಯನವನ್ನು ರೂಪಿಸಿಕೊಂಡಿದ್ದಾನೆ ಎನ್ನುವುದು ಗಮನಾರ್ಹವಾದ ಸಂಗತಿ.

ಇದು ಸುಲಭವಲ್ಲ. ಸಣ್ಣ ತರಗತಿಗಳಿಗೂ ಮಕ್ಕಳನ್ನು ಟ್ಯೂಷನ್ ಗೆ ಕಳಿಸುವ ಪೋಷಕರು ಈ ವಿಷಯವನ್ನು ಗಮನಿಸಬೇಕು. ಇಂತಹ ಪರೀಕ್ಷೆ ಗಳಲ್ಲಿ ಕ್ರಿಟಿಕಲ್ ಥಿಂಕಿಂಗ್ ಬಹಳ ಮುಖ್ಯ. ಯುಪಿಎಸ್ ಸಿ ಪರೀಕ್ಷೆಯಲ್ಲಿ ಇಂಟರ್ವ್ಯೂ ನಲ್ಲಿ ಫೇಲ್ ಆದರೆ ಮತ್ತೆ ಪ್ರಿಲಿಮ್ಸ್ ಹಂತದಿಂದ ಪರೀಕ್ಷೆ ಬರೆಯಬೇಕು! ಅದಕ್ಕೆ ಬಹಳ ಮನೋಬಲ ಬೇಕು. ಪ್ರತಿಸಲವೂ ಕೊನೆಯ ಹಂತದಲ್ಲಿ ಆಯ್ಕೆ ಆಗದಿದ್ದಾಗ ಇನ್ನು ಇದು ಸಾಕು, ಬಿಟ್ಟುಬಿಡೋಣ ಎಂದು ಅನ್ನಿಸುತ್ತಿರಲಿಲ್ಲವೇ ಎಂದು ನಾನು ಕೇಳಿದೆ. “ಇಲ್ಲಪ್ಪ, ಖಂಡಿತ ಇಲ್ಲ. You need to keep hitting on the target. you will know that you are almost there, you can reach it. You will be in the flow. You shouldn’t give up” ಎಂದು ಹೇಳಿದ. ಈ ಮಾತು ಕೇಳಲು ಸುಲಭ. ನಾಲ್ಕೈದು ವರ್ಷ ಹೊಡೆದಾಡಿ ಜಯಿಸಲು ಬಹಳ ಮನೋಬಲ ಬೇಕು.

ಇನ್ನು ವೆಂಕಟ್ರಮಣನಿಗೆ ಕನ್ನಡ ಸಾಹಿತ್ಯವನ್ನು ಹೆಚ್ಚೆಚ್ಚು ಜನರು ವಿಷಯವನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು, ಕರ್ನಾಟಕದಿಂದ ಇನ್ನೂ ಹೆಚ್ಚಿನ ಜನರು ಆಯ್ಕೆಯಾಗಬೇಕು ಎನ್ನುವ ಬಯಕೆಯಿದೆ. ಇಲ್ಲಿ ಆಯ್ಕೆಯಾದವರು ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ, ಅವರಿಂದ ಬದಲಾವಣೆ ಸಾಧ್ಯ, ಆದರೆ ಕನ್ನಡಿಗರ ಸಂಖ್ಯೆ ಸಾಕಷ್ಟು ಕಡಿಮೆ, ಇದು ಬದಲಾಗಬೇಕು ಎಂದು ದೃಢವಾದ ಹಂಬಲವನ್ನು ವೆಂಕಟ್ರಮಣ ವ್ಯಕ್ತಪಡಿಸಿದ್ದಾನೆ.

ವೆಂಕಟ್ರಮಣ ತೀರಾ ಸಾಧಾರಣ ಹಿನ್ನೆಲೆಯಿಂದ ಬಂದವನು. ಪ್ರಾಥಮಿಕ ಶಿಕ್ಷಣವನ್ನು ಊರಿನಲ್ಲೇ ಮಾಡಿ, ನಂತರ ಮೆರಿಟ್ ಆಧಾರದ ಮೇಲೆ ಪ್ರಸಿದ್ಧ ಕಾಲೇಜ್ ನಲ್ಲಿ ಡಿಗ್ರಿ ಮುಗಿಸಿ, ಮತ್ತೆ ಎಲ್ಲಾರಂತಾಗದೆ, ಸಾಮಾಜಿಕ ಒತ್ತಡಗಳಿಗೆ ಮಣಿಯದೆ ತನ್ನದೇ ದಾರಿಯಲ್ಲಿ ನಡೆದವನು. ವೆಂಕಟ್ರಮಣರನ್ನು ಅಭಿನಂದಿಸುತ್ತ, ಇವರ ಮುಂದಿನ ಸಾಧನೆಗೆ ಶುಭ ಕೊರೋಣ.

-ಸಂದೀಪ್ ಹೆಗಡೆ
ಬೆಂಗಳೂರು

Tags: IASindiakarnatakanorth kannadaShivaram HebbarupscVenkatramana Kavadikeriyallapura
ShareTweetSendShare
Join us on:

Related Posts

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

2028ಕ್ಕೆ ನಶೆ ಮುಕ್ತ ಕರ್ನಾಟಕ- ಮಾದಕ ಜಾಲದ ಮಾಹಿತಿ ನೀಡಿದರೆ ಸಿಗಲಿದೆ ಭರ್ಜರಿ ಬಹುಮಾನ: ಮಾದಕ ದಂಧೆಕೋರರ ವಿರುದ್ಧ ಡಿ ಕೆ ಶಿವಕುಮಾರ್ ಸಮರ

by Shwetha
July 1, 2026
0

ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗ ಹೊಸ ಸಂಕಲ್ಪ ಮಾಡಿದೆ. 2028ರ ವೇಳೆಗೆ ಕರ್ನಾಟಕವನ್ನು ಸಂಪೂರ್ಣ ನಶೆ ಮುಕ್ತ ರಾಜ್ಯವನ್ನಾಗಿ ಮಾಡುವ ದೃಢ...

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಮನೆಯಿಂದಲೇ SIR ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಡಿಕೆ ಶಿವಕುಮಾರ್

by Shwetha
July 1, 2026
0

ರಾಜ್ಯಾದ್ಯಂತ ಇಂದು SIR ಅಭಿಯಾನ ಆರಂಭವಾಗಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಿವಾಸದಿಂದಲೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಅಧಿಕಾರಿಗಳಿಂದ ಗಣತಿ ನಮೂನೆ...

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

ಚಪ್ಪಲಿ ಎಸೆದಿದ್ದಕ್ಕೆ ಸಿದ್ದರಾಮಯ್ಯ ಮುಂದೆ ಕಣ್ಣೀರು ಹಾಕಿದ ಪ್ರದೀಪ್ ಈಶ್ವರ್ : ಕಣ್ಣೀರು ಹಾಕಿದ ಶಾಸಕನಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ

by Shwetha
July 1, 2026
0

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ನಡೆದ ಚಪ್ಪಲಿ ಎಸೆತ ಪ್ರಕರಣ ಈಗ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದೆ. ಈ ಹೀನಾಯ ಘಟನೆಯಿಂದ ಮನನೊಂದ ಪ್ರದೀಪ್...

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ; ನನ್ನ ಪಾತ್ರವಿಲ್ಲ ಎಂದ ಚಂಪತ್ ರೈ

by Shwetha
July 1, 2026
0

ಚಂಪತ್ ರೈ ಅವರು ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಪೊಲೀಸರ ವಿಚಾರಣೆ ವೇಳೆ ಸ್ಪಷ್ಟಪಡಿಸಿದ್ದಾರೆ. ಅವರ ಹೇಳಿಕೆಯ ಪ್ರಕಾರ, ಟಿನ್ನು ಯಾದವ್ ಹೀಗೆ...

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

by Shwetha
July 1, 2026
0

ಬೆಂಗಳೂರು ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ತೆರಿಗೆ ಹಣದ ಸದುಪಯೋಗದ ಕುರಿತು ನಡೆದ ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram