ದೆಹಲಿ ವಾಯು ಮಾಲಿನ್ಯದ ಬಗ್ಗೆ ಸರ್ಕಾರ ಗಂಭೀರವಾಗಿಲ್ಲ – ವರುಣ್ ಗಾಂಧಿ ಟೀಕೆ…
ದೆಹಲಿಯ ವಾತಾವರಣದ ಸಮಸ್ಯೆಯ ಬಗ್ಗೆ ಜನರಾಗಲಿ ಅಥವಾ ಸರ್ಕಾರವಾಗಲಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ದೆಹಲಿ ಸರ್ಕಾರವನ್ನ ಟೀಕಿಸಿದ್ದಾರೆ.
ದೀಪಾವಳಿಯಿಂದ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಗಾಳಿಯ ಗುಣಮಟ್ಟ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಸಂಸದ ವರುಣ್ ಗಾಂಧಿ ಅವರು ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿವಿಧ ಸರ್ಕಾರಿ ಏಜೆನ್ಸಿಗಳ ನಡುವೆ “ಸಮನ್ವಯದ ಕೊರತೆ” ಯನ್ನು ಗುರುವಾರ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘‘ಸರಕಾರವಾಗಲಿ ಅಥವಾ ಜನರಾಗಲಿ ಈ ದೈತ್ಯಾಕಾರದ ಸಮಸ್ಯೆಯ ಬಗ್ಗೆ ಗಂಭೀರವಾಗಿಲ್ಲ. ಆಸ್ಪತ್ರೆಗಳು ಉಸಿರಾಟ, ಹೃದಯ ಮತ್ತು ಶ್ವಾಸಕೋಶದ ತೊಂದರೆ ಇರುವ ರೋಗಿಗಳಿಂದ ತುಂಬಿವೆ. ದೆಹಲಿ-ಎನ್ಸಿಆರ್ನಲ್ಲಿ 10 ಮಕ್ಕಳಲ್ಲಿ ಎಂಟು ಮಕ್ಕಳಿಗೆ ಉಸಿರಾಟದ ತೊಂದರೆ ಇದೆ. ಅನೇಕ ಸರ್ಕಾರಿ ಸಂಸ್ಥೆಗಳಲ್ಲಿ ನಿರಂತರ ಕಾಳಜಿ/ಸಮನ್ವಯತೆಯ ಕೊರತೆ ಏಕೆ?” ಎಂದು ಪ್ರಶ್ನಿಸಿದ್ದಾರೆ.
varun gandhi: Government is not serious about Delhi air pollution – Varun Gandhi criticizes…