ಬೆಂಗಳೂರು : ಕೊರೊನಾ ಕಾಟದಿಂದ ಬಳಲಿ ಹೋಗಿರುವ ರಾಜಧಾನಿ ಮಂದಿಗೆ ತರಕಾರಿ ಬೆಲೆ ಏರಿಕೆ ಶಾಕ್ ನೀಡಿದೆ. ಕೊರೊನಾ ಕೇಸ್ ಗಳಂತೆ ನಗರದಲ್ಲಿ ತರಕಾರಿ ಬೆಲೆ ಕೂಡ ರಾಕೆಟ್ ವೇಗದಲ್ಲಿ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ಗ್ರಾಹಕರು ಫುಲ್ ಸುಸ್ತಾಗಿ ಹೋಗಿದ್ದಾರೆ. ನಗರದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ತರಕಾರಿ ಬೆಲೆ ಏರಿಕೆ ಆಗುತ್ತಲೇ ಇದೆ. ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದರೇ ಬೀನ್ಸ್ ಜೇಬಿಗೆ ಕತ್ತರಿ ಹಾಕುತ್ತಿದೆ. ‘ಪುಟಾಣಿ ಬಟಾಣಿ ಭಾರ’ವಾಗುತ್ತಾ ಸಾಗಿದೆ.
ಸದ್ಯ ನಗರದಲ್ಲಿ ಯಾವುದಕ್ಕೆ ಎಷ್ಟು ಬೆಲೆ ಎಂಬೋದನ್ನ ನೋಡುವುದಾದರೇ, ಬೀನ್ಸ್-100 ರೂ. ಈರುಳ್ಳಿ-ಕೆಜಿ 40 ರೂ. ಟೊಮ್ಯಾಟೊ-60 ರೂ. ಆಲೂಗಡ್ಡೆ-40 ರೂ. ಮೆಣಸಿನಕಾಯಿ-69 ರೂ. ಕ್ಯಾರಟ್- 94 ರೂ. ನುಗ್ಗೆಕಾಯಿ-120 ರೂ. ಬೆಂಡೆಕಾಯಿ-50 ರೂ. ಮೂಲಂಗಿ-40 ರೂ. ಬೀಟ್ ರೂಟ್-40 ರೂ. ಬದನೆಕಾಯಿ-40 ರೂ. ಹೀರೇಕಾಯಿ-60 ರೂ. ಎಲೆಕೋಸು-40 ರೂ. ಆಗಿದೆ.
ಹೌದು..! ಕೆಲ ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿದೆ. ಇದೇ ಕಾರಣಕ್ಕಾಗಿ ತರಕಾರಿ ಬೆಲೆ ಜಾಸ್ತಿ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಭಾರಿ ವರ್ಷಧಾರೆಯಿಂದಾಗಿ ರೈತರು ಬೆಳೆದ ಬೆಳೆ ತೋಟದಲ್ಲೇ ನಾಶವಾಗುತ್ತಿದೆ. ಹೀಗಾಗಿ ಮುಂದಿನ ತಿಂಗಳಿನವರೆಗೂ ಬೆಲೆ ಏರಿಕೆ ಸಾಧ್ಯತೆ ಇರುತ್ತದೆ.