Jameer | ಕುಮಾರಸ್ವಾಮಿಗೆ ಸಿಎಂ ಆಗ್ಬೇಕು ಅನ್ನೋ ಹುಚ್ಚಿದೆ zameer-ahmed-khan-reacts-hd-kumaraswamy-statement Bangalore saaksha tv
ಬೆಂಗಳೂರು : ಅವರೇನೂ ಜನಸೇವೆ ಮಾಡಬೇಕು ಅಂತಾ ಇದೀಯಾ..? ಅವರಿಗೂ ಸಿಎಂ ಆಗಬೇಕು ಅಂತಾಲೇ ಹುಚ್ಚು ಇರೋದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯಗೆ ಸಿಎಂ ಆಗಬೇಕು ಎಂಬ ಹುಚ್ಚು ಇದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಜಮೀರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, ಕುಮಾರಸ್ವಾಮಿಗೆ ಯಾವ ಹುಚ್ಚು ಇರೋದು..? ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇರೋದು.
ಅವರೇನೂ ಜನಸೇವೆ ಮಾಡಬೇಕು ಅಂತಾ ಇದೀಯಾ? ಅವರಿಗೂ ಸಿಎಂ ಆಗಬೇಕು ಅಂತಾಲೇ ಹುಚ್ಚು ಇರೋದು. ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತೆ ಎಂದರು.
ಇದೇ ವೇಳೆ ಸಿ.ಎಂ.ಇಬ್ರಾಹಿಂ ಪಕ್ಷ ಬಿಡುವ ಬಗ್ಗೆ ಮಾತನಾಡಿದ ಜಮೀತ್, ಅವರು ಪಕ್ಷ ಬಿಡಲ್ಲ, ಕಾಂಗ್ರೆಸ್ ನಲ್ಲಿ ಇರ್ತಾರೆ. ನಾನೂ ಇಬ್ರಾಹಿಂ ಅವರರನ್ನು ಭೇಟಿ ಆಗುತ್ತೇನೆ ಎಂದರು.
ಇನ್ನು ರಾಹುಲ್ ಗಾಂಧಿ ಸಲಹೆಗಾರರಾದ ರಾಜು ಅವರು ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದರು, ಬೆಂಗಳೂರಿಗೆ ಆಗಮಿಸಿದ್ರು, ವಿರೋಧ ಪಕ್ಷದ ನಾಯಕರನ್ನ ಸಹಜವಾಗಿಯೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದ್ರಲ್ಲಿ ಬೇರೆ ಏನೂ ಇಲ್ಲ ಬಿಡಿ ಎಂದ್ರು ಜಮೀರ್.