ಬ್ಯಾಡ್ಮಿಂಟನ್ | ಶ್ರೀಕಾಂತ್, ಪ್ರಣಯ್ ಗೆ ಗೆಲುವು Badminton Srikanth
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಕಿಡಂಬಿ ಶ್ರೀಕಾಂತ್ ಹಾಗೂ ಎಚ್.ಎಸ್ ಪ್ರಣಯ್ ಬಾಲಿಯಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯ ಸಾಧಿಸಿ ಮುನ್ನಡೆ ಸಾಧಿಸಿದ್ದಾರೆ.
ಭಾರತದ ಭರವಸೆಯ ಆಟಗಾರ ಕಿಡಂಬಿ ಶ್ರೀಂಕಾತ್ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಕ್ರಿಸ್ಟಫ ಪೊಪೊವ್ ಅವರನ್ನು ಮೂರು ಸುತ್ತುಗಳ ಆಟದಲ್ಲಿ ಸದೆ ಬಡೆದರು.
ಶ್ರೀಕಾಂತ್ 21-18, 15-21, 21-16 ರಿಂದ ಎದುರಾಳಿಯನ್ನು ಮಣಿಸಿ, ಮುನ್ನಡೆದರು.
ಎಚ್.ಎಸ್. ಪ್ರಣಯ್ 22-20, 21-19 ರಿಂದ ಮಲೇಷ್ಯಾದ ಲಿಯು ಡೇರೆನ್ ಅವರನ್ನು 49 ನಿಮಿಷಗಳ ಕಾದಾಟದಲ್ಲಿ ಮಣಿಸಿದರು.
ಇನ್ನು ಪರುಪಳ್ಳಿ ಕಶ್ಯಪ್ ನಿರಾಸೆ ಅನುಭವಿಸಿದ್ದಾರೆ. ಅವರು ಬುಧವಾರ ನಡೆದ ಪಂದ್ಯದಲ್ಲಿ 10-21, 19-21 ರಿಂದ ಡೆನ್ಮಾರ್ಕ್ ನ ಹ್ಯಾನ್ಸ್ ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗಸ್ ಅವರ ವಿರುದ್ಧ ಸೋಲು ಕಂಡರು.
ಇನ್ನೊಂದು ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್ 21-16, 14-21, 20-22ರಿಂದ ಆತಿಥೇಯ ದೇಶದ ಶೇಸರ್ ಹಿರೇನ್ ರುಸ್ತಾಮಿಟೊ ವಿರುದ್ಧ ಆಘಾತ ಅನುಭ”ಸಿದರು.