ಮೆಕ್ಕೆ ಜೋಳ ಸಾಗಿಸುತ್ತಿದ್ದ ಲಾರಿಗೆ ಏಕಾಏಕಿ ಬೆಂಕಿ –ಸುಟ್ಟು ಭಸ್ಮ
ಚಲಿಸುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಹೊತ್ತಿ ಉರಿದ ಲಾರಿ ಘಟನೆ ನವಲಗುಂದ ತಾಲೂಕಿನ ಬೆಳವಟಗಿ ಕ್ರಾಸ್ ಬಳಿ ಘಟನೆ.
ಶಿವಯೋಗಪ್ಪ ಬೆಣ್ಣಿ ಎಂಬುವವರಿಗೆ ಸೇರಿದ ಲಾರಿಯಲ್ಲಿ 250 ಚೀಲ ಮೆಕ್ಕೆ ಜೋಳ ಸಾಗಿಸಲಾಗುತ್ತಿತ್ತು.ದಿಢೀರ್ ಎಂದು ಬೆಂಕಿ ಕಾಣಿಸಿಕೊಂಡಿದ್ದರಿಂದ ಚಾಲಕ ಮತ್ತು ಕ್ಲೀನರ್ ಲಾರಿ ನಿಲ್ಲಿಸಿ ಕೆಳಗಿಳಿದು ಬಚಾವ್ ಆಗಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.