ನಟಿ ಕಂಗನಾ ರಣಾವತ್ ಅವರು ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರತಿಕೃತಿ ದಹಿಸಿದರು.
ಈ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಐವತ್ತು ವರ್ಷಗಳಿಂದ ಆಗದೇ ಇರುವ ಕೆಲಸವೊಂದನ್ನು ಕಂಗನಾ ಮಾಡಿದ್ದಾರೆ.
ದೆಹಲಿಯ (Delhi) ಕೆಂಪು ಕೋಟೆಯಲ್ಲಿ ಸತತವಾಗಿ 50 ವರ್ಷಗಳಿಂದ ನಡೆದುಕೊಂಡು ಬಂಧಿರುವ ರಾವಣನ (Raavan) ಪ್ರತಿಕೃತಿ ದಹನವನ್ನು ಈ ಬಾರಿ ಕಂಗನಾ ರಣಾವತ್ ನಡೆಸಿದ್ದಾರೆ. ಮಹಿಳೆಯೊಬ್ಬರು ಈ ಕೆಲಸವನ್ನು ಮಾಡಿರಲಿಲ್ಲ ಎನ್ನುವುದು ವಿಶೇಷ. ಲವ್ ಕುಶ ರಾಮಲೀಲಾ ಸಮತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.