ನಟ ಪ್ರಭಾಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರು ಕೆಟ್ಟ ಮುನ್ಸೂಚನೆ ನೀಡಿದ್ದು, ಆತಂಕ ವ್ಯಕ್ತವಾಗುತ್ತಿದೆ.
ನಟ ಪ್ರಭಾಸ್ ಅವರು ಈಗ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರು ನಟಿಸಿದ್ದ ಸಲಾರ್ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಆದರೆ, ಈಗ ಅವರು ಯುರೋಪ್ಗೆ ಹೋಗಿದ್ದಾರೆ. ಅದಕ್ಕೆ ಕಾರಣ ಶಸ್ತ್ರ ಚಿಕಿತ್ಸೆ. ಮಂಡಿ ನೋವಿನ ಆಪರೇಶನ್ ಯುರೋಪ್ನಲ್ಲಿಯೇ ಮಾಡಿಸಿಕೊಂಡಿದ್ದರು. ಈಗ ಮತ್ತೆ ಅದೇ ದೇಶಕ್ಕೆ ಹೋಗಿದ್ದಾರೆ. ಈ ಸಮಯದಲ್ಲಿಯೇ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.
ಸಲಾರ್’ ಸಿನಿಮಾವನ್ನು ಅವರ ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಈಗ ಇನ್ನೊಂದು ಸತ್ಯ ಇದೆ. ಅದೇ ಪ್ರಭಾಸ್ ಆರೋಗ್ಯ. ಅವರ ಆರೋಗ್ಯದಲ್ಲಿ ಏರುಪೇರಾಗಲಿದೆ. ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಅನೇಕ ಅಡೆತಡೆ ಬರಲಿವೆ. ಇದು ಸತ್ಯ ಎಂದಿದ್ದಾರೆ. ಆದರೆ, ಅಭಿಮಾನಿಗಳು ಇದು ಸುಳ್ಳು ಎಂದು ಹೇಳುತ್ತಿದ್ದಾರೆ.
ಈ ಹಿಂದೆಯೂ ವೇಣುಸ್ವಾಮಿ ಪ್ರಭಾಸ್ ಹಿಂದೆ ಬಿದ್ದಿದ್ದರು. ಮೂರು ಸಿನಿಮಾ ಸೋಲಲಿದೆ. ಸಲಾರ್ ಗೆದ್ದರೂ ಅದನ್ನು ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದಿದ್ದರು. ನಂತರ ಪ್ರಭಾಸ್ ಮದುವೆ ಆಗಲ್ಲ. ಅವರಿಗೆ ಆ ಯೋಗ ಇಲ್ಲ ಎಂದಿದ್ದರು. ಸದ್ಯ ಅವರ ‘ಸಲಾರ್’ ಗೆದ್ದಿದೆ. ‘ಕಲ್ಕಿ’ ಸಿನಿಮಾ ಬರಲಿದೆ. ಮುಂದಿನದು ದೇವರಿಗೆ ಬಿಟ್ಟ ವಿಷಯ. ಒಟ್ಟಿನಲ್ಲಿ ಪ್ರಭಾಸ್ ಆರೋಗ್ಯವಾಗಿ, ಕ್ಷೇಮವಾಗಿ, ಚೆನ್ನಾಗಿ ಇರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.