ಇತ್ತೀಚೆಗಿನ ಅಪರಾಧ ಪ್ರಕರಣಗಳು : CRIME NEWS
ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ
15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
15 ದಿನದಲ್ಲೇ ಗಂಡನ ಬಿಟ್ಟು ಪ್ರಿಯಕರನ ಮದುವೆಯಾದಳು : ಆಕೆಯ ಮನೆಯವರು ಮಾಡಿದ್ದು ಘೋರ ಕೃತ್ಯ..!
ಬೆಂಗಳೂರು: ಮಹಿಳೆಯೊಬ್ಬಳು ಹೊಸದಾಗಿ ಮದುವೆಯಾದ ಕೇವಲ 15 ದಿನಕ್ಕೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಮತ್ತೊಮ್ಮೆ ಮದುವೆಯಾಗಿದ್ದಾಳೆ. ಆದ್ರೆ ಈ ರೀತಿ ಮಾಡಿದ್ದಕ್ಕೆ ಮಹಿಳೆಯ ಪರಿವಾರದವರು ಆಕೆಯ ಪ್ರಿಯತಮನನ್ನ ಕೊಲೆ ಮಾಡಿದ್ದಾರೆ. ಬೆಂಗಳೂರಿನ ಲಗ್ಗೆರೆಯಲ್ಲಿ 27 ವರ್ಷದ ಚೇತನ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಚೇತನ್ ಪತ್ನಿಯ ಸಹೋದರ ಆಕಾಶ್ ಮತ್ತು ಚಿಕ್ಕಪ್ಪ ನಂಜೇಗೌಡ ಹಾಗೂ ಚಿಕ್ಕಪ್ಪನ ಮಗ ದಿಲೀಪ್ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
ಮಧ್ಯಪ್ರದೇಶ : 16 ವರ್ಷದ ಬಾಲಕಿ ಕೋಚಿಂಗ್ ಕ್ಲಾಸ್ ಗೆ ಹೋಗುತ್ತಿದ್ದ ವೇಳೆ ಆಕೆಯನ್ನ ಹಿಂಬಾಲಿಸಿ , ಬಳಿಕ ಆಕೆಯನ್ನ ಎಳೆದೊಯ್ದು ಕಾಮುಕನೋರ್ವ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕಾರ್ಪೆಂಟರ್ ವೃತ್ತಿಯಲ್ಲಿರುವ ಆರೋಪಿ ಕಳೆದ ಕೆಲವು ದಿನಗಳಿಂದ ಆಕೆಯನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ. ಆದರೆ ಬಾಲಕಿ ಕೋಚಿಂಗ್ ಕ್ಲಾಸ್ ಗೆ ಹೋಗಿ ಮನೆಗೆ ಹಿಂದಿರುಗುವಾಗ ಆಕೆಯನ್ನು ತನ್ನ ಫ್ಲಾಟ್ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದರೆ ಹೆದರಿಕೊಂಡಿದ್ದ ಬಾಲಕಿ ಮೊದಲಿಗೆ ಈ ಘಟನೆಯ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಆದರೆ ತಾಯಿ ಆಕೆಯ ನಡವಳಿಕೆಯಲ್ಲಾದ ಬದಲಾವಣೆಯನ್ನು ಕಂಡು ವಿಚಾರಿಸಿದಾಗ ಸತ್ಯಾಂಶ ತಿಳಿದುಬಂದಿದೆ.
ಅಕ್ರಮ ಸಂಬಂಧ : ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿದ ರಾಕ್ಷಸಿ..!
ಅಕ್ರಮ ಸಂಬಂಧ : ಪ್ರಿಯಕರನ ಜೊತೆ ಸೇರಿ ಪತಿಯ ಕಥೆ ಮುಗಿಸಿದ ರಾಕ್ಷಸಿ..!
ಹರಿಯಾಣ : ಅಕ್ರಮ ಸಂಬಂಧಕ್ಕಾಗಿ ಹೆಮ್ಮಾರಿ ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆಗೂಡಿ ಗಂಡನನ್ನೇ ಕೊಲೆಮಾಡಿರುವ ಘಟನೆ ಹರಿಯಾಣದ ಯಮುನನಗರದ ಖಿಜ್ರಾಬಾದ್ ನಲ್ಲಿ ನಡೆದಿದೆ. 26 ವರ್ಷದ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿರುವ ಈ ಮಹಿಳೆಗೆ ಪುಟ್ಟ ಮಗು ಕೂಡ ಇದೆ. ಈಕೆ 4 ವರ್ಷಗಳ ಹಿಂದೆ ವ್ಯಕ್ತಿಯೋರ್ವನನ್ನ ಮದುವೆಯಾಗಿದ್ದಳು. ಬಳಿಕ ಈಕೆ ಮತ್ತೊಬ್ಬನ ಜೊತೆಗೆ ಅನೈತಿಕ ಸಂಬಂಧವನ್ನ ಇಟ್ಟುಕೊಂಡಿದ್ದಳು. ಹೀಗಾಗಿ ಪ್ರೇಮಿಯ ಜೊತೆ ಸೇರಿ ಪತಿಯ ಕಥೆ ಮುಗಿಸಿದ್ದಾಳೆ ರಾಕ್ಷಸಿ.
ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿಗಳು..!
ಭಿಕ್ಷುಕಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಪಾಪಿಗಳು..!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಭಿಕ್ಷುಕಿಯೊಬ್ಬಳಿಗೆ ಮದ್ಯ ಕುಡಿಸಿರುವ ಕೆಲ ಕಿಡಿಗೇಡಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಆಕೆಯನ್ನ ಹತ್ಯೆಗೈದಿದ್ದಾರೆ.
ಮೈಸೂರು ನಗರದ ಕೆ.ಟಿ. ಸ್ಟ್ರೀಟ್ ಸುತ್ತಮುತ್ತ ಓಡಾಡಿಕೊಂಡು ಭಿಕ್ಷೆ ಬೇಡಿಕೊಂಡು ರಸ್ತೆ ಬದಿಯಲ್ಲಿ ಮಲಗುತ್ತಾ ಜೀವನ ಸಾಗಿಸುತ್ತಿದ್ದ ಭಿಕ್ಷುಕಿಗೆ ಮದ್ಯ ಕುಡಿಸಿ ಬಳಿಕ ಐವರು ಕಾಮುಕರು ಸೇರಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಳಿಕ ಆಕೆಯನ್ನ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಘಟನ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡಿದ್ದಾರೆ.
ಆಸ್ತಿಗಾಗಿ ತಂದೆಯನ್ನೇ ಕೊಂದಿದ್ದ ಮಗ – ಚಿಕ್ಕಪ್ಪ 1 ವರ್ಷದ ಬಳಿಕ ಅರೆಸ್ಟ್..!
ಆಸ್ತಿಗಾಗಿ ತಂದೆಯನ್ನೇ ಕೊಂದಿದ್ದ ಮಗ – ಚಿಕ್ಕಪ್ಪ 1 ವರ್ಷದ ಬಳಿಕ ಅರೆಸ್ಟ್..!
ಬೆಂಗಳೂರು : ಕೋಟ್ಯಂತರ ರೂಪಾಯಿ ಆಸ್ತಿಗಾಗಿ ಸುಪಾರಿ ಕೊಟ್ಟು ಅಪ್ಪನನ್ನೇ ಕೊಲೆ ಮಾಡಿಸಿ ತಲೆಮರೆಸಿಕೊಂಡಿದ್ದ ಮಗ ಹಾಗೂ ಆತನ ಚಿಕ್ಕನನ್ನ ಪೊಲೀಸರು ಬಂಧಿಸಿದ್ದಾರೆ. ಬರೋಬ್ಬರಿ ಒಂದು ವರ್ಷ ಹಿಂದೆ ಈ ಘಟನೆ ನಡೆದಿತ್ತು. ಇದೀಗ ತಡವಾಗಿ ಆರೋಪಿಯನ್ನ ಹುಡುಕಿ ಬಂಧಿಸಲಾಗಿದೆ. ತಲಘಟ್ಟಪುರ ಪೊಲೀಸರು ಆರೋಪಿಗಳಿಬ್ಬರನ್ನೂ ಅರೆಸ್ಟ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ. ಬಳ್ಳಾರಿ ಮೂಲದ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ ಬಂಧಿತರು. ಮಾಧವ್ ಹೈತ್ಯೆಗೆ ಒಳಗಾಗಿದ್ದ ದುರ್ದೈವಿ. ಮಗ ಹರಿಕೃಷ್ಣ ತಂದೆಯ ಹತ್ಯೆಗೆ 25 ಲಕ್ಷ ಸುಪಾರಿ ನೀಡಿದ್ದ. ಈ ಹೇಯ ಕೃತ್ಯದಲ್ಲಿ ಹರಿಕೃಷ್ಣಗೆ ಆತನ ಚಿಕ್ಕಪ್ಪ ಶಿವರಾಮ್ ಪ್ರಸಾದ್ ಸಾಥ್ ನೀಡಿದ್ದ.
2020 ಫೆ.14ರಂದು ಗುಬ್ಬಲಾಳ ರಸ್ತೆಯಲ್ಲಿ ಹತ್ಯೆ ನಡೆದಿತ್ತು. ಮಾಧವ್ ಹತ್ಯೆಗೈದಿದ್ದ ಐವರು ಸುಫಾರಿ ಹಂತಕರನ್ನ ಪೊಲೀಸರು ಬಂಧಿಸಿದ್ದರು. ರಿಯಾಜ್ ಅಹಮದ್, ಶಾರುಖ್ ಖಾನ್, ಸೈಯ್ಯದ್ ಸಲ್ಮಾನ್, ಆದಿಲ್ ಖಾನ್, ಷಹಬಾಜ್ ನಜೀರ್ ಬಂಧತರಾಗಿದ್ದರು. ಬಳಿಕ ತಂದೆ ಚಿಕ್ಕಪ್ಪ ತಪ್ಪಿಸಿಕೊಂಡಿದ್ರು. ಇದೀಗ ಬರೋಬ್ಬರಿ 1 ವರ್ಷದ ಬಳಿಕ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಯುಪಿಯಲ್ಲಿ ಮರ್ಯಾದಾ ಹತ್ಯೆ : ಮುಸ್ಲಿಂ ಯುವಕನ ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ಕುಟುಂಬ..!
ಯುಪಿಯಲ್ಲಿ ಮರ್ಯಾದಾ ಹತ್ಯೆ : ಮುಸ್ಲಿಂ ಯುವಕನ ಪ್ರೀತಿಸಿದಕ್ಕೆ ಮಗಳನ್ನೇ ಕೊಂದ ಕುಟುಂಬ..!
ಉತ್ತರ ಪ್ರದೇಶ: ಅಪರಾಧಗಳು ಹೆಚ್ಚು ನಡೆಯುವ ಪ್ರದೇಶ ಯಾವುದು ಅಂದ್ರೆ ಯೋಚಿಸೋಕೆ ಸಮಯ ತೆಗೆದುಕೊಳ್ಳದೇ ಪಟ್ ಅಂತ ಎಲ್ಲರ ಬಾಯಲ್ಲೂ ಬರುತ್ತಿರುವ ಹೆಸರು ಉತ್ತರಪ್ರದೇಶ. ಅಷ್ಟರ ಮಟ್ಟಿಗೆ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಶೋಷಣೆ, ಮಹಿಳೆಯರು, ಯುವತಿ – ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಲೈಂಗಿಕ ದೌರ್ಜನ್ಯ , ಜಾತಿ ವಿವಾದ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಅದರಂತೆ ಮತ್ತೊಂದು ಹೇಯ ಕೃತ್ಯ ಯೋಗಿ ಆದಿತ್ಯ ನಾಥ್ ರಾಜ್ಯದಲ್ಲಿ ನಡೆದಿದ್ದು, ಇಡೀ ರಾಜ್ಯದ ಜನರನ್ನ ಬೆಚ್ಇ ಬೀಳಿಸಿದೆ.
ಯುವತಿಯೊಬ್ಬಳು ಮುಸ್ಲಿಂ ಯುವಕನನ್ನ ಪ್ರೀತಿಸಿದಕ್ಕೆ ಆಕೆಯನ್ನ ಇಡೀ ಕುಟುಂಬ ಸದಸ್ಯರೇ ಸೇರಿ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮುಸ್ಲಿಂ ವ್ಯಕ್ತಿಯೊಂದಿಗಿನ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡಿದ್ದ ಕುಟುಂಬಸ್ಥರು ಮಹಿಳೆಯನ್ನು ಕೊಲೆ ಮಾಡಲು ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನಿಗೆ 1.5 ಲಕ್ಷ ರೂಪಾಯಿ ಸುಪಾರಿ ನೀಡಿದ್ದರು ಎಂದು ತಿಳಿಸಿದ್ದಾರೆ.
ಪೂರ್ಣ ಸುದ್ದಿಗಳನ್ನ ಓದಲು ಲಿಂಕ್ ಗಳನ್ನ ಕ್ಲಿಕ್ ಮಾಡಿ