ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ
ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
ಅಶ್ಲೀಲ ಚಿತ್ರ ತಯಾರಿಕೆಯ ಬೃಹತ್ ಜಾಲ ಪತ್ತೆ ಹಚ್ಚಿದ ಮುಂಬೈ ಪೊಲೀಸರು..!
ಅಶ್ಲೀಲ ಸಿನಿಮಾಗಳನ್ನ ನಿರ್ಮಾಣ ಮಾಡುತ್ತಿದ್ದ ಗುಂಪನ್ನ ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಈ ಗುಂಪು ಚಂದಾದಾರಿಕೆ ಆಧಾರದ ಮೇಲೆ ಜನತೆಗೆ ನೀಲಿ ಚಿತ್ರಗಳನ್ನ ಹಂಚಿಕೆ ಮಾಡುವ ಕೆಲಸವನ್ನ ಮಾಡುತ್ತಿತ್ತು. ಒಂದು ವಾರಕ್ಕೆ ಒಂದು ನೀಲಿ ಚಿತ್ರದ ಎಪಿಸೋಡ್ ನ್ನ ರಿಲೀಸ್ ಮಾಡಲಾಗುತ್ತಿತ್ತು. ಒಟಿಟಿ ವೇದಿಕೆಯ ಮಾದರಿಯಲ್ಲೇ ಚಂದಾದಾರರಿಗೆ ವಾರಕ್ಕೊಂದು ಎಪಿಸೋಡ್ ಗಳನ್ನ ಪ್ರದರ್ಶಿಸಲಾಗುತ್ತಿತ್ತು. ಚಂದಾದಾರರು ಅಪ್ಲಿಕೇಶನ್ ಒಂದನ್ನ ಡೌನ್ ಲೋಡ್ ಮಾಡಿಕೊಂಡು ಈ ನೀಲಿ ಚಿತ್ರಗಳನ್ನ ವೀಕ್ಷಣೆ ಮಾಡುತ್ತಿದ್ದರು. ಈ ಪ್ರಕರಣ ಸಂಬಂಧ ಪೊಲೀಸರು 7 ಮಂದಿಯನ್ನ ಬಂಧಿಸಿದ್ದಾರೆ ಇದರಲ್ಲಿ ನಟರೊಬ್ಬರು ಶಾಮೀಲಾಗಿದ್ದಾರೆ ಎನ್ನಲಾಗಿದೆ. ಬಂಧನಕ್ಕೊಳಗಾದ ತಂಡದ ಅಪ್ಲಿಕೇಶನ್ಗೆ ಪ್ರತಿ ತಿಂಗಳು 199 ರೂಪಾಯಿ ಪಾವತಿ ಮಾಡಬೇಕಿತ್ತು. ಈ ಅಪ್ಲಿಕೇಶನ್ಗೆ ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು 2 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸಿದ್ದರು ಎನ್ನಲಾಗಿದೆ.
ಯುವತಿಯ ಮೇಲೆ 2 ದಿನಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಬಿಜೆಪಿ ಮುಖಂಡನೂ ಭಾಗಿ..!
ಯುವತಿಯ ಮೇಲೆ 2 ದಿನಗಳ ಕಾಲ ನಿರಂತರ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಬಿಜೆಪಿ ಮುಖಂಡನೂ ಭಾಗಿ..!
ಮಧ್ಯಪ್ರದೇಶ: 20 ವರ್ಷದ ಯುವತಿಯೊಬ್ಬಳು ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನ ಕಾರಿನಲ್ಲಿ ಅಪಹರಿಸಿ, ಫಾರ್ಮ್ ಹೌಸ್ ಗೆ ಎಳೆದೊಯ್ದ ಮೂವರು ಕಾಮುಕರು 2 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆರೋಪಿಗಳಾದ ಶಿಕ್ಷಕ ರಾಜೇಶ್ ಶುಕ್ಲಾ ಮತ್ತು ಸ್ಥಳೀಯ ಬಿಜೆಪಿ ಮುಖಂಡ ವಿಜಯ್ ತ್ರಿಪಾಠಿ ಸೇರಿದಂತೆ ಮೂವರು ಸೇರಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಯುವತಿ ಒಬ್ಬಳೇ ಮನೆಗೆ ತೆರಳುತ್ತಿರುವುದನ್ನು ಗಮನಿಸಿದ ಮೂವರು ಕಾಮುಕರು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಪಕ್ಕದ ಹಳ್ಳಿಗೆ ಕರೆದೊಯ್ದಿದ್ದಾರೆ. ನಿರ್ಜನ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್ ಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ನಿರಂತರ 2 ದಿನಗಳವರೆಗೂ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅತ್ಯಾಚಾರಕ್ಕೂ ಮುನ್ನ ಅಕೆಗೆ ಬಲವಂತವಾಗಿ ಮದ್ಯ ಕುಡಿಸಲಾಗಿದೆ. ಬಳಿಕ ಯುವತಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ತಂದೆಯ ಮೂಡನಂಬಿಕೆಯಿಂದಾಗಿ ಜೀವ ಕಳೆದುಕೊಂಡ ಮಗಳು..!
ತಂದೆಯ ಮೂಡನಂಬಿಕೆಯಿಂದಾಗಿ ಜೀವ ಕಳೆದುಕೊಂಡ ಮಗಳು..!
ಚೆನ್ನೈ: ಆಧುನಿಕ ಯುಗದಲ್ಲೂ ಜನರಲ್ಲಿ ಮೂಡನಂಬಿಕೆಗಳು ಹಾಗೆ ಉಳಿದಿದೆ. ಇಂತಹ ಮೂಡನಂಬಿಕೆಗಳು ಕೆಲವೊಮ್ಮೆ ಎಂತಹ ಅನಾಹುತಗಳಿಗೆ ಕಾರಣವಾಗುತ್ತೆ ಎನ್ನುವುದಕ್ಕೆ ತಮಿಳುನಾಡಿನಲ್ಲಿ ನಡೆದಿರುವ ಈ ಘಟನೆಯು ಒಂದು ಉದಾಹರಣೆ. ಹೌದು 19 ವರ್ಷದ ಯುವತಿಯೊಬ್ಬಳು ಟೈಫಾಯ್ಡ್ ನಿಂದ ಬಳಲುತ್ತಿದ್ದಳು. ಆದ್ರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಬದಲು ಆಕೆ ತಂದೆ ಅವಳನ್ನ ಮಂತ್ರವಾದಿ ಬಳಿ ಕರೆದೊಯ್ದಿದ್ದಾನೆ. ಇದರಿಂದಾಗಿ ಯುವತಿ ಸಾವನಪ್ಪಿರುವ ಘಟನೆ ರಾಮನಾಥಪುರಂ ನಡೆದಿದೆ.
ಗರ್ಭಿಣಿಯಾದರೂ ಸೆಕ್ಸ್ ಗೆ ಪೀಡಿಸುತ್ತಿದ್ದ ಪತಿಯ ಊಟದಲ್ಲಿ ವಿಷ ಬೆರೆಸಿ ಕೊಂದ ಪತ್ನಿ..!
ಗರ್ಭಿಣಿಯಾದರೂ ಸೆಕ್ಸ್ ಗೆ ಪೀಡಿಸುತ್ತಿದ್ದ ಪತಿಯ ಊಟದಲ್ಲಿ ವಿಷ ಬೆರೆಸಿ ಕೊಂದ ಪತ್ನಿ..!
ಚೆನ್ನೈ: ಪತ್ನಿ ಗರ್ಭಿಣಿಯಾಗಿದ್ದರೂ ಸಹ ಆಕೆಯ ಪತಿ ಪ್ರತಿನಿತ್ಯ ಆಕೆಯನ್ನ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಪತ್ನಿ ಪತಿಗೆ ವಿಷಕೊಟ್ಟು ಕೊಂದಿರುವ ಘಟನೆ ತಮಿಳುನಾಡಿನ ಪೆರಿಯಮೋಲಪಾಲಯಂನಲ್ಲಿ ನಡೆದಿದೆ. 21 ವರ್ಷದ ಮೈಥಿಲಿ ತನ್ನ ಪತಿ ನಂದ ಕುಮಾರ್ ಗೆ ವಿಷಕೊಟ್ಟು ಕೊಲೆ ಮಾಡಿದ್ದಾಳೆ. ಅಲ್ದೇ ತಾನು 5 ತಿಂಗಳ ಗರ್ಭಿಣಿಯಾಗಿದ್ದು, ಪತಿ ಸೆಕ್ಸ್ ಗೆ ಒತ್ತಾಯಿಸುತ್ತಲೇ ಇದ್ದ. ಇದರಿಂದಾಗಿ ಬೇಸರಿದಂದ ನಾನು ಆತನನ್ನ ಕೊಲೆ ಮಾಡಿದ್ದೇನೆ ಎಂದು ಮೈಥಿಲಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ