ದೇವೇಗೌಡ , ಕುಮಾರಸ್ವಾಮಿ ಹೆಸರು ಹೇಳಿದ್ರೆ ಜನ ಓಟ್ ಹಾಕಲ್ಲ ಎಂದ ಜೆಡಿಎಸ್ ಶಾಸಕ
ಮಂಡ್ಯ : ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರೇ ಸ್ವಪಕ್ಷದ ಮೇರು ನಾಯಕರ ವಿರುದ್ಧ ನೀಡಿರುವ ಹೇಳಿಕೆ ಇದೀಗ ಸಾಕಷ್ಟು ಕುತೂಹಲ ಪ್ರಶ್ನೆಗಳನ್ನ ಹುಟ್ಟು ಹಾಕಿದೆ.. ಹೌದು.. ಶಿವಲಿಂಗೇ ಗೌಡರು ದೇವೇಗೌಡರು ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಹೇಳಿದ್ರೆ ಜನ ವೋಟ್ ಮಾಡಲ್ಲ ಎಂದಿದ್ದಾರೆ.. ಈ ಹೇಳಿಕೆ ಈಗ ಶಿವಲಿಂಗೇ ಗೌಡರು ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ರಾ ಅನ್ನೋ ಪ್ರಶ್ನೆ ಹುಟ್ಟುಹಾಕಿದೆ..
ಮಂಡದ್ಯದಲ್ಲಿ ಹೆಚ್ ಡಿ ದೇವೇಗೌಡರ ನೇತೃತ್ವದ ಸಭೆಯಲ್ಲಿ ಕಿಡಿಕಾರಿದ್ದಾರೆ.. ಸೀಕ್ರೆಟ್ ಸಭೆ ಅಂತ ನಾನು ಒಬ್ಬನೇ ಬಂದಿದ್ದೇನೆ. ನನಗೆ ಮಾಹಿತಿಯನ್ನು ಸರಿಯಾಗಿ ಕೊಟ್ಟಿಲ್ಲ.. ಈ ರೀತಿಯ ಸಭೆ ಆದ್ರೆ ನಾನು ಬರ್ತಾನೇ ಇರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಸಭೆಯು ಆಯೋಜನೆಗೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರ ಹೊರ ಹಾಕಿರುವ ಶಿವಲಿಂಗೇ ಗೌಡರು, ಶಾಸಕ ಲಿಂಗೇಶ್ ರವರು ಭವಾನಿ ರೇವಣ್ಣರಿಗೆ ಟಿಕೆಟ್ ಕೊಡಲು ಒತ್ತಾಯ ಬಂದಿತ್ತು. ಯಾರಿಗೆ ಟಿಕೆಟ್ ಕೊಟ್ಟರೂ ನನ್ನ ತಕರಾರಿಲ್ಲ. ಯಾರಿಗೆ ಕೊಟ್ರೂ ಓಟ್ ಹಾಕಿಸ್ತೇನೆಂದು ಹೇಳಿದ್ದಾರೆ.
ಯುಪಿಯಲ್ಲಿ ಬಿಜೆಪಿ ಗೆಲ್ಲುತ್ತೆ… ಆದ್ರೆ 108 ಸ್ಥಾನಗಳು ಕುಸಿಯುತ್ತೆ… ಕಾರಣ ಲಖಿಂಪುರ ಪ್ರರಣ – ಸಮೀಕ್ಷೆ..!
ಸಿದ್ದರಾಮಯ್ಯ , ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟ್ ವಾರ್…!