ಯಾದಗಿರಿ : “ನನ್ನನ್ನು ಡಿಸಿಎಂ ಮಾಡು” ಎಂದು ದುರ್ಗಾದೇವಿಗೆ ಪೂಜೆ ವೇಳೆ ಪತ್ರ ಬರೆದ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀ ರಾಮುಲು ಸ್ಪಷ್ಟನೆ ನೀಡಿದ್ದಾರೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಧ್ವಜರೋಹಣ ಬಳಿಕ ಮಾತನಾಡಿದ ರಾಮುಲು, ಮನಸ್ಸಿನಲ್ಲಿರುವುದನ್ನು ದೇವಿ ಬಳಿ ಬೇಡಿಕೊಂಡಿದ್ದೆನೆ.
ದೇವಿ ಬಳಿ ಕೇಳಿಕೊಂಡಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳಬಾರದು.
ದೇವಿದರ್ಶನದಿಂದ ಒಳ್ಳೆಯದಾಗುತ್ತೆಂದು ಸ್ನೇಹಿತರು ಹೇಳಿದ್ರು.
ಹೀಗಾಗಿ ಗಡೇ ದುರ್ಗಾದೇವಿಯ ದರ್ಶನ ಪಡೆದಿದ್ದೇನೆ.
ಡಿಸಿಎಂ ಮಾಡೋದು ಬಿಡೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದರು.
ಇಂದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಗೆ ದೇಗುಲಕ್ಕೆ ಆಗಮಿಸಿದ್ದ ದೇವಿ ದರ್ಶನ ವೇಳೆ ಶ್ರೀರಾಮುಲು ” ಡೆಪ್ಯುಟಿ ಚೀಫ್ ಮಿನಿಸ್ಟರ್ ಆಫ್ ಕರ್ನಾಟಕ ಮಸ್ಟ್ & ಕಂಪಲ್ಸರಿ” ಎಂದು ಬರೆದು ದೇವಿಯ ದರ್ಶನ ಪಡೆದಿದ್ದರು.