ಹೀರೋ , ನಿರ್ದೇಶಕರು, ಕನಸಿನ ಸಿನಿಮಾ ತೆರೆಕಾಣುವ ಮುನ್ನವೇ ಬದುಕಿನ ಪಯಣ ಮುಗಿಸಿದರು
ಬೆಂಗಳೂರು: ಸ್ಯಾಂಡಲ್ ವುಡ್ ನ ನಿರ್ದೇಶಕ ಅಭಿರಾಮ್ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ವಿಪರ್ಯಾಸವೆಂದರೆ ಕೆಲ ತಿಂಗಳ ಹಿಂದೆ ಅಭಿರಾಮ್ ಆಕ್ಷನ್ ಕಟ್ ಹೇಳಿದ್ದ 0% ಲವ್ ಚಿತ್ರದ ನಾಯಕ ಡಿ.ಎಸ್.ಮಂಜುನಾಥ್ ಸಹ ಕೊರೊನಾದಿಮದ ಸಾವನ್ನಪ್ಪಿದ್ದರು.
ಕೋವಿಡ್ ಗೆ ಸ್ಯಾಮಡಲ್ ವುಡ್ , ಟಾಲಿವುಡ್ , ಬಾಲಿವುಡ್ , ಕಾಲಿವುಡ್ , ಮಾಲಿವುಡ್ ನ ಅನೇಕ ಸಿನಿತಾರೆಯರು ಈಗಾಗಲೇ ಬಲಿಯಾಗಿದ್ದಾರೆ. ಸಂಯುಕ್ತ-2 ಮತ್ತು 0% ಲವ್ ಚಿತ್ರದ ನಿರ್ದೇಶಕ ಅಭಿರಾಮ್ ಈಗ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ..
ಒಂದು ವಾರದಿಂದ ಜ್ವರ, ಕೆಮ್ಮು ಲಕ್ಷಣಗಳು ಕಂಡುಬಂದರೂ ಸಹ ಚಿಕಿತ್ಸೆ ಪಡೆಯದೇ ಕೊರೊನಾ ಟೆಸ್ಟ್ ಮಾಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಉಸಿರಾಟದ ತೊಂದರೆ ಶುರುವಾಗಿ , ಬಳಿಕ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.
ಅಭಿರಾಮ್ಗೆ ಕೆಲವು ದಿನಗಳಿಂದ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಆದರೆ ಅದನ್ನು ಅವರು ನಿರ್ಲಕ್ಷ್ಯ ಮಾಡಿ ಕೋವಿಡ್ ಪರೀಕ್ಷೆಯನ್ನು ಸಹ ಮಾಡಿಸಿಕೊಳ್ಳಲಿಲ್ಲ. ನಿನ್ನೆಯಿಂದ ಅಭಿರಾಮ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಇಂದು (ಮೇ 28) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಡಿ.ಆರ್.ಮಂಜುನಾಥ್ ಅವರೇ ನಿರ್ಮಾಣ ಮಾಡಿದ್ದ 'ಸಂಯುಕ್ತ 2' ಸಿನಿಮಾದ ಮೂಲಕ ಅಭಿರಾಮ್ ನಿರ್ದೇಶಕರಾಗಿದ್ದರು. ನಂತರ ಮಂಜುನಾಥ್ ಅವರನ್ನೇ ನಾಯಕನ್ನಾಗಿಸಿ 'ಪ್ರೆಸೆಂಟ್ ಪ್ರಪಂಚ ೦% ಲವ್' ಸಿನಿಮಾ ಮಾಡಿದ್ದರು. ಆದರೆ ಸಿನಿಮಾ ತೆರೆಗೆ ಬರುವ ಮುನ್ನವೇ ನಾಯಕ, ನಿರ್ದೇಶಕ ಇಬ್ಬರೂ ನಿಧನ ಹೊಂದಿದ್ದಾರೆ.
‘ಕೋವಿಡ್ 2ನೇ ಅಲೆ – ದೇಶಾದ್ಯಂತ ಎಷ್ಟು ಮಕ್ಕಳು ಪೋಷಕರನ್ನ ಕಳೆದುಕೊಂಡಿದ್ದಾರೆ – ಊಹಿಸುವುದೂ ಅಸಾಧ್ಯ’
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ".
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.