kiccha sudeep
‘ಕರ್ನಾಟಕದಲ್ಲೇ ಶೂಟಿಂಗ್ ಮಾಡಿ’ ಎಂದ ಅಭಿಮಾನಿಗೆ ಕಿಚ್ಚ ಕೊಟ್ಟ ಉತ್ತರ ಇದು..!
ಕಿಚ್ಚ ಸುದೀಪ್ ನಟನೆಯ ‘ಪ್ಯಾಂಟಮ್’ ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಗಿದೆ. ಈಗಾಗಲೇ ಇಷ್ಟು ದಿನಗಳ ಕಾಲ ಹೈದ್ರಾಬಾದ್ ನಲ್ಲಿ ಬೀಡುಬಿಟ್ಟಿದ್ದ ಸಿನಿಮಾ ತಂಡ ಸದ್ಯ ಹೈದರಾಬಾದ್ ನ ಚಿತ್ರೀಕರಣದ ಶೆಡ್ಯೂಲ್ ಕಂಪ್ಲೀಟ್ ಮಾಡಿಕೊಂಡಿದೆ. ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನೂ ಈ ಬಗ್ಗೆ ಸ್ವತಃ ಸುದೀಪ್ ಟ್ವಿಟ್ಟರ್ ಮೂಲಕ ತಿಳಿಸಿದ್ದರು. ”ಹೈದರಾಬಾದ್ನ ಸುದೀರ್ಘ ಶೆಡ್ಯೂಲ್ ಈಗತಾನೆ ಮುಕ್ತಾಯವಾಗಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ” ಎಂದು ಬರೆದುಕೊಂಡಿದ್ದರು.
ಮಾಲ್ಡಿವ್ಸ್ ಕಡಲ ಟೆಂಪರೇಚರ್ ಹೆಚ್ಚಿಸಿದ ಶಾನ್ವಿ
ಕಿಚ್ಚನ ಟ್ವೀಟ್ ಗೆ ಅಭಿಮಾನಿಗಳಿಂದ ಸಾಕಷ್ಟು ಲೈಕ್ಸ್ ಕಮೆಂಟ್ಸ್ ಗಳು ಹರಿದುಬಂದಿದ್ದವು. ಆದರೆ ನೆಟ್ಟಿಗರೊಬ್ಬರ ಕಮೆಂಟ್ ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಹೌದು ಕಿಚ್ಚನ ಟ್ವೀಟ್ ಗೆ ಪ್ಗರತಿಕ್ರಿಯೆ ನೀಡಿದ್ದ ಅಭಿಮಾನಿಯೊಬ್ಬರು ”ಗ್ರೇಟ್, ಸಾಧ್ಯವಾದರೆ ಕರ್ನಾಟಕದಲ್ಲೇ ಚಿತ್ರೀಕರಣ ಮಾಡಿ, ಕನ್ನಡದ ಸಾಕಷ್ಟು ತಂತ್ರಜ್ಞರು ಕೆಲಸದಲ್ಲಿ ಹುಡುಕುತ್ತಿದ್ದಾರೆ. ನಿಜವಾಗಲೂ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ” ಎಂದಿದ್ದರು. ಆದರೆ ಇದಕ್ಕೆ ಉತ್ತರಿಸಿರುವ ಸುದೀಪ್ ಅವರು ”ಸರ್, ಈ ಚಿತ್ರದ ಸೆಟ್ನಲ್ಲಿ ಬಹುತೇಕ ಎಲ್ಲರೂ ಕರ್ನಾಟಕದವರೇ ಕೆಲಸ ಮಾಡುತ್ತಿದ್ದಾರೆ, ಧನ್ಯವಾದ” ಎಂದಿದ್ದಾರೆ.
kiccha sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel