ಕಿರಿಕ್ ಪಾರ್ಟಿ ಟೀಮ್ ಗೆ ಕಾನೂನಿನ ಟೆನ್ಷನ್ ಶುರು…! ಆಗಿದ್ದೇನು..?
ಬೆಂಗಳೂರು: 2016ರಲ್ಲಿ ರಿಲೀಸ್ ಆಗಿದ್ದ ಸಿಫಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ , ಸಂಯುಕ್ತಾ ಹೆಗ್ಡೆ ನಟನೆ ಹಾಗೂ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಹುತೇಕ ಕಾಲೇಜು ಯುವಕರ ಪಾಲಿಗೆ ಫೇವರೇಟ್ ಸಿನಿಮಾ ಆಗಿದ್ದ ಈ ಸಿನಿಮಾ ಮ್ಯೂಸಿಕ್ ನಿಂದ ಹಿಡಿದು, ಕಾಮಿಡಿ , ಕಥೆ, ಸ್ನೇಹ , ಕಾಲೇಜ್ ಲೈಫ್, ರೊಮ್ಯಾನ್ಸ್ ನಿಂದ ಭಾರೀ ಸದ್ದು ಮಾಡಿತ್ತು. ಆದ್ರೆ ಈ ಸಿನಿಮಾ ರಿಲೀಸ್ ಸುಮಾರು 4 ವರೆ ವರ್ಷಗಳೇ ಕಳೆದು ಹೋದ ಬಳಿಕ ಈ ಸಿನಿಮಾ ತಂಡಕ್ಕೆ ಕಂಟಕ ಎದುರಾಗಿದೆ. ಇಡೀ ಚಿತ್ರತಂಡಕ್ಕೆ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿದೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪವನ್ನು ಚಿತ್ರತಂಡ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದು ಎಲ್ಲರಿಗೂ ವಾರೆಂಟ್ ಜಾರಿ ಮಾಡಿ 9 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಯಾರದ್ದೇ ಅನುಮತಿ ಇಲ್ಲದೇ ನಿಯಮ ಬಾಹಿರವಾಗಿ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲಹರಿ ರೆಕಾರ್ಡಿಂಗ್ಸ್ ಚಿತ್ರತಂಡದ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿತ್ತು. ಕಾಪಿ ರೈಟ್ಸ್ ಆಕ್ಟ್ ಸೆಕ್ಷನ್ 63ಎ ಮತ್ತು 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು. ಈ ಕೇಸ್ 2019ರಲ್ಲಿ ದಾಖಲಾಗಿತ್ತು.
ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಚಿತ್ರತಂಡ ಅನುಮತಿ ಪಡೆದು ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಕೇಸ್ಗಳು ಮಾತ್ರ ಕೋರ್ಟ್ನಲ್ಲಿ ನಡೆಯುತ್ತಲೇ ಇತ್ತು. ಇದೀಗ ಆದೇಶ ಹೊರಬಂದಿದ್ದು ಎಲ್ಲರಿಗೂ ಜಾಮೀನುರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಕೇಸ್ ಎದುರಿಸುತ್ತಿರುವ ಎಲ್ಲರೂ ಸಹ ಮೇ 27ರಂದು ಕೋರ್ಟ್ಗೆ ಹಾಜರಾಗಬೇಕಿದೆ.
ತಮಿಳು ಸಿನಿಮಾದಲ್ಲಿ ನಟಿಸುತ್ತೇನೆ.. ಆದ್ರೆ ಒಂದು ಷರತ್ತಿನ ಮೇಲೆ – ಪುನೀತ್ ರಾಜ್ ಕುಮಾರ್ ಹಾಕಿದ ಕಂಡೀಷನ್ ಏನ್ ಗೊತ್ತಾ..?