ಇದ್ದ ಎಂಎಲ್ಎ ಪಧವಿನೂ ಕಳೆದುಕೊಂಡು, ಕ್ಷೇತ್ರದಲ್ಲಿ ರಾಜಕೀಯ ಹಿಡಿತವನ್ನೂ ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ ಬೈ ಎಲೆಕ್ಷನ್ ನಲ್ಲಿ ಸೋತ ಶಾಸಕರು. ಸೋತರೂ ಸಹ ಏನಾದ್ರೂ ಮಾಡಿ ಅಧಿಕಾರ ಹಿಡಿಯಲೇಬೇಕೆಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ ಸೋತ ಶಾಸಕರು.
ಸದ್ಯ ಸೋತವರು ಅಧಿಕಾರ ಹಿಡಿಯಲು ಕೆಲವು ಕಾನೂನು ತೊಡುಕುಗಳಿವೆ ಎಂಬುದನ್ನು ಕಂಡುರುವ ಹೊಸಕೋಟೆ ಮಾಜಿ ಶಾಸಕ ಎಂಟಿಬಿ ನಾಗರಾಜ್ ಕಾನೂನಿನಲ್ಲಿರೋ ಅವಕಾಶಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳೊಬ್ಬರಿಂದ ಮಾಹಿತಿ ಪಡೆದಿದ್ದು, ಉಪಚುನಾವಣೆಯಲ್ಲಿ ಸೋತ ಶಾಸಕರಿಂದ ಹೊಸ ಲೆಕ್ಕಾಚಾರ ಶುರುವಾಗಿದೆ. ಈಗಾಗಲೇ ಸಚಿವ ಸಂಪುಟ ಸ್ಥಾನದ ಮೇಲೆ ಆಸೆ ಬಿಟ್ಟಿರೋ ಎಂಟಿಬಿ, ಬಿಡಿಎ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಹಳ್ಳಿ ಹಕ್ಕಿ ವಿಶ್ವನಾಥ್ ಸಹ ಕಾನೂನು ನಿಪುಣರ ಮೊರೆ ಹೋಗಿದ್ದು, ದಾಖಲೆ ಸಹಿತ ಸಿಎಂ ಯಡಿಯೂರಪ್ಪರ ಮೇಲೆ ಒತ್ತಡ ತಂದು ಅಧಿಕಾರ ಪಡೆಯಲು ಪ್ಲಾನ್ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಸಂಪಟ ರಚನೆಗೆ ನಾನಾ ಕಷ್ಟಗಳಿಗೆ ಒಳಾಗಾಗಿರೋ ಸಿಎಂ, ಮುಂದೆ ಈ ಸಮಸ್ಯೆಯನ್ನು ಹೇಗೆ ನಿಭಾಯಿಸ್ತರಾರೋ ಕಾದು ನೋಡಬೇಕಿದೆ.
Astro-ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ
ಈಶ್ವರನ ಕೃಪೆಯಿಂದ ಇಂದು ಈ ರಾಶಿಯವರಿಗೆ ಸಿಗಲಿದೆ ಭಾರೀ ಯಶಸ್ಸು, ಎಚ್ಚರಿಕೆ ಇರಲಿ ಪಂಡಿತ್ ಜ್ಞಾನೇಶ್ವರ್ ರಾವ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ...








