ತವರಿಗೆ ಹೋಗಿ ಬರುತ್ತೀನಿ ಅಂತ ಹೋದ ವಧು, ಲವರ್ ಜೊತೆ ಎಸ್ಕೇಪ್… ಪಾಪ ಆಕೆಗಾಗಿ ಕಾಯ್ತಿದ್ದ ವರನ ಕಥೆ ಏನು..!
1 min read
ತವರಿಗೆ ಹೋಗಿ ಬರುತ್ತೀನಿ ಅಂತ ಹೋದ ವಧು, ಲವರ್ ಜೊತೆ ಎಸ್ಕೇಪ್… ಪಾಪ ಆಕೆಗಾಗಿ ಕಾಯ್ತಿದ್ದ ವರನ ಕಥೆ ಏನು..!
ಇತ್ತೀಚೆಗಷ್ಟೇ ಮದುವೆಯಾಗಿದ್ದ ಮಹಿಳೆಯೊಬ್ಬಳು, ಮದುವೆಯಾಗಿ 20 ದಿನಕ್ಕೆ ಪತಿಗೆ ಕೈಕೊಟ್ಟ ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರಪುರ್ನಲ್ಲಿ ನಡೆದಿದೆ. ಅಷ್ಟೇ ಅಲ್ಲ ಸುಮಾರು ಐದು ಲಕ್ಷ ರೂಪಾಯಿ ಮೌಲ್ಯದ ಒಡವೆ ಮತ್ತು ಹಣವನ್ನೂ ಕದ್ದು ಪರಾರಿಯಾಗಿದ್ದಾಳೆ.
ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಎಷ್ಟು ದಿನವಾದರೂ ಬರದೇ ಇದ್ದಾಗ ಆಕೆ ಮನೆ ಬಳಿ ಹೋದ ವೇಳೆ ಈ ವಿಚಾರ ಗೊತ್ತಾಗಿದೆ. ಈ ಸಂಬಂಧ ಪತಿ ಇಇದೀಗ ಪೊಲೀಸ್ಠಾಣೆಯಲ್ಲಲಿ ದೂರು ದಾಖಲಿಸಿದ್ದಾನೆ. 20 ವರ್ಷದ ಮೂರ್ತಿ ರೆಕ್ವಾರ್ ಎಂಬ ಯುವತಿ ಕಳೆದ ವರ್ಷ ಡಿಸೆಂಬರ್ನಲ್ಲಿ ರಾಹುಲ್ ಎಂಬ ಯುವಕನ ಜತೆ ಮದುವೆಯಾಗಿದ್ದಳು. ತನ್ನ ಪ್ರೇಮದ ವಿಷಯವನ್ನು ಹುಡುಗನ ಮನೆಯವರಿಂದಲೂ ಮುಚ್ಚಿಟ್ಟಿದ್ದಳು. ಮದುವೆಯಾದ 18ನೇ ದಿನಕ್ಕೆ ವಧುವನ್ನ ತವರಿಗೆ ಕಳುಹಿಸುವ ಪದ್ಧತಿಯಿದೆ. ಅದ್ರಂತೆ ಆಕೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿಂದ ವಾಪಸ್ ಗಂಡನ ಮನೆಗೆ ವಾಪಸ್ ತೆರಳುವುದಾಗಿ ಹೇಳಿ ಹೊರಟವಳು ಸೀದಾಪ್ರಿಯಕರನ ಜೊತಗೆ ಎಸ್ಕೇಪ್ ಆಗಿದ್ದಾಳೆ.
4ನೇ ಮಹಡಿಯಿಂದ ಜಿಗಿದ ಯುವತಿಯ ಪ್ರಾಣ ಉಳಿಸಿದ ಆಟೋ..!
ಇತ್ತ ಹೊಸ ಪತ್ನಿಗಾಗಿ ಕಾದುಕುಳಿತಿದ್ದ ರಾಹುಲ್ ಆಕೆಗಾಗಿ ಕಾದು ಕಾದು ಸುಸ್ತಾಗಿದ್ದಾನೆ. ನಂತರ ನೇರವಾಗಿ ಪತ್ನಿಯ ತವರಿಗೆ ಹೋಗಿದ್ದಾನೆ. ಪತಿಯ ಮನೆಗೆ ಹೋದಾಕೆ ಅಲ್ಲಿಯೂ ಇರದಿದ್ದಾಗ ಕಂಡು ಎರಡೂ ಕುಟುಂಬದವರಿಗೆ ಗಾಬರಿಯಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನಿಖೆ ಕೈಗೊಂಡ ಪೊಲೀಸರಿಗೆ ಯುವತಿ ಅದೇ ಗ್ರಾಮದ ಭಜ್ಜು ಯಾದವ್ ಎಂಬ ಪ್ರಿಯಕರನ ಜತೆ ಓಡಿಹೋಗಿರುವ ವಿಚಾರರ ಗೊತ್ತಾಗಿದೆ. ಇದೀಗ ಇಬ್ಬರ ಹುಡುಕಾಟದಲ್ಲಿ ಪೊಲೀಸರು ಇದ್ದಾರೆ.
ಪತ್ನಿ, ಅತ್ತೆಯ ಹತ್ಯೆ ಮಾಡಿ ಮಕ್ಕಳ ಎದುರಲ್ಲೇ ಮೃತದೇಹವನ್ನು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel