ಖ್ಯಾತ ನಟ ಚಿರಂಜೀವಿ (Shivaraj Kumar) ಅವರಿಗೆ ಪದ್ಮ ವಿಭೂಷಣ (Padma Vibhushan) ದೊರೆತ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಹೈದರಾಬಾದ್ ನ ಚಿರಂಜೀವಿ (Chiranjeevi) ಮನೆಗೆ ಭೇಟಿ ನೀಡಿ ಶಿವಣ್ಣ ಅಭಿನಂದಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಂದಿಸಿದ ಫೋಟೋವನ್ನು ಚಿರಂಜೀವಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಚಿರಂಜೀವಿ ಕುಟುಂಬ ಹಾಗೂ ಮತ್ತು ಡಾ.ರಾಜ್ ಕುಮಾರ್ ಕುಟುಂಬ ಮೊದಲಿನಿಂದಲೂ ಆಪ್ತವಾಗಿದೆ. ಈ ಹಿನ್ನೆಲೆಯಲ್ಲಿ ಶಿವಣ್ಣ ತೆರಳಿ ಅಭಿನಂದಿಸಿದ್ದಾರೆ. ರಾಮ್ ಚರಣ್ ಮದುವೆಗೂ ಪುನೀತ್ ರಾಜ್ ಕುಮಾರ್ ಮತ್ತು ಶಿವಣ್ಣ ಹೋಗಿದ್ದರು.