ಆಟಗಾರರು ಯಂತ್ರಗಳಲ್ಲ : ಹೀಗಂದಿದ್ದು ಯಾಕೆ ರೋಹಿತ್..?
ಜೈಪುರ :ಆಟಗಾರರು ಯಂತ್ರವಲ್ಲ. ಅವರಿಗೆ ಬಿಡುವು ಅವಶ್ಯವಾಗಿರುತ್ತದೆ ಎಂದು ಟೀಂ ಇಂಡಿಯಾ ಟಿ20 ತಂಡದ ನಾಯಕ ರೋಹಿತ್ ಶರ್ಮಾ ಪ್ರತಿಪಾದಿಸಿದ್ದಾರೆ.
ಇಂದು ಜೈಪುರ್ ದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯ ಮೊದಲ ಪಂದ್ಯ ನಡೆಯಲಿದೆ.
ಹೀಗಾಗಿ ಕ್ಯಾಪ್ಟನ್ ರೋಹಿತ್ ಶಮಾ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ವೇಳೆ ಪ್ರತ್ರಕರ್ತರೊಬ್ಬರು ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಿದರ ಬಗ್ಗೆ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡದ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ.
ಅವರು ತಂಡದಲ್ಲಿ ಇರುವುದು ಮತ್ತಷ್ಟು ಶಕ್ತಿ ನೀಡುತ್ತದೆ ಎಂದರು.
ಜೊತೆಗೆ ಆಟಗಾರರು ಯಂತ್ರವಲ್ಲ. ಅವರಿಗೆ ಬಿಡುವು ಅವಶ್ಯವಾಗಿರುತ್ತದೆ.
ಅದೇ ಕಾರಣಕ್ಕಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಟೂರ್ನಿಗೋಸ್ಕರ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದರು ರೋಹಿತ್.
ಅಂದಹಾಗೆ ಟೀಂ ಇಂಡಿಯಾದ ಆಟಗಾರರು ಸದಾ ಕ್ರಿಕೆಟ್ ಆಡುತ್ತಲೇ ಇರುತ್ತಾರೆ.
ಬಿಸಿಸಿಐ ಬ್ಯಾಕ್ ಟು ಬ್ಯಾಕ್ ಸರಣಿಗಳನ್ನು ನಿಗದಿ ಪಡಿಸುತ್ತಲೇ ಇರುತ್ತದೆ.
ಹೀಗಾಗಿ ಸಾಕಷ್ಟು ಮಂದಿ ಆಟಗಾರರು ವಿಶ್ರಾಂತಿ ಬಯಸಿದ್ದಾರೆ.
ವಿಶ್ವಕಪ್ ನಿಂದ ಹೊರಬಿದ್ದ ಬಳಿಕ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಇದೇ ವಿಚಾರವಾಗಿ ಗರಂ ಆಗಿದ್ದರು.
ಆಟಗಾರರು ಪೆಟ್ರೋಲ್ ಸುರಿದು ನಡೆಸಲು ವಾಹನಗಳಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.