UP Election – 17 ವರ್ಷಗಳ ನಂತರ ಬಿಜೆಪಿಗೆ ಮರಳಿದ ರಂಗನಾಥ್ ಮಿಶ್ರಾ
- 17 ವರ್ಷಗಳ ನಂತರ ಬಿಜೆಪಿಗೆ ಮರಳಿದ ರಂಗನಾಥ್
- ಮಿಶ್ರಾ ಬಿಎಸ್ಪಿ ಸರ್ಕಾರದಲ್ಲಿ ಸಚಿವರಾಗಿದ್ದರು
- ಭ್ರಷ್ಟಾಚಾರದ ಆರೋಪಗಳೂ ಇವೆ.
ಉತ್ತರ ಪ್ರದೇಶದ ಮಾಯಾವತಿ ಸರ್ಕಾರದಲ್ಲಿ ಸಚಿವರಾಗಿದ್ದ ರಂಗನಾಥ್ ಮಿಶ್ರಾ ಮತ್ತೊಮ್ಮೆ ಬಿಜೆಪಿ ಸೇರಿದ್ದಾರೆ. ಲಕ್ನೋದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ರಂಗನಾಥ್ ಮಿಶ್ರಾ ಜೊತೆಗೆ ಎಸ್ಪಿಯ ಮಾಜಿ ಶಾಸಕ ಮನೀಶ್ ರಾವತ್ ಮತ್ತು ಎಸ್ಪಿಯ ಮನೋಜ್ ಪ್ರಜಾಪತಿ ಕೂಡ ಬಿಜೆಪಿ ಸೇರಿದರು. 80ರ ದಶಕದಲ್ಲಿ ರಂಗನಾಥ್ ಮಿಶ್ರಾ ಅವರು ಬಿಜೆಪಿಯೊಂದಿಗೆ ರಾಜಕೀಯ ಪಯಣ ಆರಂಭಿಸಿದ್ದರು. ನಂತರ ಅವರನ್ನು ಬಿಜೆಪಿ ಭದೋಹಿಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿತು.
1993ರಲ್ಲಿ ಔರೈ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಆ ನಂತರ 1996ರಲ್ಲಿ ಬಿಜೆಪಿಯಿಂದ ಗೆದ್ದು ಅರಣ್ಯ ಸಚಿವರೊಂದಿಗೆ ಇಂಧನ, ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದರು. ಆ ಬಳಿಕ ಬಿಎಸ್ಪಿ ಸೇರಿದ್ದರು.
2007ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಎಸ್ಪಿ ಸರ್ಕಾರದಲ್ಲಿ ಪ್ರೌಢ ಶಿಕ್ಷಣ ಸಚಿವರಾದರು. ಇದಾದ ನಂತರ ಬಿಎಸ್ಪಿಯಲ್ಲಿ ಅವರ ಸ್ಥಾನಮಾನ ಬೆಳೆಯುತ್ತಲೇ ಇತ್ತು. 2017ರ ವಿಧಾನಸಭಾ ಚುನಾವಣೆಯಲ್ಲಿ ಭಾದೋಹಿಯಿಂದ ಬಿಎಸ್ಪಿ ಚಿಹ್ನೆಯಲ್ಲಿ ಸ್ಪರ್ಧಿಸಿ ಸೋತಿದ್ದರು.