ಚಂದನವನದ ನಿರ್ಮಾಪಕ ಎನ್.ಕುಮಾರ್ ಮತ್ತು ನಟ ಸುದೀಪ್ ಮಧ್ಯೆ ಅಡ್ವಾನ್ಸ್ ಜಟಾಪಟಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹುಚ್ಚ ಸಿನಿಮಾ ನಿರ್ಮಾಪಕ ಎಚ್.ಎ. ರೆಹಮಾನ್ ಈಗ ಸುದೀಪ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಹುಚ್ಚ ಸಿನಿಮಾ ನಿರ್ಮಾಪಕರಿಗೂ ಸುದೀಪ್ ಅಡ್ವಾನ್ಸ್ ಹಿಂದಿರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸಿನಿಮಾ ಸಮಯದಲ್ಲಿ ಕೊಟ್ಟಿದ್ದ ಅಡ್ವಾನ್ಸ್ ಹಾಗೂ ಕೆಲವು ಸಿನಿಮಾಗಳ ರೈಟ್ಸ್ ನ ತರಿಸಿದ್ದ ಸುದೀಪ್, ಆ ನಂತರ ಸಿನಿಮಾ ಮಾಡಲಿಲ್ಲವೆಂದು ನಿರ್ಮಾಪಕ ಎಚ್.ಎ.ರೆಹಮಾನ್ ಆರೋಪಿಸಿದ್ದಾರೆ. ಇದರಿಂದಾಗಿ ನನಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
ನಾನು 20 ಸಿನಿಮಾ ಮಾಡಿದ್ದೀನಿ. ಯಜಮಾನ ಮತ್ತು ಹುಚ್ಚ ಸಿನಿಮಾ ನಿರ್ಮಾಣ ಮಾಡಿದ್ದೀನಿ. ನಾನು ಸುದೀಪ್ ಮೇಲೆ ಆರೋಪ ಮಾಡುತ್ತಿಲ್ಲ. ಆದರೆ, ನಾನು ನ್ಯಾಯ ಕೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಹುಚ್ಚ ಸಿನಿಮಾ ಬಿಡುಗಡೆಯಾಗಿ 100 ದಿನ ಕಳೆದ ನಂತರ ಸುದೀಪ್ ಅವರನ್ನು ಕರೆಯಿಸಿ ಲಾಡು ಹಂಚಲಾಗಿತ್ತು. ಅಣ್ಣಾವ್ರು ಹುಚ್ಚ ನೋಡಬೇಕು ಅಂತ ಕೇಳಿದ್ರು, ಲಾಸ್ಟ್ ಸೀನ್ ನಲ್ಲಿ ಅಣ್ಣಾವ್ರು ಕಣ್ಣೀರು ಹಾಕಿದರು. ವಾಲಿ ಸಿನಿಮಾ ಶೂಟಿಂಗ್ನಲ್ಲಿದ್ದ ಸುದೀಪ್ ಬಂದ್ರು. ಅಣ್ಣಾವ್ರು ಸುದೀಪ್ ಗೆ ಹೊಗಳಿದ್ದರು ಎಂದು ಹೇಳಿದ್ದಾರೆ.
ಈ ವಿಷಯವಾಗಿ ಎಂಟು ವರ್ಷದ ಹಿಂದೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದೆ. ಸೂರಪ್ಪ ಬಾಬು ಆಗ ಇದ್ದರು. ಆಗ ಸೂರಪ್ಪ ಬಾಬು ಆಗ ಸುದೀಪ್ ಗೆ ಸಿನಿಮಾ ಮಾಡುತ್ತಿದ್ದರು. ಆದರೆ, ನನ್ನ ದೂರನ್ನು ಮುಚ್ಚಿ ಹಾಕಿದ್ದರು. ನಾಲ್ಕೂವರೆ ಲಕ್ಷ ಅಡ್ವಾನ್ಸ್ ಕೋಟ್ಟಿದ್ದೇ ಅದು ವಾಪಸ್ ಕೊಡಲಿ. ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ವಾಪಸ್ ಕೊಡಲಿ ಅಂತ ನಿರ್ಮಾಪಕ ರೆಹಮಾನ್ ಆಗ್ರಹಿಸಿದ್ದಾರೆ.