ಈರುಳ್ಳಿ ಕಚೋರಿ
ಬೇಕಾಗುವ ಸಾಮಗ್ರಿಗಳು
ಈರುಳ್ಳಿ – 2
ಕಡಲೆ ಹಿಟ್ಟು – 2 ಚಮಚ
ಮೈದಾ – 2 ಕಪ್
ಓಮಕಾಳು ಸ್ವಲ್ಪ
ಇಂಗು ಸ್ವಲ್ಪ
ಎಣ್ಣೆ
ಆಲೂಗಡ್ಡೆ – 2
ಮೆಣಸಿನ ಪುಡಿ – 1/2 ಚಮಚ
ದನಿಯಾ ಪುಡಿ – 1/2 ಚಮಚ
ಅರಿಶಿನ – 1/4 ಚಮಚ
ಜೀರಿಗೆ – 1/2 ಚಮಚ
ಸೋಂಪು – 1/2 ಚಮಚ
ಹಸಿ ಮೆಣಸಿನಕಾಯಿ 2
ಉಪ್ಪು

ಮಾಡುವ ವಿಧಾನ
ಮೊದಲಿಗೆ ಮೈದಾಕ್ಕೆ ಉಪ್ಪು, ಓಮಕಾಳು, 3 ಚಮಚ ಎಣ್ಣೆ ಸೇರಿಸಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ನಂತರ 30 ನಿಮಿಷಗಳ ಕಾಲ ಹಾಗೆ ಬಿಡಿ.
ಈಗ ಈರುಳ್ಳಿಗಳನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜೀರಿಗೆ, ಸೋಂಪು(fennel seed), ಇಂಗು ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅದಕ್ಕೆ ಕೆಂಪು ಮೆಣಸಿನ ಪುಡಿ, ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಬೆರೆಸಿ. ಬಳಿಕ ದನಿಯಾ ಹುಡಿ, ಅರಿಶಿನ, ಉಪ್ಪು ಮತ್ತು ಬೇಯಿಸಿದ ಆಲೂಗಡ್ಡೆ ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಕಡಲೆ ಹಿಟ್ಟು ಸೇರಿಸಿ ಹುರಿಯಿರಿ.. ಎಲ್ಲವೂ ಸರಿಯಾಗಿ ಮಿಶ್ರವಾದ ಬಳಿಕ ಒಲೆಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ.
ಈಗ ಚೆನ್ನಾಗಿ ನಾದಿರುವ ಮೈದಾಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಿ. ಈಗ ಅದರಲ್ಲಿ ಈರುಳ್ಳಿ ಮಸಾಲೆ ತುಂಬಿ ಅಂಚುಗಳನ್ನು ಒಟ್ಟಿಗೆ ಸೇರಿಸಿ ಮೆಲ್ಲಗೆ ಲಟ್ಟಿಸಿಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ವೆಜ್ ಪನೀರ್ ಫ್ರೈಡ್ ರೈಸ್ https://t.co/bpvIFfVtRu
— Saaksha TV (@SaakshaTv) August 16, 2021
ಬೇಸಿಗೆಯಲ್ಲಿ ಈರುಳ್ಳಿಯನ್ನು ಏಕೆ ಹೆಚ್ಚು ಬಳಸಬೇಕು?#Saakshatv #healthtips #summer #onion https://t.co/lB7oABRZJx
— Saaksha TV (@SaakshaTv) August 16, 2021
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ – ಎಸ್ಬಿಐನಿಂದ ಗೃಹ ಸಾಲದ ಮೇಲೆ ಶೂನ್ಯ ಸಂಸ್ಕರಣಾ ಶುಲ್ಕ#StateBank #Homeloans https://t.co/W0TBsvT9cV
— Saaksha TV (@SaakshaTv) August 15, 2021
ನಿಂಬೆಯ ಅತಿಯಾದ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು#Saakshatv #healthtips #lemon https://t.co/5YGdDNcKq3
— Saaksha TV (@SaakshaTv) August 15, 2021
#Saakshatv #cookingrecipe #onionkachori








