ಯಾವ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಪಪ್ಪಾಯಿ ಹಣ್ಣು ಸೇವನೆ ಒಳ್ಳೆಯದಲ್ಲ
ಪಪ್ಪಾಯಿ ಹಲವು ಗುಣಗಳಿಗೆ ಹೆಸರುವಾಸಿಯಾಗಿದೆ. ಹಸಿ ಮತ್ತು ಮಾಗಿದ ಪಪ್ಪಾಯಿ ಅನೇಕ ಪ್ರಯೋಜನಗಳನ್ನು ಹೊಂದಿದೆ.
ಹೊಟ್ಟೆಯ ಸಮಸ್ಯೆ ಸೇರಿದಂತೆ ದೇಹದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಪಪ್ಪಾಯಿ ತಿಂದರೆ ಅನೇಕ ಸಂದರ್ಭಗಳಲ್ಲಿ, ಅನಾನುಕೂಲಗಳನ್ನು ಸಹ ಹೊಂದಿರಬಹುದು.
ನೀವು ಪಪ್ಪಾಯಿಯನ್ನು ಪ್ರತ್ಯೇಕವಾಗಿ ತಿನ್ನುವುದಿಲ್ಲವಾದರೂ, ಹಲವು ಬಾರಿ ಅದನ್ನು ಆಕಸ್ಮಿಕವಾಗಿ ಮಿಶ್ರ ಹಣ್ಣಿನ ಚಾಟ್ ನಲ್ಲಿ ಸೇವಿಸುತ್ತೀರಿ. ಹಸಿ ಅಥವಾ ಮಾಗಿದ ಪಪ್ಪಾಯಿ ಸೇವನೆ ಕೆಲವರಿಗೆ ಹಾನಿಕಾರಕವಾಗಬಹುದು. ಆದ್ದರಿಂದ ನೀವು ಪಪ್ಪಾಯಿ ತಿನ್ನುವ ಮೊದಲು ನಿಮ್ಮ ಆರೋಗ್ಯದ ಬಗ್ಗೆ ಒಮ್ಮೆ ಯೋಚಿಸಬೇಕು.
ಗರ್ಭಿಣಿಯರು
ಗರ್ಭಿಣಿಯರು ಯಾವುದೇ ರೀತಿಯ ಪಪ್ಪಾಯಿಯನ್ನು, ಹಸಿ ಅಥವಾ ಬೇಯಿಸಿ ತಿನ್ನಬಾರದು. ಪಪ್ಪಾಯಿಯು ಉಷ್ಣ ಗುಣ ಹೊಂದಿರುತ್ತದೆ. ಇದನ್ನು ತಿನ್ನುವುದರಿಂದ ಗರ್ಭಿಣಿ ಮಹಿಳೆಯರಿಗೆ ಸಮಸ್ಯೆಗಳು ಉಂಟಾಗಬಹುದು ಮತ್ತು ಗರ್ಭದಲ್ಲಿರುವ ಭ್ರೂಣಕ್ಕೆ ಹಾನಿಯುಂಟಾಗುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲದೆ ಪಪ್ಪಾಯಿ ತಿನ್ನುವುದರಿಂದ ಗರ್ಭಪಾತವಾಗುವ ಅಪಾಯವೂ ಇರುತ್ತದೆ.
ಕಾಮಾಲೆ ಹೊಂದಿರುವವರು
ಕಾಮಾಲೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಪಪ್ಪಾಯಿ ತಿನ್ನುವುದನ್ನು ತಪ್ಪಿಸಬೇಕು. ಕಾಮಾಲೆಯ ಸಮಸ್ಯೆಯನ್ನು ಹೆಚ್ಚಿಸಲು ಪಪ್ಪಾಯಿಯಲ್ಲಿ ಪಪೈನ್ ಮತ್ತು ಬೀಟಾ ಕ್ಯಾರೋಟಿನ್ ಹೆಸರಿನ ಅಂಶಗಳು ಕೆಲಸ ಮಾಡುತ್ತವೆ. ಅಂತಹವರು, ಪಪ್ಪಾಯವನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಸೇವಿಸುವುದು ಉತ್ತಮ.
ದಪ್ಪ ರಕ್ತ ಸಮಸ್ಯೆ ಹೊಂದಿರುವವರು
ಸಾಮಾನ್ಯಕ್ಕಿಂತ ಹೆಚ್ಚು ರಕ್ತ ದಪ್ಪವಿರುವ ಅನೇಕ ಜನರಿದ್ದಾರೆ. ಅಂತಹ ಜನರಿಗೆ, ವೈದ್ಯರು ರಕ್ತವನ್ನು ತೆಳುಗೊಳಿಸಲು ಔಷಧಿಗಳನ್ನು ನೀಡುತ್ತಾರೆ. ರಕ್ತ ತೆಳುವಾಗಿಸುವ ಔಷಧಿಗಳನ್ನು ತೆಗೆದುಕೊಳ್ಳುವ ಜನರು ಪಪ್ಪಾಯಿ ಸೇವನೆಯನ್ನು ತಪ್ಪಿಸಬೇಕು ಅಥವಾ ವೈದ್ಯರ ಸಲಹೆಯ ಮೇರೆಗೆ ಪಪ್ಪಾಯಿ ತಿನ್ನಬೇಕು.
ಕಡಿಮೆ ಸಕ್ಕರೆ ಅಂಶ ಹೊಂದಿರುವವರು
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಪಪ್ಪಾಯಿ ಕೂಡ ಕೆಲಸ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಔಷಧಿಗಳನ್ನು ತೆಗೆದುಕೊಳ್ಳುತ್ತಿರುವ ಜನರು ವೈದ್ಯರನ್ನು ಸಂಪರ್ಕಿಸಿದ ನಂತರ ಪಪ್ಪಾಯಿ ಸೇವಿಸಬೇಕು. ಇಲ್ಲದಿದ್ದರೆ, ಇದು ಸಮಸ್ಯೆಗಳನ್ನು ಉಂಟುಮಾಡಬಹುದು.
ಹೃದಯದ ಸಮಸ್ಯೆಗಳನ್ನು ಹೊಂದಿರುವವರು
ಯಾವುದೇ ರೀತಿಯ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಜನರು ಕೂಡ ಪಪ್ಪಾಯವನ್ನು ಅತಿಯಾಗಿ ಸೇವಿಸಬಾರದು. ಮಾಹಿತಿಯ ಪ್ರಕಾರ, ಪಪ್ಪಾಯವನ್ನು ಅತಿಯಾಗಿ ಸೇವಿಸುವುದರಿಂದ ಕಡಿಮೆ ಹೃದಯ ಬಡಿತದ ಅಪಾಯವಿದೆ. ಆದ್ದರಿಂದ, ಇದನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಸೂಚನೆ : ಇಲ್ಲಿರುವ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ನೀಡಲಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮೈದಾ ಹಿಟ್ಟು ದೇಹಕ್ಕೆ ಅಪಾಯಕಾರಿಯೇ? https://t.co/7FVEPGo9pS
— Saaksha TV (@SaakshaTv) September 28, 2021
ಕ್ಯಾನ್ಸರ್, ಹೃದಯ ಕಾಯಿಲೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಅಗಸೆ ಬೀಜಗಳ ಪ್ರಯೋಜನಗಳು https://t.co/KO091FmNrP
— Saaksha TV (@SaakshaTv) September 29, 2021
ಉತ್ತಮ ಲಾಭದ ಅಂಚೆ ಇಲಾಖೆಯ ಸೂಪರ್ ಹಿಟ್ ಎಂಐಎಸ್ ಯೋಜನೆ https://t.co/MOjDv2w6Ho
— Saaksha TV (@SaakshaTv) September 29, 2021
ರುಚಿಯಾದ ಚಿರೋಟಿ https://t.co/OmCa5Me5Ag
— Saaksha TV (@SaakshaTv) September 29, 2021
#Saakshatv #healthtips #papaya