ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡ ಶಿವಸೇನೆ ಕಡಿಮೆ ಬೆಲೆಯಲ್ಲಿ ಸಾರ್ವಜನಿಕರಿಗೆ “ಶಿವ ಭೋಜನ” ಯೋಜನೆ ಜಾರಿಗೆ ತಂದಿದೆ. ಮುಂಬೈ ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೇವಲ 10 ರೂ ಗಳಿಗೆ ಊಟ ಸಿಗಲಿದೆ. ಪ್ರಾಯೋಗಿಕವಾಗಿ 50 ಸ್ಥಳಗಳನ್ನು ಆಯ್ಕೆ ಮಾಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. ಕೇವಲ 10 ರೂಗಳಿಗೆ ಎರಡು ಚಪಾತಿ, ಅನ್ನ, ಪಲ್ಯ, ದಾಲ್ ಒಳಗೊಂಡಿರುತ್ತದೆ. ಮಧ್ಯಾಹ್ನ ‘ಶಿವ ಭೋಜನ’ ಲಭ್ಯ. ಪ್ರತಿ ಕ್ಯಾಂಟೀನ್ ನಲ್ಲಿ ನಿತ್ಯ ಕನಿಷ್ಠ 500 ಊಟ ನೀಡುವ ಗುರಿ ಹೊಂದಿದ್ದು, ಮಧ್ಯಮ ವರ್ಗ ಹಾಗೂ ಬಡ ವರ್ಗಕ್ಕೆ ಈ ಯೋಜನೆ ಅನುಕೂಲವಾಗಲಿದೆ ಎಂಬ ವಿಚಾರವನ್ನು ಸರ್ಕಾರ ವ್ಯಕ್ತಪಡಿಸಿದೆ.
ದಿನ ಭವಿಷ್ಯ (19-09-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
ದಿನ ಭವಿಷ್ಯ: 19-09-2026 1. ಮೇಷ ರಾಶಿ ವೃತ್ತಿ ಮತ್ತು ಹಣಕಾಸು: ಇಂದು ನಿಮಗೆ ಅತ್ಯಂತ ಕ್ರಿಯಾಶೀಲ ದಿನವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ವೇಗ ಮತ್ತು ನಿಖರತೆಯನ್ನು ಮೇಲಾಧಿಕಾರಿಗಳು...








