sudeep
ಹೈದರಾಬಾದ್ ಗೆ ಗುಡ್ ಬೈ ಹೇಳಿದ ಕಿಚ್ಚ : ‘ಶೂಟಿಂಗ್ ಅನುಭವ’ ಬಿಚ್ಚಿಟ್ಟ ನಟ
ಲಾಕ್ ಡೌನ್ ಬಳಿಕ ಪ್ಯಾಂಟಮ್ ಶೂಟಿಂಗ್ ಗಾಗಿ ಹೈದ್ರಾಬಾದ್ ನಲ್ಲಿ ವಾಸ್ತವ್ಯ ಹೂಡಿದ್ದ ಕಿಚ್ಚ ಸುದೀಪ್ ಅವರು ಇದೀಗ ಹೈದ್ರಾಬಾದ್ ಗೆ ಗುಡ್ ಬೈ ಹೇಳಿ ಕರ್ನಾಟಕಕ್ಕೆ ಮರಳುತ್ತಿದ್ದಾರೆ. ಆದ್ರೆ ಹೈದ್ರಾಬಾದ್ ನಲ್ಲಿ ಕಳೆದ ನೆನಪುಗಳು, ಅದ್ಭುತ ಅನುಭವಗಳನ್ನ ಕಿಚ್ಚ ಸುದೀಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಚಿಕ್ಕದಾಗಿ ಹಂಚಿಕೊಂಡಿದ್ದಾರೆ.
‘ಕರ್ನಾಟಕದಲ್ಲೇ ಶೂಟಿಂಗ್ ಮಾಡಿ’ ಎಂದ ಅಭಿಮಾನಿಗೆ ಕಿಚ್ಚ ಕೊಟ್ಟ ಉತ್ತರ ಇದು..!
ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಬಗ್ಗೆ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆಯಿದೆ. ಲಾಕ್ಡೌನ್ನಿಂದ ಸ್ವಲ್ಪ ಮಟ್ಟಿಗೆ ಸಡಿಲಿಕೆ ಸಿಗುತ್ತಿದ್ದಂತೆ ಚಿತ್ರೀಕರಣ ಆರಂಭಿಸಿದ್ದ ಫ್ಯಾಂಟಮ್, ಹೈದರಾಬಾದ್ನಲ್ಲಿ ಅದ್ಧೂರಿ ಸೆಟ್ ನಿರ್ಮಿಸಿದ್ದರು. ರಾಮೋ ಜಿ ಫಿಲಂ ಸಿಟಿಯಲ್ಲಿ ನಿರಂತರವಾಗಿ ಚಿತ್ರೀಕರಣ ಮಾಡುತ್ತಿದ್ದ ಫ್ಯಾಂಟಮ್ ಕೊನೆಗೂ ಹೈದರಾಬಾದ್ ಶೆಡ್ಯೂಲ್ ಮುಗಿಸಿದೆ. ‘ಪ್ಯಾಂಟಮ್’ ಚಿತ್ರಕ್ಕಾಗಿ ಹಲವು ತಿಂಗಳಿನಿಂದ ಹೈದರಾಬಾದ್ನಲ್ಲಿ ಚಿತ್ರೀಕರಣ ಮಾಡುತ್ತಿರುವ ಕಿಚ್ಚ ಸುದೀಪ್, ಕೊನೆಗೂ ಶೂಟಿಂಗ್ ಮುಗಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್ ಅವರು, ”ಹೈದರಾಬಾದ್ ನ ಸುದೀರ್ಘ ಶೆಡ್ಯೂಲ್ ಈಗತಾನೆ ಮುಕ್ತಾಯವಾಗಿದೆ. ಇದೊಂದು ಅದ್ಭುತ ಅನುಭವ. ಯಾರೂ ನಿರೀಕ್ಷೆ ಮಾಡದಿದ್ದಾಗ ಶೂಟಿಂಗ್ ಆರಂಭಿಸಿ, ಯೋಜನೆಯಂತೆ ಮುಗಿಸಿದ್ದು ನಿಜಕ್ಕೂ ಒಂದು ಸಾಧನೆ. ಕೊನೆಯ ಶೆಡ್ಯೂಲ್ ಸದ್ಯದಲ್ಲೇ ಪ್ರಾರಂಭವಾಗಲಿದೆ” ಎಂದು ಬರೆದುಕೊಂಡಿದ್ದಾರೆ.
ಇತ್ತ ಕಿಚ್ಚ ಸುದೀಪ್ ಅಭಿನಯದ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ‘ಕೋಟಿಗೊಬ್ಬ 3’ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಸಂಪೂರ್ಣ ಕೆಲಸ ಮುಗಿದಿದ್ದು, ಕೊರೊನಾ ಹಾವಳಿ ಕೊಂಚ ಕಡಿಮೆಯಾಗ್ತಿದ್ದಂತೆ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.
ಇನ್ನೂ ಪ್ಯಾಂಟಮ್ ಸಿನಿಮಾ ಬಗ್ಗೆ ಹೇಳೋದಾದ್ರೆ, ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ಬಗ್ಗೆ ಅತ್ಯಂತ ಹೆಚ್ಚು ಕ್ಯೂರಿಯಾಸಿಟಿ ಕ್ರಿಯಢಟ್ ಮಾಡಿದ್ದು, ಮೂಲಗಳ ಪ್ರಕಾರ , ಈ ವಿಕ್ರಾಂತ್ ರೋಣ ರೋಣ ಪೊಲೀಸ್ ಅಧಿಕಾರಿ ಎಂದು ಹೇಳಲಾಗ್ತಿದೆ. ಹೀಗಾಗಿ ಸುದೀಪ್ ಅವರನ್ನು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಲಿದ್ದು, ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel