ADVERTISEMENT
Tuesday, July 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಭಾರತಕ್ಕಿಂತ ಹೆಚ್ಚಾಗಿ ಚೀನಾವನ್ನ ದ್ವೇಷಿಸುವ ದೇಶ ಯಾವುದು ಗೊತ್ತಾ…? ಈ ದೇಶದಲ್ಲಿ ನಂಬರ್ 4ನೇ ಫ್ಲೋರ್ ಇರೋದೇ ಇಲ್ಲ..!

Namratha Rao by Namratha Rao
September 30, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಭಾರತಕ್ಕಿಂತ ಹೆಚ್ಚಾಗಿ ಚೀನಾವನ್ನ ದ್ವೇಷಿಸುವ ದೇಶ ಯಾವುದು ಗೊತ್ತಾ…? ಈ ದೇಶದಲ್ಲಿ ನಂಬರ್ 4ನೇ ಫ್ಲೋರ್ ಇರೋದೇ ಇಲ್ಲ..!

ತೈವಾನ್ … ಚೀನಾದ್ದೇ ಸಂಸ್ಕೃತಿ , ಒಂದೇ ಭಾಷೆ ಆದ್ರೂ ಚೀನಾದ ವಿರೋಧಿ ದೇಶ. ತೈವಾನ್ ಅನ್ನ ಅನೇಕರು ಚೀನಾ ಅಂತಲೇ ಭಾವಿಸುತ್ತಾರೆ.  ಅಲ್ಲಿನ ಸಿನಿಮಾಗಳು , ಅಲ್ಲಿನ ಜನರನ್ನ ಚೀನಾದವರಂತಲೇ ಕರೆಯುತ್ತಾರೆ. ಆದ್ರೆ ಇದು ಅಲ್ಲಿನ ಜನರಿಗೆ ಕೊಂಚವೂ ಇಷ್ಟವಾಗೋದಿಲ್ಲ. ಕಾರಣ ತೈವಾನ್ ಚೀನಾ ಎರಡೂ ಕೂಡ ಬೇರೆ ಬೇರೆ ದೇಶಗಳು. ಸಂಸ್ಕೃತಿ ಬಾಷೆ ಒಂದೇ ಆದ್ರೂ ಎರಡೂ ದೇಶಗಳ ನಡುವೆ ಅಜಗಜಾಂತರ ಅಂತರವಿದೆ. ತೈವಾನ್ ಕೇವಲ ತಾನಾಯ್ತು. ಜನ್ನ ದೇಶದ ಜನರಾಯ್ತು ಅಂತ ಇದ್ರೆ ಚೀನಾ ಪ್ರಪಂಚನ್ನ ಹೇಗೆಲ್ಲಾ ನಾಶ ಮಾಡಬಹುದು ಅನ್ನೋ ದಾರಿಗಳನ್ನ ಹುಡುಕುತ್ತಿರುತ್ತೆ. ಹಾಗೆ ನೋಡೋದಾದ್ರೆ ಪ್ರಸ್ತುತ 2-3 ವರ್ಷಗಳಿಮದ ಇಡೀ ವಿಶ್ವ ಚೀನಾದಿಂದಲೇ ಸಂಕಷ್ಟಕ್ಕೆ ಸಿಲುಕಿರೋದು ಗೊತ್ತಿದೆ. ಚೀನಾದ ಕೊರೊನಾ ವಿಶ್ವವನ್ನ ಕಾಡಿದೆ. ಇದು ಕೂಡ ಚೀನಾದ ಬಯೋಟಿಕ್ ವಾರ್ ಅಂತಲೇ ವಾದಗಳಿದ್ರು ಕಪಟಿ ಚೀನಾ ಒಪ್ಪೋದಕ್ಕೆ ತಯಾರಿಲ್ಲ.

Related posts

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

July 28, 2026
ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

July 28, 2026

ತೈವಾನ್ ಹಾಗೂ ಬಾರತದ ನಡುವೆ ಸಾಕಷ್ಟು ಸ್ವಾಮ್ಯತೆಗಳಿವೆ. ಆದ್ರೆ ಒಂದು ವಿಚಾರದಲ್ಲಿ ಎರೆಡೂ ದೇಶಗಳ ನಿಲುವು ಒಂದೇ. ಪ್ರಸ್ತುತ ಭಾರತ ಹಾಗೂ ತೈವಾನ್ ಎರೆಡೂ ದೇಶಗಳು ಚೀನಾದ ವೈರಿ ರಾಷ್ಟ್ರಗಳೇ.  ಚಿಕ್ಕ ದೇಶವೇ ಆದ್ರೂ ತುಂಬ ಸುಂದರ , ಶಕ್ತಿಯುತ ರಾಷ್ಟ್ರಗಳಲ್ಲಿ ಒಂದು ತೈವಾನ್. ಈ ದೇಶದ ಅನೇಕ ವಿಶೇಷತೆಗಳು , ಕಾನೂನುಗಳು ಸಂಪ್ರದಾಯಗಳ ಬಗ್ಗೆ  ತಿಳಿದುಕೊಳ್ಳೋಣ.

ಏಷ್ಯಾದ ಸುಂದರ ದೇಶ ತೈವಾನ್.. ಚೀನಾದ ಬಹುದೊಡ್ಡ ಶತ್ರು ದೇಶ ಚೀನಾ. ಕಾರಣ ಚೀನಾ ತೈವಾನ್ ದೇಶವನ್ನ ತನ್ನದೇ ದೇಶದ ಭಾಗ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲಲ ತೈವಾನ್ ಅನ್ನ ಹಾಂಗ್ ಕಾಂಗ್ ನ ರೀತಿಯಲ್ಲೇ ಒನ್ ನೇಷನ್ 2 ಸಿಸ್ಟಮ್ಸ್ ನ ರೀತಿಯಲ್ಲಿ ಇಟ್ಟುಕೊಳ್ಳುವುದು ಚೀನಾದ ಉದ್ದೇಶ.  ಮತ್ತೊಂದೆಡೆ ತೈವಾನ್ ಯಾವುದೇ ಕಾರಣಕ್ಕೂ ಚೀನಾದ ಭಾಗವಾಗುವುದಕ್ಕೆ ತಯಾರಿಲ್ಲ.

ಈ ದೇಶದ ರಾಜಧಾನಿ ತೈಪೆ0020

ತೈವಾನ್ ನ ಜನಸಂಖ್ಯೆ ಸುಮಾರು 3 ಕೋಟಿ. ಈ ಪೈಕಿ 84 % ರಷ್ಟು ಜನ ತೈವಾನಿಗಳಾದ್ರೆ 14 % ರಷ್ಟು ಜನ ಚೀನಾದವರು. 2 % ರಷ್ಟು ಜನ ಇಂಡೋನೇಷ್ಯಾದವರಾಗಿದ್ದಾರೆ.  ಈ ದೇಶದ ಸುಮಾರು 90 % ಜನರು ಬೌದ್ಧ ಧರ್ಮವನ್ನ ಅನುಸರಿಸಿದ್ರೆ ಉಳಿದ 10 % ರಷ್ಟು ಜನರು ಅನ್ಯ ಧರ್ಮೀಯರಾಗಿದ್ದಾರೆ.

ತೈವಾನ್ ದೇಶವನ್ನ 1590 ರಲ್ಲಿ ಪೋರ್ಚುಗಲ್ ಜನರು ಪತ್ತೆಹಚ್ಚಿದ್ದರು. ಆದ್ರೆ ಇದಕ್ಕೂ ಮುಂಚೆ ಚೀನಾ ಈ ದೇಶದ ಬಗ್ಗೆ ಮಾತನಾಡಿಕೊಂಡು ತಿರುಗುತ್ತಿತ್ತು ಎನ್ನಲಾಗಿದೆ. ಆದ್ರೆ ಇದೊಂದು ಮಣ್ಣಿನ ದ್ವೀಪವಷ್ಟೇ. ಈ ದ್ವೀಪ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡು ತಿರುತ್ತಿತ್ತು. ಕೊಚ್ಚೆ ಅಂತ ಹೇಳಿಕೊಳ್ತಿತ್ತು ಎನ್ನಲಾಗಿದೆ. ಆದ್ರೆ ಇಂದು ಅದೇ ಚೀನಾ ತೈವಾನ್ ಅನ್ನ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಾನಾ ಕಸರತ್ತುಗಳನ್ನ ಮಾಡ್ತಿದೆ.

ಈ ದೇಶದಲ್ಲಿ ಪ್ರತಿ ವರ್ಷ ಸುಮಾರು 1000 ಕ್ಕೂ ಅಧಿಕ ಭೂಕಂಪನ ಸಂಭವಿಸುತ್ತದೆ. ಈ ದೇಶದಲ್ಲಿನ ಟೈನನ್ ನಗರ ತೈವಾನ್ ನ ಅತಿ ಪ್ರಾಚೀನ ನಗರಗಳಲ್ಲಿ ಒಂದು. ತೈವಾನ್ ನಲ್ಲಿ ನಂಬರ್ 4 ಅಶುಭದ ಸಂಕೇತ ಅಂತ ಪರಿಗಣಿಸುತ್ತಾರೆ. ಹೋಟೆಲ್ ಇರಲಿ , ಇಲ್ಲಿನ ರೆಸ್ಟೋರೆಂಟ್ ಗಳಾಗಲಿ , ಲಿಫ್ಟ್ ಗಳೇ ಆಗಲೇ  ಎಲ್ಲೂ ಕೂಡ 4ನೇ ಫ್ಲೋರ್  ಕಾಣಿಸೋದಿಲ್ಲ. ನೇರವಾಗಿ 3 ಆದ ನಂತರ 5, 6  ಹೀಗೆ ಸಂಖ್ಯೆಗಳು ಮುಂದುವರೆಯುತ್ತದೆ. ಇಲ್ಲಿನ ಜನರ ಪ್ರಕಾರ ನಂಬರ್ 4 ದೆವ್ವ ಭೂತ ಪ್ರೇತಾತ್ಮಗಳ ಸಂಕೇತವಾಗಿದೆ. 2009ರಲ್ಲಿ ಈ ದೇಶದಲ್ಲಿ ಭೀಕರ ಟೈಫೂನ್ ಸಂಭವಿಸಿತ್ತು. ಭಯಾನಕ ಮೋರೋಕಾಡ್ ಟೈಫೂನ್ ನಿಂದಾಗಿ ಸುಮಾರು 700 ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದರು. ಅನೇಕರು ನಾಪತ್ತೆಯಾಗಿದ್ರು.

ಮತ್ತೊಂದು ನಂಬಲು ಅಸಾಧ್ಯವಾದ ಆಶ್ಚರ್ಯಕರ  ಸಂಗತಿ ಅಂದ್ರೆ ಈ ಇಡೀ ದೇಶವನ್ನ ಕೇವಲ 8 ಗಂಟೆಯೊಳಗೆ ಸುತ್ತು ಹೊಡಡೆಯಬಹುದು. ಈ ದೇಶದಲ್ಲಿ ಬಹುತೇಕ ಎಲ್ಲಾ ಮಹಿಳೆಯರು   ಕೂಡ ವಿದ್ಯಾವಂತರೇ ಆಗಿದ್ದು, ಪ್ರತಿಯೊಬ್ಬರು ಕೂಡ ಹೊರಗಡೆ ಕೆಲಸ ಮಾಡುವವರೇ ಆಗಿದ್ದಾರೆ. ಅಂದ್ರೆ ಸುಮಾರು 4 % ರಷ್ಟು ಮಹಿಳೆಯರು ಮಾತ್ರವೇ ಹೌಸ್ ವೈಫ್ ಗಳಿದ್ದಾರೆ.

ತೈಳ್ಯಾಂಡ್ ನಲ್ಲಿನ ಪೋರ್ಕ್ ರೈಸ್ ಇಡೀ ವಿಶ್ವಾದ್ಯಂತ ಫೇಮಸ್. ಇಲ್ಲಿ ಸಿಗುವಂತಹ ಪೋರ್ಕ್ ರೈಸ್ ವಿಶ್ವದಲ್ಲಿ ಮತ್ತೆಲ್ಲೂ ಸಿಗಲ್ಲ ಅಂತ  ಹೇಳಲಾಗುತ್ತದೆ. ಇನ್ನೂ ಸಸ್ಯಹಾರಿಗಳಿಗೂ ಕೂಡ ಇಲ್ಲಿ ಸಾಕಷ್ಟು ಸ್ವಾದಿಷ್ಟ ಆಹಾರಗಳು ಸಿಗುತ್ತವೆ. ಇಲ್ಲಿನ ರೂಸ್ ಐಸ್ ಕ್ರೀಮ್ ವರ್ಲ್ಡ್ ಫೇಮಸ್ ಡೆಸರ್ಟ್.

ಇಲ್ಲಿನ ಜನರ ಪ್ರಕಾರ ಬಿಳಿ ಬಣ್ಣ ನಿರಾಶೆಯ ಹತಾಶೆಯ ಪ್ರತೀಕ ಎನ್ನಲಾಗುತ್ತದೆ.  ಹೀಗಾಗಿ ಬಹುತೇಕರು ಬಹುತೇಕ ಸಂದರ್ಭಗಳಲ್ಲಿ ಹೆಚ್ಚಾಗಿ ಬಿಳಿ ಬಣ್ಣ ಧರಿಸುವುದಿಲ್ಲ.  ಯಾರಾದ್ರೂ ಸಾವನಪ್ಪಿದ್ದು, ಅವರ ಅಂತಿಮ ಸಂಸ್ಕಾರಕ್ಕೆ ಹೋದಂತಹ ಸಮಯದಲ್ಲಿ ಮಾತ್ರ ಜನ ಬಿಳಿ ಬಣ್ಣದ ಬಟ್ಟೆ ಧರಿಸುತ್ತಾರೆ.

ಇನ್ನೂ ಚೀನಾದ ಸಂಪ್ರದಾಯದಂತೆಯೇ ಈ ದೇಶದಲ್ಲಿ ಮದುವೆಯಲ್ಲಿ  ವಧುವರರು ಕೆಂಪು ಬಣ್ಣದ ಬಟ್ಟೆ ಧರಿಸಿರುತ್ತಾರೆ. ಈ ವಿಚಾರದಲ್ಲೂ ಭಾರತಕ್ಕೆ ತೈವಾನ್ ಭಿನ್ನವಾಗಿಲ್ಲ. ಕಾರಣ ನಮ್ಮಲ್ಲೂ ಸಾಮಾನ್ಯವಾಗಿ ಯಾರಾದ್ರೂ ಮೃತಪಟ್ಟಿದ್ದು, ಅಂತಿಮ ದರ್ಶನಕ್ಕೆ ತೆರಳುವಾಗ ಬಿಳಿ ಬಣ್ಣದ ಬಟ್ಟೆಯನ್ನೇ ಧರಿಸುತ್ತೇವೆ. ಮದುವೆಯಲ್ಲಿ ಸಾಮಾನ್ಯವಾಗಿ ಅದ್ರಲ್ಲೂ ಉತ್ತರ ಭಾರತದ ಭಾಗದಲ್ಲಿ ಕೆಂಪು ಬಟ್ಟೆಗಳನ್ನ ಧರಿಸಿರೋದನ್ನ ನೋಡಬಹುದು.

ನಮ್ಮ ದೇಶದ ತರಹವೇ ಈ ದೇಶದಲ್ಲಿ ಮದುವೆಗೆ ಮುಂಚೆ ಜಾಕತ ಹೊಂದಾಣಿಕೆ ಮಾಡಿ ಯಾವ ದಿನ ಯಾವ ಸಮಯದಲ್ಲಿ ಮದುವೆ ಮಾಡಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ. ಇನ್ನೂ ಈ ದೇಶದ ಬಗ್ಗೆ ಮತ್ತೊಂದು ಖುಷಿಯ ವಿಚಾರವೆಂದ್ರೆ ಈ ದೇಶದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಅಲ್ಲಿನ ಸರ್ಕಾರ ಉಚಿತ ಚಿಕಿತ್ಸೆಯ ಸೌಲಭ್ಯ ನೀಡಿದೆ. ಯಾವುದೇ ನಾಗರಿಕರಿಗೂ ಏನೇ ಆದ್ರೂ ಸಹ  ಒಂದು  ಫೋನ್ ಕಾಲ್ ಮಾಡಿದ್ರೆ ಸಾಕು ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸೌಲಭ್ಯ ಒದಗಿಸಲಾಗುತ್ತದೆ.

ತೈವಾನ್ ಕರೆನ್ಸಿ –ನ್ಯೂ ತೈವಾನ್ ಡಾಲರ್ – ಭಾರತದ 2.67  ರೂಪಾಯಿಗೆ ಸಮ

ತೈಪೆ , ರೈಲಿ ಬೀಚ್ , ಕೋಹ್ ಪಿಪಿ ಚೀಚ್ , ಗ್ರ್ಯಾಂಡ್ ಪ್ಯಾಲೆಸ್ ಬ್ಯಾಂಗ್ ಕಾಕ್ , ಸಂಡೇ ವಾಕಿಂಗ್ ಸ್ಟ್ರೀಟ್ ಚಿಯಾಂಗ್ ಮಿಯಾಂಗ್ , ಪೈ , ಆಯುಟ್ಟಯ್ಯಾ ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ಪ್ರವಾಸಿಇಗರು ವಿಸಿಟ್ ಮಾಡಬಹುದು.

ಕನಸಿನಲ್ಲಿ ರಾಕ್ಷಸರು , ದೆವ್ವ, ಭೂತ ಕಾಣಿಸಿದರೆ ಅದರ ಅರ್ಥವೇನು..?

ಕನಸಿನಲ್ಲಿ ದುಡ್ಡು ಕಾಣಿಸಿದ್ರೆ ಅದರ ಅರ್ಥವೇನು ಗೊತ್ತಾ..?

‘ನಯಾಗರಾ’ ದೇಶ ಕೆನಡಾದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳು..!

ಕನಸಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಅದರ ಅರ್ಥವೇನು..?

ಮರುಭೂಮಿಯಲ್ಲಿ ಸಿಲುಕಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?

ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ  ಬಹಮಾಸ್ ನ ಬಗ್ಗೆ INTERSTING FACTS..!  

ಕಾಡಿನೊಳಗೆ ಸಿಲುಕಿರುವ ಕನಸು ಬಿದ್ರೆ ಅದರ ಅರ್ಥವೇನು ಗೊತ್ತಾ..?

ಈ ದೇಶದಲ್ಲಿ ಒಮ್ಮೆ ಮದುವೆಯಾದ್ರೆ ಮುಗೀತು… ಡಿವೋರ್ಸ್ ಪಡೆಯುವಂತಿಲ್ಲ..! ಜ್ವಾಲಾಮುಖಿ ದೇಶ ಫಿಲಿಫೈನ್ಸ್ ಬಗೆಗಿನ INTERESTING FACTS..!  

ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

Tags: #saakshatvinteresting factsthaiwantourismtravellWorld
ShareTweetSendShare
Join us on:

Related Posts

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

‘ಸಿದ್ದರಾಮಯ್ಯ ನಿವೃತ್ತಿಯಾದರೆ ಕಾಂಗ್ರೆಸ್‌ಗೆ ಕಷ್ಟ’: ಎಚ್.ಸಿ. ಬಾಲಕೃಷ್ಣ

by Shwetha
July 28, 2026
0

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ರಾಜಕೀಯ ನಿವೃತ್ತಿಯ ಸುಳಿವು ನೀಡಿದ ಬೆನ್ನಲ್ಲೇ, ಕಾಂಗ್ರೆಸ್‌ನಲ್ಲಿ ಈ ಕುರಿತು ಚರ್ಚೆಗಳು ಜೋರಾಗಿವೆ. ಈ...

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

ಸಿ.ಟಿ. ರವಿ ವಿರುದ್ಧದ FIR ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ

by Shwetha
July 28, 2026
0

ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧ ದಾಖಲಾಗಿದ್ದ FIR ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ...

ಖರ್ಗೆ ನಂತರ ಸಿದ್ದರಾಮಯ್ಯ ರಾಷ್ಟ್ರೀಯ ಕೈ ಸಾರಥಿ? ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಶಿವಲಿಂಗೇಗೌಡರ ಸ್ಫೋಟಕ ಭವಿಷ್ಯವಾಣಿ

ಖರ್ಗೆ ನಂತರ ಸಿದ್ದರಾಮಯ್ಯ ರಾಷ್ಟ್ರೀಯ ಕೈ ಸಾರಥಿ? ಲೋಕಸಭೆ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಶಿವಲಿಂಗೇಗೌಡರ ಸ್ಫೋಟಕ ಭವಿಷ್ಯವಾಣಿ

by Shwetha
July 28, 2026
0

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಕುರಿತು ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಮಹತ್ವದ ಸುಳಿವು ನೀಡಿದ್ದಾರೆ. ಸಿದ್ದರಾಮಯ್ಯ ಕೇವಲ ರಾಜ್ಯಕ್ಕೆ...

ರಾಜಕೀಯ ಮೀರಿ ನಿಂತ ಮೋದಿ ಅಭಿಮಾನ: ಮೋದಿಯವರೇ ಇಷ್ಟೊಂದು ನಿಂದನೆ ಹೇಗೆ ಸಹಿಸಿಕೊಳ್ಳುತ್ತೀರಿ? -ಪ್ರತಿಭಟನೆ ಹೆಸರಲ್ಲಿ ನಿಂದಿಸುವವರ ವಿರುದ್ಧ ಯುವತಿಯ ಕಣ್ಣೀರಿನ ಪ್ರಶ್ನೆ

ರಾಜಕೀಯ ಮೀರಿ ನಿಂತ ಮೋದಿ ಅಭಿಮಾನ: ಮೋದಿಯವರೇ ಇಷ್ಟೊಂದು ನಿಂದನೆ ಹೇಗೆ ಸಹಿಸಿಕೊಳ್ಳುತ್ತೀರಿ? -ಪ್ರತಿಭಟನೆ ಹೆಸರಲ್ಲಿ ನಿಂದಿಸುವವರ ವಿರುದ್ಧ ಯುವತಿಯ ಕಣ್ಣೀರಿನ ಪ್ರಶ್ನೆ

by Shwetha
July 28, 2026
0

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ರಾಜಕೀಯ ವಲಯದಲ್ಲಿ ಟೀಕೆಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವುದು ಹೊಸದೇನಲ್ಲ. ಆದರೆ, ಈ ಟೀಕೆಗಳಿಂದ ನೊಂದಿರುವ ಯುವತಿಯೊಬ್ಬರು ಪ್ರಧಾನಿ ಮೋದಿಯವರನ್ನು...

ಅಂದು ಅವಹೇಳನ ಇಂದು ಆಶ್ರಯ: ನಂದನ್ ನಿಲೇಕಣಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಅವಕಾಶವಾದಿ ರಾಜಕೀಯವನ್ನು ಪ್ರಶ್ನಿಸಿದ ಬಿ.ಕೆ.ಹರಿಪ್ರಸಾದ್

ಅಂದು ಅವಹೇಳನ ಇಂದು ಆಶ್ರಯ: ನಂದನ್ ನಿಲೇಕಣಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಅವಕಾಶವಾದಿ ರಾಜಕೀಯವನ್ನು ಪ್ರಶ್ನಿಸಿದ ಬಿ.ಕೆ.ಹರಿಪ್ರಸಾದ್

by Shwetha
July 28, 2026
0

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವದ ದ್ವಂದ್ವ ನಿಲುವನ್ನು ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ತೀವ್ರವಾಗಿ ತರಾಟೆಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram